ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸಿದಾಗ ಸಾವುಗಳ ಸಂಭವ ಸಹಜ: ನಮೀಬಿಯಾ ರಾಯಭಾರಿ

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ...
ಚೀತಾಗಳು
ಚೀತಾಗಳು

ಕೋಲ್ಕತ್ತಾ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಹಲವು ಚೀತಾಗಳನ್ನು ಸಾವನ್ನಪ್ಪಿದ್ದು ಈ ಮಾತನಾಡಿರುವ ಭಾರತದ ನಮೀಬಾಯ ರಾಯಭಾರಿ ಗೇಬ್ರಿಯಲ್ ಸಿನಿಂಬೊ ಅವರು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಕಳುಹಿಸುವಾಗ ಸಾವುಗಳು ಸಾವುಗಳು ಸಹಜವಾಗಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ.

ಚೀತಾಗಳು ಭಾರತದ ಪರಿಸರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಈ ವರ್ಷದ ಮಾರ್ಚ್‌ನಿಂದ ಎರಡು ದೇಶಗಳಿಂದ ತಂದ 20 ಚಿರತೆಗಳ ಪೈಕಿ ಒಂಬತ್ತು ಚಿರತೆಗಳು ಸಾವನ್ನಪ್ಪಿವೆ. ನೀವು ಹೊಸ ಪರಿಸರಕ್ಕೆ ಪ್ರಾಣಿಗಳನ್ನು ಪರಿಚಯಿಸುವಾಗ, ಸಾವುನೋವುಗಳಂತಹ ಕೆಲವು ಸವಾಲುಗಳು ಇದ್ದೇ ಇರುತ್ತದೆ. ಇದು ಈ ರೀತಿಯ ಯಾವುದೇ ಯೋಜನೆಯ ಒಂದು ಭಾಗವಾಗಿರುತ್ತದೆ ಎಂದು ಸಿನಿಂಬೊ ಹೇಳಿದರು.

ಪ್ರಾಜೆಕ್ಟ್ ಚೀತಾ ಅಡಿಯಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿದ್ದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಈ ವೇಳೆ ನಮೀಬಿಯಾದಿಂದ ಚೀತಾ 'ಜ್ವಾಲಾ'ಗೆ ನಾಲ್ಕು ಮರಿಗಳು ಜನಿಸಿದವು. ಈ 24 ಚೀತಾಗಳ ಪೈಕಿ ಮೂರು ಮರಿಗಳು ಸೇರಿದಂತೆ ಒಂಬತ್ತು ಸಾವನ್ನಪ್ಪಿವೆ.

ದೊಡ್ಡ ಬೆಕ್ಕು ಜಾತಿಯ ಚೀತಾಗಳನ್ನು ಭಾರತದಲ್ಲಿ ಮತ್ತೆ ಮರುಪರಿಚಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ಒಂದು ವಿನೂತನ ಯೋಜನೆಯಾಗಿದೆ. ಪರಸ್ಪರ ಬೆಂಬಲಿಸುವ ನಮ್ಮ ಸಂಬಂಧವನ್ನು ಗಮನಿಸಿದರೆ ನಮೀಬಿಯಾ ಈ ಉಪಕ್ರಮದಿಂದ ಸಾಕಷ್ಟು ಸಂತಸಗೊಂಡಿದೆ ಎಂದು ಸಿನಿಂಬೊ ಹೇಳಿದರು.

ಆಗಸ್ಟ್ 2ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಂಬತ್ತನೆಯ ಚಿರತೆಯ ಕೊನೆಯ ಸಾವು ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com