ಗ್ಯಾಂಗ್ ಸ್ಟರ್ ಅತೀಕ್ ಹಂತಕರಿಗೆ 14 ದಿನಗಳ ನ್ಯಾಯಾಂಗ ಬಂಧನ

ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕೊಂದ ಮೂವರು ದುಷ್ಕರ್ಮಿಗಳನ್ನು ಪ್ರಯಾಗರಾಜ್‌ನ ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಗ್ಯಾಂಗ್ ಸ್ಟರ್ ಅತೀಕ್, ಆರೋಪಿಗಳು
ಗ್ಯಾಂಗ್ ಸ್ಟರ್ ಅತೀಕ್, ಆರೋಪಿಗಳು
Updated on

ಪ್ರಯಾಗ್ ರಾಜ್: ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕೊಂದ ಮೂವರು ದುಷ್ಕರ್ಮಿಗಳನ್ನು ಪ್ರಯಾಗರಾಜ್‌ನ ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಶನಿವಾರ ರಾತ್ರಿ ಪ್ರಯಾಗರಾಜ್‌ನ ಶಾಹಗಂಜ್ ಪ್ರದೇಶದ ಆಸ್ಪತ್ರೆಯೊಂದರ ಹೊರಗೆ ಅತೀಕ್ ಮತ್ತು ಅವನ ಸಹೋದರನನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಹಂತಕರಾದ ಬಂಡಾದ ಲುವ್ಲೇಶ್ ತಿವಾರಿ (22) ಹಮೀರ್‌ಪುರದ ಮೋಹಿತ್ (23) ಅಲಿಯಾಸ್ ಸನ್ನಿ (23) ಮತ್ತು ಕಾಸ್ಗಂಜ್‌ನ ಅರುಣ್ ಕುಮಾರ್ ಮೌರ್ಯ (18) ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿ ಬಿದಿದ್ದರು. 

ಅತೀಕ್-ಅಶ್ರಫ್ ಹತ್ಯೆಯ ಮೂವರು ಆರೋಪಿಗಳನ್ನು ಪ್ರಯಾಗ್‌ರಾಜ್‌ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಅಹ್ಮದ್ ಪರ ವಕೀಲ ಮನೀಶ್ ಖನ್ನಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com