'ಆಪರೇಷನ್ ಕಾವೇರಿ': ಸುಡಾನ್‌ನಿಂದ ದೆಹಲಿಗೆ ವಿಮಾನದಲ್ಲಿ ಆಗಮಿಸಿದ 360 ಭಾರತೀಯರ ಮೊದಲ ತಂಡ

ಸಂಘರ್ಷ ಪೀಡಿತ ಸುಡಾನ್‌ನಿಂದ 360 ಮಂದಿ ಭಾರತೀಯರ ಮೊದಲ ತಂಡ ಬುಧವಾರ ಸಂಜೆ ರಾಜಧಾನಿ ದೆಹಲಿಗೆ ಬಂದಿಳಿದಿದೆ.
ದೆಹಲಿಗೆ ಬಂದಿಳಿದ ಸುಡಾನ್ ನಲ್ಲಿದ್ದ ಭಾರತೀಯರು
ದೆಹಲಿಗೆ ಬಂದಿಳಿದ ಸುಡಾನ್ ನಲ್ಲಿದ್ದ ಭಾರತೀಯರು

ನವದೆಹಲಿ: ಸಂಘರ್ಷ ಪೀಡಿತ ಸುಡಾನ್‌ನಿಂದ 360 ಮಂದಿ ಭಾರತೀಯರ ಮೊದಲ ತಂಡ ಬುಧವಾರ ಸಂಜೆ ರಾಜಧಾನಿ ದೆಹಲಿಗೆ ಬಂದಿಳಿದಿದೆ.

"ಆಪರೇಷನ್ ಕಾವೇರಿ" ಕಾರ್ಯಾಚರಣೆಯ ಅಡಿಯಲ್ಲಿ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದ್ದು, ಇದರ ಮೊದಲ ತಂಡ ಇಂದು ದೆಹಲಿಗೆ ಬಂದಿಳಿದಿದೆ. "ಆಪರೇಷನ್ ಕಾವೇರಿ" ಎಂಬುದು ಸುಡಾನ್ ಸೇನೆ ಮತ್ತು ಅರೆಸೈನಿಕ ಗುಂಪುಗಳು ಹೋರಾಡುತ್ತಿರುವ ಸುಡಾನ್‌ನಿಂದ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ.

ನಿನ್ನೆಯಷ್ಟೇ  ಭಾರತೀಯ ನೌಕಾಪಡೆಯ ಹಡಗು ಸುಡಾನ್ ನಿಂದ 278 ನಾಗರಿಕರನ್ನು ರಕ್ಷಿಸಿ ದೇಶಕ್ಕೆ ಕರೆತಂದಿತ್ತು. ಇದಾದ ಒಂದು ದಿನದ ನಂತರ ಭಾರತೀಯ ನಾಗರಿಕರನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಬಂದಿಳಿದಿದೆ. ಆ ಮೂಲಕ ಸುಡಾನ್ ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದವರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು, 'ಭಾರತವು ನಿಮ್ಮನ್ನು ಮರಳಿ ಸ್ವಾಗತಿಸುತ್ತಿದ್ದು, #OperationKaveri ಮೊದಲ ವಿಮಾನವು ದೆಹಲಿಯನ್ನು ತಲುಪಿದ್ದು, 360 ಭಾರತೀಯ ಪ್ರಜೆಗಳು ತಾಯ್ನಾಡಿಗೆ ಬಂದಿಳಿದಿದ್ದಾರೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಜೈಶಂಕರ್ ಅವರು ಸೌದಿ ಅರೇಬಿಯಾ ಸಹವರ್ತಿಯೊಂದಿಗೆ ಮಾತನಾಡಿದ ಕೆಲವು ದಿನಗಳ ನಂತರ ತೆರವು ಕಾರ್ಯಾಚರಣೆ ಆರಂಭವಾಗಿದೆ. ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. 

ದೇಶಗಳು ತಮ್ಮ ನಾಗರಿಕರನ್ನು ದೇಶದಿಂದ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿರುವಾಗ ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನಲ್ಲಿ ಹೋರಾಡುತ್ತಿರುವ ಬಣಗಳು ಸೋಮವಾರ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡವು.

ಭಾರತವು ಜೆಡ್ಡಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದ್ದು, ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಎಲ್ಲಾ ಭಾರತೀಯರನ್ನು ಸೌದಿ ಅರೇಬಿಯಾದ ಕರಾವಳಿ ನಗರಕ್ಕೆ ಕರೆದೊಯ್ಯಲಾಗಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜೆಡ್ಡಾದಲ್ಲಿದ್ದಾರೆ. ಇದಕ್ಕೂ ಮೊದಲು, ಶನಿವಾರ ಸೌದಿ ಅರೇಬಿಯಾವು "ಸಹೋದರ ಮತ್ತು ಸ್ನೇಹಪರ" ಮಿತ್ರ ರಾಷ್ಟ್ರಗಳ 66 ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ಹೇಳಿದೆ, ಇದರಲ್ಲಿ ಸುಡಾನ್‌ನಲ್ಲಿದ್ದ ಕೆಲವು ಭಾರತೀಯರು ಸೇರಿದ್ದಾರೆ ಎಂದು ತಿಳಿದುಬಂದಿದೆ.

WHO ಪ್ರಕಾರ, ಏಪ್ರಿಲ್ ಮಧ್ಯದಿಂದ ಸುಡಾನ್‌ನ ಸೈನ್ಯ ಮತ್ತು ಕ್ಷಿಪ್ರ ಬೆಂಬಲ ಪಡೆಗಳ (RSF) ಅರೆಸೈನಿಕ ನಡುವಿನ ಯುದ್ಧಗಳು ಕನಿಷ್ಠ 459 ಜನರನ್ನು ಕೊಂದು 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com