ಮಣಿಪುರ ಹಿಂಸಾಚಾರ: ಮಹಿಳೆಯರ ತಲೆಗೂದಲು, ಕತ್ತು ಸೀಳಿದ ವಿಡಿಯೋಗಳನ್ನು ನೋಡಿದ್ದೇವೆ- ಟಿಎಂಸಿ ಸಂಸದೆ

ಸಂಸತ್ ನಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯದ ವೇಳೆ ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೋಲಿ ಗೋಶ್ ದಸ್ತಿದಾರ್‌ ಅವರು ಮಣಿಪುರ ಹಿಂಸಾಚಾರ ಕುರಿತಂತೆ ಕೆಲವು ಭಯಾನಕತೆಯನ್ನು ವಿವರಿಸಿದ್ದಾರೆ.
ಕಾಕೋಲಿ ಗೋಶ್ ದಸ್ತಿದಾರ್‌
ಕಾಕೋಲಿ ಗೋಶ್ ದಸ್ತಿದಾರ್‌
Updated on

ನವದೆಹಲಿ: ಸಂಸತ್ ನಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯದ ವೇಳೆ ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೋಲಿ ಗೋಶ್ ದಸ್ತಿದಾರ್‌ ಅವರು ಮಣಿಪುರ ಹಿಂಸಾಚಾರ ಕುರಿತಂತೆ ಕೆಲವು ಭಯಾನಕತೆಯನ್ನು ವಿವರಿಸಿದ್ದಾರೆ.

ಹಿಂಸಾಚಾರ ಪೀಡಿತ ಗುಡ್ಡಗಾಡು ರಾಜ್ಯ ಮಣಿಪುರಕ್ಕೆ ಹೋಗಿದ್ದ ವಿರೋಧ ಪಕ್ಷಗಳ ನಿಯೋಗದ ಭಾಗವಾಗಿದ್ದ ದಸ್ತಿದಾರ್, ಇಬ್ಬರು ಹುಡುಗಿಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಇತ್ತೀಚಿನ ವೀಡಿಯೊದ ಭೀಕರವಾಗಿತ್ತು ಎಂದು ಹೇಳಿದ್ದಾರೆ.

ಶಿರಚ್ಛೇದದ ಇನ್ನೂ ಅನೇಕ ಘಟನೆಗಳಿವೆ. ಹೆಣ್ಣುಮಕ್ಕಳ ಕೂದಲಿನಿಂದ ಹಿಡಿದು ಅವರ ಕುತ್ತಿಗೆಯನ್ನು ಸೀಳುವ ವೀಡಿಯೊಗಳನ್ನು ನಾವು ನೋಡಿದ್ದೇವೆ. ಇಬ್ಬರು ಹುಡುಗಿಯರು 2-3 ದಿನಗಳಿಂದ ಆಹಾರ ಮತ್ತು ನೀರು ಇಲ್ಲದೆ ಕಾರ್ ವಾಶ್‌ನಲ್ಲಿ ಅಡಗಿಕೊಂಡಿದ್ದರು. ಅವರು ಭಯೋತ್ಪಾದಕರಿಂದ ಅಡಗಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಅವರನ್ನು ಹೊರಗೆಳೆದು ಸಾಮೂಹಿಕ ಅತ್ಯಾಚಾರ ನಡೆಸಲಾಯಿತು ಎಂದು ಹೇಳಿದರು.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ದಸ್ತಿದಾರ್, ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ನಡೆದಿರುವ ಇಂತಹ ಬಹುತೇಕ ಘಟನೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ ಎಂದರು.

ನಿಯೋಗದ ಸದಸ್ಯರ ಪ್ರಕಾರ ಹಿಂಸಾಚಾರದಲ್ಲಿ ಒಟ್ಟು 179 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಸ್ಥಳಾಂತರಗೊಂಡವರ ಸಂಖ್ಯೆ 60,000 ಮತ್ತು ಪರಿಹಾರ ಶಿಬಿರಗಳಲ್ಲಿ 40,000 ಎಂದು ಅಂದಾಜಿಸಲಾಗಿದೆ. ಸಾವಿರಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

"ಮಣಿಪುರದ ಸಾಮಾನ್ಯ ಜನರು ಎಕೆ 47 ಮತ್ತು ಗ್ರೆನೇಡ್‌ಗಳು, ಸ್ವಯಂ-ಲೋಡಿಂಗ್ ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೇಗೆ ಪಡೆಯುತ್ತಾರೆ. 

ಅಂತಹ ಆಯುಧಗಳು ಈಗ ಉಚಿತವಾಗಿ ಲಭ್ಯವಿದೆಯಾ. ಅವು ಈಶಾನ್ಯದತ್ತ ಹೋಗುತ್ತಿವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com