ಕಂಜಾವಾಲ ಆರೋಪಿಗೆ ಕಾರಿನಡಿ ಮಹಿಳೆ ಸಿಲುಕಿದ್ದು ತಿಳಿದಿತ್ತು! 

ಹೊಸ ವರ್ಷದ ದಿನದಂದು ದೆಹಲಿಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. 
ಕಾರು (ಸಂಗ್ರಹ ಚಿತ್ರ)
ಕಾರು (ಸಂಗ್ರಹ ಚಿತ್ರ)

ನವದೆಹಲಿ: ಹೊಸ ವರ್ಷದ ದಿನದಂದು ದೆಹಲಿಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. 

ಮಹಿಳೆಯನ್ನು ಹಲವು ಕಿ.ಮೀ ದೂರ ಎಳೆದೊಯ್ದ ಕಾರಿನಲ್ಲಿದ್ದ ಆರೋಪಿಗೆ ಕಾರಿನಡಿಯಲ್ಲಿ ಮಹಿಳೆ ಸಿಲುಕಿರುವುದು ತಿಳಿದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 

ಸ್ವತಃ ದೆಹಲಿ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಕಾರಿನಡಿಯಲ್ಲಿ ಮಹಿಳೆ ಸಿಲುಕಿದ್ದಾರೆ ಎಂಬ ಮಾಹಿತಿ ಆರೋಪಿಗಳಿಗೆ ಇತ್ತು, ಒಂದು ವೇಳೆ ಕಾರಿನಿಂದ ಇಳಿದು ಮಹಿಳೆಯನ್ನು ಕಾರಿನ ಅಡಿಯಿಂದ ಹೊರ ತೆಗೆದಿದ್ದನ್ನು ಯಾರಾದರೂ ಗಮನಿಸಿದ್ದರೆ, ಸಮಸ್ಯೆಗಾದೀತೆಂದು ಹೆದರಿ ಮಹಿಳೆಯನ್ನು ರಕ್ಷಿಸಲಿಲ್ಲ ಎಂಮ್ದು ದೆಹಲಿ ಪೊಲೀಸರು ಹೇಳಿದ್ದಾರೆ. 

ಆರೋಪಿಗಳು ವಿಚಾರಣೆ ವೇಳೆ ತಮ್ಮ ಹೇಳಿಕೆಗಳಿಗೆ ತಾವೇ ತದ್ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com