ಧಾರ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಭಾನುವಾರ ಧಾರ್ ಜಿಲ್ಲೆಯ ಮನವಾರ್ ಪಟ್ಟಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಇಂದು ಸಂಜೆ ಚೌಹಾಣ್ ಅವರು ಹೆಲಿಕಾಪ್ಟರ್ ನಲ್ಲಿ ಮನವಾರದಿಂದ ಧಾರ್ಗೆ ಹೋಗುತ್ತಿದ್ದರು. ಆದರೆ ಕಾಪ್ಟರ್ ಟೇಕಾಫ್ ಆದ ಕೆಲ ಸಮಯದ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಾಪಸ್ ಮನವಾರ್ ಪಟ್ಟಣಕ್ಕೆ ಆಗಮಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಧೀರಜ್ ಬಬ್ಬರ್ ಅವರು ಹೇಳಿದ್ದಾರೆ.
ಘಟನೆಯ ನಂತರ ಮಧ್ಯಪ್ರದೇಶ ಸಿಎಂ ರಸ್ತೆ ಮೂಲಕ ಧಾರ್ಗೆ ಪ್ರಯಾಣ ಬೆಳೆಸಿದರು.
Advertisement