social_icon

ಈ ಬಾರಿಯ ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ವೀಕ್ಷಕರ ಸಂಖ್ಯೆ ಶೇ.64ರಷ್ಟು ಕಡಿತ: ಸ್ವದೇಶಿ ಶಸ್ತ್ರಾಸ್ತ್ರಗಳಿಗೆ ಆದ್ಯತೆ

ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್‌ಗೆ ಪಾಸ್‌ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು.

Published: 19th January 2023 09:17 AM  |   Last Updated: 19th January 2023 05:42 PM   |  A+A-


Indian Security Force members rehearse for the Republic Day Parade amid dense fog on a cold morning in New Delhi, India on January 10, 2023.

ದೆಹಲಿಯಲ್ಲಿ ಬೆಳಗಿನ ದಟ್ಟವಾದ ಮಂಜಿನ ನಡುವೆ ಭಾರತೀಯ ಭದ್ರತಾ ಪಡೆ ಸದಸ್ಯರು ಗಣರಾಜ್ಯೋತ್ಸವ ಪರೇಡ್‌ಗಾಗಿ ಪೂರ್ವಾಭ್ಯಾಸ ಮಾಡುತ್ತಿರುವುದು

Posted By : Sumana Upadhyaya
Source : The New Indian Express

ನವದೆಹಲಿ: ಈ ಬಾರಿ ಕೇಂದ್ರ ಸರ್ಕಾರದ ಗಣರಾಜ್ಯೋತ್ಸವದ ಪರೇಡ್‌ಗೆ ಪಾಸ್‌ ಪಡೆದರೆ ನೀವೇ ಅದೃಷ್ಟವಂತರು ಎಂದು ಭಾವಿಸಬೇಕು. ಸರ್ಕಾರವು 45,000 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. 2020ಕ್ಕಿಂತ ಮೊದಲು ಕೋವಿಡ್ ಪೂರ್ವದಲ್ಲಿ ದೆಹಲಿಯ ಕೆಂಪುಕೋಟೆಯ ಮುಂದೆ ಪರೇಡ್ ವೀಕ್ಷಿಸಲು ಸುಮಾರು 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು. ಅದನ್ನು ಈ ಬಾರಿ ಶೇಕಡಾ 64ರಷ್ಟು ಸಾರ್ವಜನಿಕರ ಪ್ರವೇಶವನ್ನು ಕಡಿತ ಮಾಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಸುಮಾರು 25 ಸಾವಿರ ಮಂದಿಗೆ ಅವಕಾಶ ನೀಡಲಾಗಿತ್ತು.

ಅಧಿಕೃತ ಕಾರಣವೆಂದರೆ, ದೆಹಲಿಯ ಕರ್ತವ್ಯ ಪಥವನ್ನು ದಿನದ ಬಹುಪಾಲು ಪ್ರವಾಸಿಗರಿಗೆ ಮುಕ್ತವಾಗಿ ಇಡಲಾಗಿದೆ. ಹೊಸ ಆಸನ ವ್ಯವಸ್ಥೆ ಇದೆ. ಆಸನಗಳು ಸುಸಜ್ಜಿತವಾಗಿರುತ್ತವೆ ಎಂದು ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ರಂಜನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 45,000 ಸೀಟುಗಳಲ್ಲಿ ಸುಮಾರು 32,000 ಜನರಿಗೆ ಮುಕ್ತವಾಗಿದೆ ಎಂದು ಅವರು ಹೇಳಿದರು. ಈ ಬಾರಿ, ಎಲ್ಲಾ ಆಹ್ವಾನಗಳು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. 

ಈ ಬಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ ವಿಷಯವಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಹೇಳಿದರು. ಗಣರಾಜ್ಯೋತ್ಸವದ ಧ್ಯೇಯ ವಾಕ್ಯ 'ಜನಭಾಗಿದಾರಿ'ಯಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಗಳ ಕಾರ್ಮಿಕರು ಮತ್ತು ಅವರ ಕುಟುಂಬ, ಕರ್ತವ್ಯ ಪಥದಲ್ಲಿ ನಿರ್ವಹಣಾ ಕಾರ್ಯಕರ್ತರು, ಹಾಲಿನ ಬೂತ್ ಮಾರಾಟಗಾರರು, ತರಕಾರಿ ಮತ್ತು ಸಣ್ಣ ದಿನಸಿ ಮಾರಾಟಗಾರರು ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಗಣರಾಜ್ಯೋತ್ಸವದ ಮುಖ್ಯ ಅತಿಥಿ

“ನಾವು ವಿವಿಐಪಿಗಳ ಆಮಂತ್ರಣ ಪತ್ರಗಳನ್ನು ಕಡಿತಗೊಳಿಸಿದ್ದೇವೆ. ಈ ಹಿಂದೆ ನಮಗೆ ಸುಮಾರು 50,000 ಆಹ್ವಾನಗಳು ಬಂದಿದ್ದವು, ಅವುಗಳನ್ನು 12,000 ಕ್ಕೆ ಇಳಿಸಲಾಗಿದೆ ಎಂದು ರಂಜನ್ ಹೇಳಿದರು. ಮೇಕ್ ಇನ್ ಇಂಡಿಯಾ ಉತ್ಪನ್ನಗಳಾದ ಮೇಕ್ ಬ್ಯಾಟಲ್ ಟ್ಯಾಂಕ್, NAG ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್, ಆಕಾಶ್ ಕ್ಷಿಪಣಿ, ಮತ್ತು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಪರೇಡ್ ಗಮನಹರಿಸಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಭಾಗವಹಿಸಲಿದ್ದಾರೆ. ಈಜಿಪ್ಟ್ ಮಿಲಿಟರಿಯ 120 ಸದಸ್ಯರ ತುಕಡಿಯು ಮೊದಲ ಬಾರಿಗೆ ಕರ್ಥವ್ಯ ಪಥದಲ್ಲಿ ಮೆರವಣಿಗೆ ನಡೆಸಲಿದೆ.


Stay up to date on all the latest ದೇಶ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp