ಮುಂಬೈ: ಎನ್ ಸಿಪಿ ಸಚಿವರು, ಶಾಸಕರೊಂದಿಗೆ ಅಜಿತ್- ಶರದ್ ಪವಾರ್ ಭೇಟಿ!

ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದು ತನ್ನ ಬಣದ ಸಚಿವರು, ಶಾಸಕರೊಂದಿಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮುಂಬೈನ ವೈಬಿ ಚವಾಣ್ ಸೆಂಟರ್‌ ಗೆ ತೆರಳಿದ್ದಾರೆ.
ಡಿಸಿಎಂ ಅಜಿತ್ ಪವಾರ್ ಮತ್ತಿತರರು
ಡಿಸಿಎಂ ಅಜಿತ್ ಪವಾರ್ ಮತ್ತಿತರರು

ಮುಂಬೈ: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದು ತನ್ನ ಬಣದ ಸಚಿವರು, ಶಾಸಕರೊಂದಿಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮುಂಬೈನ ವೈಬಿ ಚವಾಣ್ ಸೆಂಟರ್‌ ಗೆ ತೆರಳಿದ್ದಾರೆ.

ತನ್ನ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದು ಜುಲೈ 2 ರಂದು ಏಕನಾಥ್ ಶಿಂಧೆ ಸರ್ಕಾರ ಸೇರಿದ ನಂತರ ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಗುಂಪಿನ ನಡುವಿನ ಮೊದಲ ಸಭೆ ಇದಾಗಿದೆ.

ಅಜಿತ್ ಪವಾರ್ ಜೊತೆಗೆ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಅದಿತಿ ತತ್ಕರೆ, ಹಸನ್ ಮಶ್ರಿಫ್ ಮತ್ತು ಇತರ ಶಾಸಕರು ಶರದ್ ಪವಾರ್ ಅವರನ್ನು ಭೇಟಿ ಮಾಡಲು ಕೇಂದ್ರವನ್ನು ತಲುಪಿದ್ದಾರೆ. ಶರದ್ ಪವಾರ್ ಬಣದ ಮುಖಂಡರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಕೂಡ ವೈ.ಬಿ.ಚವಾಣ್ ಕೇಂದ್ರಕ್ಕೆ ಧಾವಿಸಿದ್ದಾರೆ.

ಶೀಘ್ರದಲ್ಲೇ ವೈ.ಬಿ. ಚವಾಣ್ ಕೇಂದ್ರಕ್ಕೆ ಬರುವಂತೆ ಸುಪ್ರಿಯಾ ಸುಳೆ ಅವರಿಂದ  ಕರೆ ಬಂದಿತು, ಅಜಿತ್ ಪವಾರ್ ಮತ್ತು ಇತರ ಶಾಸಕರು ಇಲ್ಲಿಗೆ ಏಕೆ ಬಂದಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಪಾಟೀಲ್ ಹೇಳಿದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com