social_icon

2024ರ ಚುನಾವಣೆಗೂ ಮುನ್ನ ಬಂಗಾಳದಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ಮುಂದು: ಸಿಎಂ ಮಮತಾ ಬ್ಯಾನರ್ಜಿ

2024ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದ ಮಾನಹಾನಿ ಮಾಡಲು ವಿರೋಧ ಪಕ್ಷ ಬಿಜೆಪಿ ಜನರ ನಡುವೆ ಒಡಕು ಮೂಡಿಸಲು ಗಲಭೆ ಸೃಷ್ಟಿಸಲು ಯೋಜಿಸುತ್ತಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

Published: 27th July 2023 10:27 PM  |   Last Updated: 28th July 2023 03:09 PM   |  A+A-


ಮಮತಾ ಬ್ಯಾನರ್ಜಿ

Posted By : Vishwanath S
Source : PTI

ಕೋಲ್ಕತ್ತಾ: 2024ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದ ಮಾನಹಾನಿ ಮಾಡಲು ವಿರೋಧ ಪಕ್ಷ ಬಿಜೆಪಿ ಜನರ ನಡುವೆ ಒಡಕು ಮೂಡಿಸಲು ಗಲಭೆ ಸೃಷ್ಟಿಸಲು ಯೋಜಿಸುತ್ತಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ಪಂಚಾಯತ್ ಚುನಾವಣೆಯ ಹಿಂಸಾಚಾರದ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಮಂಡಿಸಿದ ಮುಂದೂಡಿಕೆ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮಮತಾ, ಇತ್ತೀಚೆಗೆ ನವದೆಹಲಿಯಲ್ಲಿ ಪಕ್ಷದ ರಾಜ್ಯ ಘಟಕದ ಉನ್ನತ ನಾಯಕರೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ನಾಯಕತ್ವವು ಇದನ್ನು ಯೋಜಿಸಿದೆ ಎಂದು ನನಗೆ ತಿಳಿದಿದೆ. ತೃಣಮೂಲ ಕಾಂಗ್ರೆಸ್‌ನ ಮತಗಳನ್ನು ವಿಭಜಿಸುವ ಕೆಲವು ಪಕ್ಷಗಳಿಗೆ ಇಲ್ಲಿ ಹಣ ನೀಡಲು ಬಿಜೆಪಿ ಯೋಜಿಸಿದೆ ಎಂದು ಮಮತಾ ಹೇಳಿದ್ದಾರೆ.

ಮಣಿಪುರದಂತೆಯೇ ಇಲ್ಲಿಯೂ ಬಿಜೆಪಿ ಪರಸ್ಪರ ಸಮುದಾಯದ ನಡುವೆ ಜಾತಿ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂದು ಮಮತಾ ಆರೋಪಿಸಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರವನ್ನು ಹರಡುತ್ತಿದೆ ಎಂಬ ತೃಣಮೂಲ ಕಾಂಗ್ರೆಸ್ ಮೇಲಿನ ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದ ಮಮತಾ, ಕೆಲವು ಸ್ಥಳಗಳಲ್ಲಿ ಹಿಂಸಾಚಾರವನ್ನು ಹೊರತುಪಡಿಸಿ, ಚುನಾವಣೆ ಶಾಂತಿಯುತವಾಗಿ ನಡೆಯಿತು ಎಂದು ಹೇಳಿದರು.

ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಸಿಬಿಐಗೆ ವಹಿಸಿದ ಕೇಂದ್ರ

ಈ ದಿನ ವಿಧಾನಸೌಧದಲ್ಲಿ ಬಿಜೆಪಿ ತಂದಿರುವ ಪ್ರಸ್ತಾವನೆ ಕುರಿತು ಪಂಚರಾಜ್ಯ ಚುನಾವಣೆಯಲ್ಲಿ ನಡೆದ ಹಿಂಸಾಚಾರ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಲಾಯಿತು. 2021ರ ವಿಧಾನಸಭಾ ಚುನಾವಣೆಯ ನಂತರ ಪ್ರಮುಖ ಪ್ರತಿಪಕ್ಷವಾಗಿ ಮಾರ್ಪಟ್ಟಿರುವ ಬಿಜೆಪಿಯ ಮುಂದೂಡಿಕೆ ನಿರ್ಣಯವನ್ನು ಅಂಗೀಕರಿಸುವ ಸಂದರ್ಭದಲ್ಲಿ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಚರ್ಚೆಗೆ ಅವಕಾಶ ನೀಡಿದ್ದು ಇದೇ ಮೊದಲು.

ಬಿಜೆಪಿ ಶಾಸಕರು ಸಭಾತ್ಯಾಗ
2021ರ ವಿಧಾನಸಭಾ ಚುನಾವಣೆಯ ವೇಳೆ ನಂದಿಗ್ರಾಮ್‌ನ ಮತ ಎಣಿಕೆ ಕೇಂದ್ರದಲ್ಲಿ ಎರಡು ಗಂಟೆ ವಿದ್ಯುತ್ ಕಡಿತಗೊಳಿಸಿದ್ದನ್ನು ಉಲ್ಲೇಖಿಸಿ ಮಮತಾ ಅವರು ಲೈಟ್‌ಗಳನ್ನು ಆಫ್ ಮಾಡುವ ಮೂಲಕ ನೀವು (ಬಿಜೆಪಿ) ಗೆದ್ದಿದ್ದೀರಿ ಎಂದು ಆರೋಪಿಸಿದರು ಇದರಿಂದ ಕೆರಳಿದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಎಲ್ಲಾ ಬಿಜೆಪಿ ಶಾಸಕರನ್ನು ಸಭಾತ್ಯಾಗ ಮಾಡಿದರು.

ಮುಖ್ಯಮಂತ್ರಿಯವರ ಭಾಷಣವನ್ನು ಬಹಿಷ್ಕರಿಸಿದ ಬಿಜೆಪಿ ಶಾಸಕರು ಕಪ್ಪು ಬಟ್ಟೆ ಬೀಸುತ್ತಾ ಘೋಷಣೆಗಳನ್ನು ಕೂಗುತ್ತಾ ಸದನದಿಂದ ಹೊರನಡೆದರು. ಆದರೂ ಮಮತಾ ಮಾತು ಮುಂದುವರೆಸಿದರು. ಮಮತಾ ಅವರು ನಂದಿಗ್ರಾಮದಿಂದ ಸುವೇಂದು ವಿರುದ್ಧ ತೀವ್ರ ಪೈಪೋಟಿಯಿಂದ ಸೋತಿದ್ದಾರೆ.


Stay up to date on all the latest ದೇಶ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp