'ತೋಳಗಳು ಹಿಂಡು ಹಿಂಡಾಗಿ ಭೇಟೆಯಾಡುತ್ತವೆ': ವಿಪಕ್ಷಗಳ ಒಗ್ಗಟ್ಟಿನ ಹೋರಾಟದ ಬಗ್ಗೆ ಸ್ಮೃತಿ ಇರಾನಿ

ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿರುವ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ, 'ತೋಳಗಳು ಹಿಂಡು ಹಿಂಡಾಗಿ ಬೇಟೆಯಾಡುತ್ತವೆ' ಎಂದು ಶನಿವಾರ ತಿಳಿಸಿದ್ದಾರೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ
Updated on

ಇಂದೋರ್: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ಕುರಿತು ವ್ಯಂಗ್ಯವಾಡಿರುವ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ, 'ತೋಳಗಳು ಹಿಂಡು ಹಿಂಡಾಗಿ ಬೇಟೆಯಾಡುತ್ತವೆ' ಎಂದು ಶನಿವಾರ ತಿಳಿಸಿದ್ದಾರೆ.

ಶುಕ್ರವಾರದ ಪ್ರತಿಪಕ್ಷಗಳ ಸಭೆಯ ಗುರಿ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಆದರೆ, ದೇಶದ ಜನರು ಮತ್ತು ಖಜಾನೆ ಎಂದು ಅವರು ಆರೋಪಿಸಿದ್ದಾರೆ.

'ನಾನು ಇಂದೋರ್‌ಗೆ ಬಂದ ತಕ್ಷಣ, ನಿನ್ನೆ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯ ಬಗ್ಗೆ ನನ್ನ ಪ್ರತಿಕ್ರಿಯೆ ಏನು ಎಂದು ಮಾಧ್ಯಮಗಳು ನನ್ನನ್ನು ಕೇಳಿದವು. ತೋಳಗಳು ಹಿಂಡು ಹಿಂಡಾಗಿ ಬೇಟೆಯಾಡುತ್ತವೆ ಎಂದು ಜನರು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ' ಇರಾನಿ ಹೇಳಿದರು.

ಮೋದಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಇಂದೋರ್‌ನ ಪ್ರಮುಖ ಮಹಿಳೆಯರನ್ನು ಆಹ್ವಾನಿಸಲಾಗಿತ್ತು.

'ಒಂದು ಸಭೆ (ವಿರೋಧ ಪಕ್ಷಗಳ) ಇದೆ. ಆದರೆ, ಅದರ ಗುರಿ ಮೋದಿ ಅಲ್ಲ, ಆದರೆ, ನೀವು (ಸಾರ್ವಜನಿಕರು) ಮತ್ತು ಭಾರತದ ಖಜಾನೆಯಾಗಿದೆ. ಯಾರಾದರೂ ಮನೆಯ ಖಜಾನೆಯ ಮೇಲೆ ಕೆಟ್ಟ ಕಣ್ಣು ಹಾಕಿದರೆ, ನೀವು ಮಾಡಬೇಕಾಗಿರುವುದು ಮನೆಯ ಮಹಿಳೆಗೆ ತಿಳಿಸುವುದು ಅಥವಾ ಎಚ್ಚರಿಸುವುದು ಮತ್ತು ಶತ್ರುಗಳ ಪ್ರಯತ್ನವು ಸ್ವಯಂಚಾಲಿತವಾಗಿ ವಿಫಲಗೊಳ್ಳುತ್ತದೆ.ಎಂದರು.

ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಒಟ್ಟು 17 ವಿರೋಧ ಪಕ್ಷಗಳು ಬಿಜೆಪಿಯನ್ನು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 2024 ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ನಿರ್ಧರಿಸಿದವು.

ಪ್ರಧಾನಿಯವರ ಅಮೆರಿಕ ಭೇಟಿಯಿಂದಾಗಿ ವಿಶ್ವದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಿದೆ ಎಂದು ಹೇಳಿರುವ ಇರಾನಿ, ಭಾರತದಲ್ಲಿ ಹೂಡಿಕೆ ಮಾಡಲು ವಿವಿಧ ವಿದೇಶಿ ಕಂಪನಿಗಳು ಮಾಡಿರುವ ಘೋಷಣೆಗಳನ್ನು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com