ಉಮೇಶ್ ಪಾಲ್ ಅಪಹರಣ ಕೇಸು: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರನ್ನು ಅಪರಾಧಿಗಳೆಂದು ಇಲ್ಲಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿರುದ್ಧ ವಿಚಾರಣೆ ನಡೆಸುವ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
Published: 28th March 2023 03:04 PM | Last Updated: 28th March 2023 05:48 PM | A+A A-

ಅಹಮದಾಬಾದ್ನಲ್ಲಿರುವ ಪ್ರಯಾಗ್ರಾಜ್ಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ಸಬರಮತಿ ಕೇಂದ್ರ ಕಾರಾಗೃಹದ ಹೊರಗೆ ಜೈಲುಪಾಲಾದ-ಮಾಫಿಯಾ ಅತೀಕ್ ಅಹ್ಮದ್ನೊಂದಿಗೆ ಪ್ರಯಾಗ್ರಾಜ್ ಪೊಲೀಸರು
ಪ್ರಯಾಗ್ ರಾಜ್: 2006 ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್, ದಿನೇಶ್ ಪಾಸಿ ಮತ್ತು ಖಾನ್ ಸೌಲತ್ ಹನೀಫ್ ಅವರನ್ನು ಅಪರಾಧಿಗಳೆಂದು ಇಲ್ಲಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿರುದ್ಧ ವಿಚಾರಣೆ ನಡೆಸುವ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ನ್ಯಾಯಾಲಯ ಅತೀಕ್ಗೆ ಜೀವಾವಧಿ ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿದೆ. ವಿಶೇಷ ಎಂಪಿ-ಎಂಎಲ್ಎ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಚಂದ್ರ ಶುಕ್ಲಾ ಅವರು ಅಹ್ಮದ್, ವಕೀಲ ಸೌಲತ್ ಹನೀಫ್ ಮತ್ತು ದಿನೇಶ್ ಪಾಸಿ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ ಎಂದು ಸರ್ಕಾರದ ಪರ ವಕೀಲ ಗುಲಾಬ್ ಚಂದ್ರ ಅಗ್ರಹರಿ ತಿಳಿಸಿದ್ದಾರೆ. ಉಮೇಶ್ ಪಾಲ್ ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಪರಾಧಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ.
VIDEO | Prayagraj court sentences gangster-turned-politician Atiq Ahmed and two others to life in the Umesh Pal abduction case. Atiq was produced before the MP/MLA court in Prayagraj earlier today. pic.twitter.com/32IuzdqOSE
— Press Trust of India (@PTI_News) March 28, 2023
ಈ ಪ್ರಕರಣದಲ್ಲಿ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎಂದು ಅವರು ಹೇಳಿದರು.
Umesh Pal abduction case update: All 3 convicts including Atiq Ahmad, Dinesh Pasi & Hanif get life imprisonment with a penalty of Rs 1 lakh each to be given to Umesh Pal's family @NewIndianXpress @santwana99 @Shahid_Faridi_ @TheMornStandard
— Namita_TNIE (@Namita_TNIE) March 28, 2023
ಜನವರಿ 25, 2005 ರಂದು ಆಗಿನ ಬಿಎಸ್ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ನಂತರ, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಉಮೇಶ್ ಪಾಲ್ ಅವರು ಕೊಲೆಗೆ ಸಾಕ್ಷಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಉಮೇಶ್ ಪಾಲ್ ಅಹ್ಮದ್ ಅವರ ಒತ್ತಡಕ್ಕೆ ಕೇಸು ಹಿಂತೆಗೆದುಕೊಳ್ಳಲು ನಿರಾಕರಿಸಿದಾಗ ಫೆಬ್ರವರಿ 28, 2006 ರಂದು ಬಂದೂಕು ತೋರಿಸಿ ಅವರನ್ನು ಅಪಹರಿಸಲಾಯಿತು ಎಂದು ಆರೋಪಿಸಿದ್ದರು.
ಜುಲೈ 5, 2007 ರಂದು ಅಹ್ಮದ್, ಅವರ ಸಹೋದರ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅವರಲ್ಲಿ ಒಬ್ಬರು ನಂತರ ನಿಧನರಾದರು.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಎನ್ಕೌಂಟರ್: ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿ ಪೊಲೀಸರ ಗುಂಡಿಗೆ ಹತ
ಅಹ್ಮದ್ ಮತ್ತು ಅಶ್ರಫ್ ಇಬ್ಬರೂ ಜೈಲಿನಲ್ಲಿದ್ದಾಗ ಉಮೇಶ್ ಪಾಲ್ ಅವರನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಫೆಬ್ರವರಿ 24 ರಂದು ಉಮೇಶ್ ಪಾಲ್ ಅವರ ಪ್ರಯಾಗರಾಜ್ ನಿವಾಸದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.
ನಮ್ಮ ಸರ್ಕಾರ ಕ್ರಿಮಿನಲ್ ಗಳನ್ನು ದಮನ ಮಾಡುತ್ತದೆ: ನಮ್ಮ ಸರ್ಕಾರವು ಕಾರ್ಯಾಚರಣೆ ಮತ್ತು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅಪರಾಧಿಗಳನ್ನು ನಿರ್ಮೂಲನೆ ಮಾಡುತ್ತಿದೆ. ಪ್ರತಿಯೊಬ್ಬ ಅಪರಾಧಿಗೂ ಕಠಿಣ ಶಿಕ್ಷೆಯಾಗಬೇಕೆಂದು ನ್ಯಾಯಾಲಯವನ್ನು ಕೋರಲಾಗುತ್ತಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಅಪರಾಧಿಗಳನ್ನು ನಿರ್ಮೂಲನೆ ಮಾಡುತ್ತಿದೆ. ಪ್ರತಿಯೊಬ್ಬ ಅಪರಾಧಿಗೂ ಕಠಿಣ ಶಿಕ್ಷೆಯಾಗಬೇಕೆಂದು ನ್ಯಾಯಾಲಯವನ್ನು ಕೇಳಿಕೊಳ್ಳಲಾಗಿದೆ. ರಾಜ್ಯದಲ್ಲಿ ನಿರ್ಭೀತ ವಾತಾವರಣವಿದೆ ಎಂದು ಜನರು ನಂಬಿದ್ದಾರೆ ಎಂದರು.
ಅತೀಕ್ ಅಹ್ಮದ್ ಗೆ ಮರಣದಂಡನೆಯಾಗಬೇಕು: ನನ್ನ ಮಗನನ್ನು ಅಪಹರಿಸಿದ್ದಕ್ಕಾಗಿ ಅತೀಕ್ ಅಹ್ಮದ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆದರೆ ನನ್ನ ಮಗನನ್ನು ಕೊಂದಿದ್ದಕ್ಕಾಗಿ ಅವನಿಗೆ ಮರಣದಂಡನೆ ನೀಡಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ ಎಂದು ಶಾಂತಿ ದೇವಿ ಉಮೇಶ್ ಪಾಲ್ ತಾಯಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಆರೋಪಿ ಅರ್ಬಾಜ್ನನ್ನು ಎನ್ಕೌಂಟರ್ ಮಾಡಿದ ಯುಪಿ ಪೊಲೀಸರು!
ನನ್ನ ಮಗ ಕಿಡ್ನಾಪ್ ಆಗಿ 18 ವರ್ಷಗಳಾಗಿವೆ. ಆತ ಹೋರಾಟಗಾರನಾಗಿದ್ದ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದರು.
ಉಮೇಶ್ ಪಾಲ್ ಪತ್ನಿ ಜಯಾ ದೇವಿ ಪ್ರತಿಕ್ರಿಯಿಸಿ, ಸದ್ಯದ ತೀರ್ಪಿನಿಂದ ನಾವು ತೃಪ್ತರಾಗಿದ್ದೇವೆ. ನನ್ನ ಪತಿಯನ್ನು ಕೊಂದ ಅತೀಕ್ ಅಹಮದ್ ಗೆ ಮರಣದಂಡನೆ ವಿಧಿಸಬೇಕು. ನಮಗೆ ನ್ಯಾಯ ಬೇಕು. ನಮಗೆ ಸಹಾಯ ಮಾಡುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕೋರುತ್ತೇನೆ. ಅತೀಕ್ ಮತ್ತು ಆತನ ಸೋದರ ಬದುಕಿದರೆ ನಮಗೆ ಮತ್ತು ಸಮಾಜಕ್ಕೆ ತೊಂದರೆಯಿದೆ ಎಂದಿದ್ದಾರೆ.