ಅಬಕಾರಿ ನೀತಿ: ತಿಹಾರ್‌ ಜೈಲಿನಲ್ಲಿ ಸಿಬಿಐ ವಿಚಾರಣೆ ವಿರುದ್ಧ ಬಿಆರ್‌ಎಸ್ ನಾಯಕಿ ಕವಿತಾ ಅರ್ಜಿ ಸಲ್ಲಿಕೆ

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ತನ್ನನ್ನು ಪ್ರಶ್ನಿಸಲು ಸಿಬಿಐಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಭಾರತ್ ರಾಷ್ಟ್ರ ಸಮಿತಿಯ ಎಂಎಲ್‌ಸಿ ಕೆ ಕವಿತಾ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಕಾನೂನು ಪ್ರಕ್ರಿಯೆಯನ್ನು ವಿಫಲಗೊಳಿಸಿದೆ.
ಬಿಆರ್ ಎಸ್ ನಾಯಕಿ ಕವಿತಾ
ಬಿಆರ್ ಎಸ್ ನಾಯಕಿ ಕವಿತಾ
Updated on

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ತನ್ನನ್ನು ಪ್ರಶ್ನಿಸಲು ಸಿಬಿಐಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಭಾರತ್ ರಾಷ್ಟ್ರ ಸಮಿತಿಯ ಎಂಎಲ್‌ಸಿ ಕೆ ಕವಿತಾ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಕಾನೂನು ಪ್ರಕ್ರಿಯೆಯನ್ನು ವಿಫಲಗೊಳಿಸಿದೆ.

ನ್ಯಾಯಾಲಯದಿಂದ ಅನುಕೂಲಕರವಾದ ಆದೇಶ ಪಡೆಯುವ ಸಲುವಾಗಿ ಸಿಬಿಐ ನಿಜ ಸಂಗತಿಗಳನ್ನು ಬಹಿರಂಗಪಡಿಸದಿರುವ ಗಂಭೀರ ಆತಂಕವಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಕಡೆಯ ವಾದ ಮುಗಿಯುವವರೆಗೂ ಕೋರ್ಟ್ ಆದೇಶ ನೀಡದಂತೆ ಕವಿತಾ ಬಯಸಿದ್ದಾರೆ.

ಬಿಆರ್ ಎಸ್ ನಾಯಕಿ ಕವಿತಾ
ದೆಹಲಿ ಅಬಕಾರಿ ನೀತಿ ಪ್ರಕರಣ: ತಿಹಾರ್ ಜೈಲಿನಲ್ಲಿ ಕೆ ಕವಿತಾ ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಕೋರ್ಟ್ ಅನುಮತಿ

ಅರ್ಜಿದಾರರು ಅಥವಾ ಅವರ ವಕೀಲರು ಪ್ರತಿಯನ್ನು ಸಲ್ಲಿಸದೆ ಇನ್ನೂ ಬಂಧನದಲ್ಲಿರುವಾಗಲೇ ಅರ್ಜಿದಾರರನ್ನು ಉದ್ದೇಶಪೂರ್ವಕವಾಗಿ ವಿಚಾರಣೆ ನಡೆಸಲು ಸಿಬಿಐ ಅರ್ಜಿ ಸಲ್ಲಿಸಿರುವುದು ಅತ್ಯಂತ ನಿರಾಶಾದಾಯಕ ಮತ್ತು ದುರದೃಷ್ಟಕರ

ಅಂತಹ ಅಭ್ಯಾಸವು ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲ ತತ್ವಗಳಿಗೆ ತಿಳಿದಿಲ್ಲ. ಕಾನೂನಿನ ದೃಷ್ಟಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ವಾದವನ್ನು ಆಲಿಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು, ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಸಿಬಿಐಗೆ ಪ್ರಶ್ನಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಕೆ ಕವಿತಾ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಿಬಿಐಗೆ ಕಾಲಾವಕಾಶ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com