ಕಚ್ಚಾತೀವು ದ್ವೀಪ ಮರಳಿ ಪಡೆಯುವುದಾಗಿ 'ಇಂಡಿಯಾ' ಮಿತ್ರ ಪಕ್ಷ MDMK ಭರವಸೆ

ಕಚ್ಚಾತೀವು ದ್ವೀಪವನ್ನು ಮರಳಿ ಪಡೆಯುವುದಾಗಿ ಇಂಡಿಯಾ ಮಿತ್ರಪಕ್ಶ ಎಂಡಿಎಂಕೆ ಭರವಸೆ ನೀಡಿದೆ.
ಕಚ್ಚಾತೀವು ದ್ವೀಪ ಮರಳಿ ಪಡೆಯುವುದಾಗಿ 'ಇಂಡಿಯಾ' ಮಿತ್ರ ಪಕ್ಷ MDMK ಭರವಸೆ
Updated on

ಚೆನ್ನೈ: ಕಚ್ಚಾತೀವು ದ್ವೀಪವನ್ನು ಮರಳಿ ಪಡೆಯುವುದಾಗಿ ಇಂಡಿಯಾ ಮಿತ್ರಪಕ್ಶ ಎಂಡಿಎಂಕೆ ಭರವಸೆ ನೀಡಿದೆ. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈಕೋ ಈ ಭರವಸೆ ನೀಡಿದ್ದಾರೆ. ಕಚ್ಚಾತೀವು ದ್ವೀಪವನ್ನು ಮರಳಿ ತಮಿಳುನಾಡಿನ ವಶಕ್ಕೆ ನೀಡಬೇಕು ಎಂದು ವೈಕೋ ಹೇಳಿದ್ದಾರೆ.

ಬಿಜೆಪಿ, ಇಡಿ ದೇಶ ತನ್ನ ಪರವಾಗಿದೆ ಎಂದು ಹೇಳಿಕೊಳ್ಳುತ್ತದೆ. ಆದರೆ ಹಿಮಾಲಯದಿಂದ ಕನ್ಯಾಕುಮಾರಿ ವರೆಗೂ ಕಾಂಗ್ರೆಸ್ ಗೆ ಹೆಚ್ಚಿನ ಜನಪ್ರಿಯತೆ ಇದೆ. ಅಂದಿನ ಪರಿಸ್ಥಿತಿಯಲ್ಲಿ ನಾವು ಕಚ್ಚಾತೀವು ದ್ವೀಪವನ್ನು ಕಳೆದುಕೊಂಡೆವು. ಅಂದು ಡಿಎಂಕೆ ಆ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ನಾವು ಭಾರತದ ಒಂದೇ ಒಂದು ಇಂಚು ಜಾಗವನ್ನೂ ಲಂಕಾಗೆ ಬಿಟ್ಟುಕೊಡುವುದಿಲ್ಲ. ನ್ಯಾಯಾಲಯದ ಮೂಲಕ ದ್ವೀಪವನ್ನು ಮರುಪಡೆಯಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಯತ್ನ ನಡೆಸಲಿದ್ದಾರೆ ಎಂದು ವೈಕೋ ತಿಳಿಸಿದ್ದಾರೆ.

ಪ್ರಮುಖವಾಗಿ, ಶ್ರೀಲಂಕಾದಿಂದ ಕಚ್ಚತೀವುವನ್ನು ಹಿಂಪಡೆಯುವುದು ಎಂಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಶನಿವಾರ ಬಿಡುಗಡೆಯಾದ '24 ಹಕ್ಕುಗಳಿಗಾಗಿ ಘೋಷಣೆ' ಎಂಬ ಶೀರ್ಷಿಕೆಯಲ್ಲಿ ಸೇರಿಸಿರುವ ಭರವಸೆಗಳಲ್ಲಿ ಒಂದಾಗಿದೆ.

ಕಚ್ಚಾತೀವು ದ್ವೀಪ ಮರಳಿ ಪಡೆಯುವುದಾಗಿ 'ಇಂಡಿಯಾ' ಮಿತ್ರ ಪಕ್ಷ MDMK ಭರವಸೆ
ಕಚ್ಚಾತೀವು-ದೇಶದ ಏಕತೆ, ಸಮಗ್ರತೆ ಎಂಬ ಪದಪುಂಜಗಳ ಅಬ್ಬರದಲ್ಲಿ ಮರೆಯಾಗುತ್ತಿರುವ ತಥ್ಯಗಳು!

ಪಕ್ಷದ ಇತರ ಭರವಸೆಗಳು ಸೇರಿವೆ--ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವ ಸಾಂವಿಧಾನಿಕ ತಿದ್ದುಪಡಿಗಳನ್ನು ತರುವುದು ಮತ್ತು ರಾಜ್ಯಪಾಲರ ಅಧಿಕಾರವನ್ನು ಕ್ಲಿಪ್ಪಿಂಗ್ ಮಾಡುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಗೊಳಿಸುವುದು. ಪಕ್ಷದ ನಾಯಕ ವೈಕೊ ಅವರು ಓದಿದ ಪ್ರಣಾಳಿಕೆಯು ರಾಜ್ಯಪಾಲರಿಗೆ ಅಧಿಕಾರವನ್ನು ನೀಡುವ 361 ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ, ದೇಶಾದ್ಯಂತ ತಿರುಕ್ಕುರಲ್ ಅನ್ನು ಪರಿಚಯಿಸುವುದು ಮತ್ತು ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವುದು.

ಪ್ರಮುಖವಾಗಿ, ಶ್ರೀಲಂಕಾದಿಂದ ಕಚ್ಚತೀವುವನ್ನು ಹಿಂಪಡೆಯುವುದು ಎಂಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಶನಿವಾರ ಬಿಡುಗಡೆಯಾದ '24 ಹಕ್ಕುಗಳಿಗಾಗಿ ಘೋಷಣೆ' ಎಂಬ ಶೀರ್ಷಿಕೆಯಲ್ಲಿ ಸೇರಿಸಿರುವ ಭರವಸೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com