ಲೋಕಸಭೆ ಚುನಾವಣೆಗೆ RJD ಪ್ರಣಾಳಿಕೆ ಬಿಡುಗಡೆ; 1 ಕೋಟಿ ಉದ್ಯೋಗ, ಮಹಿಳೆಯರಿಗೆ 1 ಲಕ್ಷ ರೂ. ಭರವಸೆ

ಬಿಹಾರದ ಮಹಾಘಟಬಂಧನ್‌ನ ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿ ಶನಿವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ತೇಜಸ್ವಿ ಯಾದವ್
ತೇಜಸ್ವಿ ಯಾದವ್
Updated on

ಪಾಟ್ನಾ: ಬಿಹಾರದ ಮಹಾಘಟಬಂಧನ್‌ನ ಅತಿದೊಡ್ಡ ಪಕ್ಷವಾಗಿರುವ ಆರ್‌ಜೆಡಿ ಶನಿವಾರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ರಕ್ಷಾ ಬಂಧನದಂದು ಬಡ ಕುಟುಂಬಗಳ “ಸಹೋದರಿಯರಿಗೆ” 1 ವರ್ಷಕ್ಕೆ 1 ಲಕ್ಷ ರೂ. ಹಾಗೂ 1 ಕೋಟಿ ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.

ಇಂದು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಆರ್‌ಜೆಡಿ ಚುನಾವಣಾ ಪ್ರಣಾಳಿಕೆ 'ಪರಿವರ್ತನ್ ಪತ್ರ'ವನ್ನು ಬಿಡುಗಡೆ ಮಾಡಿದರು. 2024 ರ ಚುನಾವಣೆಗೆ ನಮ್ಮ ಪಕ್ಷವು 24 "ಜನ ವಚನ" (ಸಾರ್ವಜನಿಕ ಭರವಸೆಗಳು) ನೀಡುತ್ತಿದೆ ಮತ್ತು ಈ ಬದ್ಧತೆಯನ್ನು ಪೂರೈಸುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದರು.

"ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, RJD ದೇಶಾದ್ಯಂತ ನಿರುದ್ಯೋಗಿ ಯುವಕರಿಗೆ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಖಾತ್ರಿಪಡಿಸುತ್ತದೆ ... ಈ ಪ್ರಕ್ರಿಯೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಪ್ರಾರಂಭವಾಗಲಿದೆ ... ಅದು 'ಬೆರೋಜ್‌ಗಾರಿ ಸೆ ಆಜಾದಿಯಂತಿರುತ್ತದೆ. '(ನಿರುದ್ಯೋಗದಿಂದ ಮುಕ್ತಿ)" ಅವರು ಸುದ್ದಿಗಾರರಿಗೆ ತಿಳಿಸಿದರು.

ತೇಜಸ್ವಿ ಯಾದವ್
ಲಾಲು ಬೆಂಬಲಿಗ ಎನ್‌ಡಿಎಗೆ ಸೇರ್ಪಡೆ; ಆರ್ ಜೆಡಿ ತೊರೆದ ಐದನೇ ಶಾಸಕ

"ನಿರುದ್ಯೋಗ ನಮ್ಮ ದೊಡ್ಡ ಶತ್ರು. ಆದರೆ ಬಿಜೆಪಿ ನಾಯಕರು ಅದರ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು ... ಆದರೆ ನಾವು ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಹೇಳಿದರು.

"ಈ ವರ್ಷದ ರಕ್ಷಾ ಬಂಧನದ ಸಂದರ್ಭದಲ್ಲಿ, ನಾವು ಬಡ ಕುಟುಂಬಕ್ಕೆ ಸೇರಿದ ನಮ್ಮ ಸಹೋದರಿಯರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿಗಳನ್ನು ನೀಡಲು ಪ್ರಾರಂಭಿಸುತ್ತೇವೆ" ಎಂದು ಆರ್‌ಜೆಡಿ ನಾಯಕ ತಿಳಿಸಿದರು.

ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುತ್ತೇವೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು 500 ರೂ.ಗೆ ನೀಡುವುದಾಗಿ ಆರ್ ಜೆಡಿ ಭರವಸೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com