ಲಾಲು ಬೆಂಬಲಿಗ ಎನ್‌ಡಿಎಗೆ ಸೇರ್ಪಡೆ; ಆರ್ ಜೆಡಿ ತೊರೆದ ಐದನೇ ಶಾಸಕ

ಆರ್ ಜೆಡಿ ಶಾಸಕ ಭರತ್ ಬಿಂದ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸದಸ್ಯರೊಂದಿಗೆ ಕುಳಿತುಕೊಳ್ಳುವ ಮೂಲಕ ಮತ್ತೊಂದು ಆಘಾತ ನೀಡಿದ್ದಾರೆ.
ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್
ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್
Updated on

ಪಾಟ್ನಾ: ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಶಾಸಕ ಭರತ್ ಬಿಂದ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಸದಸ್ಯರೊಂದಿಗೆ ಕುಳಿತುಕೊಳ್ಳುವ ಮೂಲಕ ಮತ್ತೊಂದು ಆಘಾತ ನೀಡಿದ್ದಾರೆ. ಇದರೊಂದಿಗೆ ಭರತ್ ಬಿಂದ್ ಅವರು ಒಂದು ತಿಂಗಳೊಳಗೆ ಆರ್ ಜೆಡಿ ತೊರೆದ ಐದನೇ ಶಾಸಕರಾದರು.

ಬಜೆಟ್ ಅಧಿವೇಶನದ ಕೊನೆಯ ದಿನದಂದು ಉಪಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ಅವರೊಂದಿಗೆ ಭಭುವಾ ಶಾಸಕ ಬಿಂದ್ ವಿಧಾನಸಭೆ ಪ್ರವೇಶಿಸಿದರು. ಅಲ್ಲದೆ "ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತನಾಗಿ ನಾನು ಎನ್‌ಡಿಎಗೆ ಬಂದಿದ್ದೇನೆ" ಎಂದು ಆರ್ ಜೆಡಿ ಶಾಸಕ ಹೇಳಿದ್ದಾರೆ.

ಫೆಬ್ರವರಿ 12 ರಂದು ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ನೀಲಮ್ ದೇವಿ ಮತ್ತು ಪ್ರಹ್ಲಾದ್ ಯಾದವ್ ಅವರು ಎನ್‌ಡಿಎ ಶಾಸಕರ ಜೊತೆ ಕುಳಿತು ಮೂವರು ಶಾಸಕರು ಸರ್ಕಾರದ ನಿರ್ಣಯವನ್ನು ಬೆಂಬಲಿಸಿದ್ದರು.

ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್
ಅಧಿಕಾರ ಕಳೆದುಕೊಳ್ಳುತ್ತಿರುವ ಆರ್ ಜೆಡಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಹೇಳಿದ್ದೇನು?

ಬುಧವಾರ, ಆರ್‌ಜೆಡಿ ಶಾಸಕಿ ಸಂಗೀತಾ ಕುಮಾರಿ, ಕಾಂಗ್ರೆಸ್‌ನ ಮುರಾರಿ ಗೌತಮ್ ಮತ್ತು ಸಿದ್ಧಾರ್ಥ್ ಸೌರವ್ ಅವರೊಂದಿಗೆ ಚೌಧರಿ ಅವರನ್ನು ಅನುಸರಿಸಿ ವಿಧಾನಸಭೆಯೊಳಗೆ ಮತ್ತು ಸಮ್ಮಿಶ್ರ ಸರ್ಕಾರದ ಶಾಸಕರ ಪಕ್ಕದಲ್ಲಿ ಕುಳಿತರು.

ಏತನ್ಮಧ್ಯೆ, ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿದರೆ ಪಕ್ಷ ಬದಲಾಯಿಸುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com