ಉದ್ಧವ್ 'ಶಿವಸೇನೆ ನಕಲಿ', ಇಂಡಿಯಾ ಬ್ಲಾಕ್‌ ಅಧಿಕಾರಕ್ಕೆ ಬಂದರೆ 'ವರ್ಷಕ್ಕೆ ಒಬ್ಬರಂತೆ 5 ಪ್ರಧಾನಿ': ಮೋದಿ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅವರ ಪಕ್ಷ "ನಕಲಿ" ಶಿವಸೇನೆ ಎಂದು ಲೇಬಲ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅವರ ಪಕ್ಷ "ನಕಲಿ" ಶಿವಸೇನೆ ಎಂದು ಲೇಬಲ್ ಮಾಡಿದ್ದಾರೆ.

ಇಂದು ಮಹಾರಾಷ್ಟ್ರದ ಕೊಹ್ಲಾಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಮತ್ತು ಡಿಎಂಕೆಯೊಂದಿಗೆ ನಕಲಿ ಶಿವಸೇನೆಯು "ಹೆಗಲಿಗೆ ಹೆಗಲು" ಸೇರಿಸುತ್ತಿದೆ ಮತ್ತು ಬಾಳಾ ಸಾಹೇಬ್ ಅವರು "ಇದನ್ನು ನೋಡಿದ್ದರೆ ತೀವ್ರ ಬೇಸರಗೊಳ್ಳುತ್ತಿದ್ದರು" ಎಂದರು.

"ಕಾಂಗ್ರೆಸ್‌ ಅತ್ಯಂತ ಆಪ್ತವಾದ ಡಿಎಂಕೆ ಪಕ್ಷವು ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಹೇಳುತ್ತಿದ್ದಾರೆ. INDIA ಅಲಯನ್ಸ್ ಅವರನ್ನು ಮಹಾರಾಷ್ಟ್ರಕ್ಕೆ ಆಹ್ವಾನಿಸುತ್ತದೆ ಮತ್ತು ಸನಾತನ ಧರ್ಮವನ್ನು ನಾಶಮಾಡುವ ಮಾತನಾಡುವವರನ್ನು ಗೌರವಿಸುತ್ತದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ
Loksabha Election 2024: ಏಪ್ರಿಲ್ 28 ರಿಂದ ಕರ್ನಾಟಕದಲ್ಲಿ 2 ದಿನ ಪ್ರಧಾನಿ ಮೋದಿ ಪ್ರಚಾರ

ಈ ಮಧ್ಯೆ, ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ "ಒಂದು ವರ್ಷ, ಒಂದು ಪ್ರಧಾನಿ" ಎಂಬ ಸೂತ್ರವನ್ನು ಅಳವಡಿಸಿಕೊಂಡಿದ್ದು, ಅವರು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐವರು ಪ್ರಧಾನಿಗಳಾಗುತ್ತಾರೆ ಎಂದು" ಎಂದು ಪ್ರಧಾನಿ ಮೋದಿ ಆರೋಪಿಸಿದರು.

"ಅವರಿಗೆ ಐದು ವರ್ಷಗಳ ಕಾಲ ಅವಕಾಶ ಸಿಕ್ಕರೆ, ಐದು ವಿಭಿನ್ನ ಪ್ರಧಾನಿಗಳು ಇರುತ್ತಾರೆ. ಆದರೆ, ಇದನ್ನು ದೇಶ ಸಹಿಸುವುದಿಲ್ಲ. ಅದಕ್ಕಾಗಿಯೇ ಅವರು ದೇಶದ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ" ಎಂದು ಮೋದಿ ಕಿಡಿ ಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com