ಜಾರ್ಖಂಡ್: ಸಿಡಿಲು ಬಡಿದು ಮೂವರು ಉದಯೋನ್ಮುಖ ಹಾಕಿ ಆಟಗಾರರು ಸಾವು, ಐವರಿಗೆ ಗಾಯ

ಕೊಲೆಬೀರ ಪೊಲೀಸ್ ಠಾಣಾ ವ್ಯಾಪ್ತಿಯ ತುಟಿಕಲ್ ಪಂಚಾಯತ್‌ನ ಝಾಪ್ಲಾದಲ್ಲಿ ಆಟಗಾರರು ಹಾಕಿ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ರಾಂಚಿ: ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು 135 ಕಿಮೀ ದೂರದಲ್ಲಿರುವ ಸಿಮ್ಡೆಗಾದಲ್ಲಿ ಬುಧವಾರ ಸಂಜೆ ಸಿಡಿಲು ಬಡಿದು ಮೂವರು ಉದಯೋನ್ಮುಖ ಹಾಕಿ ಆಟಗಾರರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕೊಲೆಬೀರ ಪೊಲೀಸ್ ಠಾಣಾ ವ್ಯಾಪ್ತಿಯ ತುಟಿಕಲ್ ಪಂಚಾಯತ್‌ನ ಝಾಪ್ಲಾದಲ್ಲಿ ಆಟಗಾರರು ಹಾಕಿ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಭಾರೀ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಆಶ್ರಯ ಪಡೆದಿದ್ದ ಆಟಗಾರರಿಗೆ ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ಸಿಡಿಲು ಬಡಿದು ಒಂದೇ ದಿನ 38 ಮಂದಿ ಸಾವು!

ಮೃತರನ್ನು ಎನೋಶ್, ಸೆನನ್ ಡ್ಯಾಂಗ್ ಮತ್ತು ನಿರ್ಮಲ್ ಹೋರೋ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಕ್ಲೆಮೆಂಟ್ ಬಾಗೇ, ಜೈಲೇಶ್ ಬಾಗೇ, ಸಲೀಂ ಬಾಗೇ, ಪೀಟರ್ ಬಾಗೇ ಮತ್ತು ಪತಿರಾಮ್ ಬಾಗೇ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಕೋಳೇಬೀರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com