ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಯೋಜನೆ ಘೋಷಣೆ: ಈಗ NPS ಬದಲಿಗೆ UPS ಯೋಜನೆ, ಇದರ ಲಾಭವೇನು?

UPS ಯೋಜನೆಯಡಿ ಒಬ್ಬ ಉದ್ಯೋಗಿ ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ವೇತನದ ಕನಿಷ್ಠ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾನೆ.
ನರೇಂದ್ರ ಮೋದಿ ಸಂಪುಟ
ನರೇಂದ್ರ ಮೋದಿ ಸಂಪುಟTNIE
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಹೊಸ ಪಿಂಚಣಿ ಯೋಜನೆ 'ಏಕೀಕೃತ ಪಿಂಚಣಿ ಯೋಜನೆ'ಗೆ (ಯುಪಿಎಸ್) ಅನುಮೋದನೆ ನೀಡಿದೆ. ಇದಲ್ಲದೇ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಸಮಗ್ರ ಕೇಂದ್ರ ವಲಯದ ‘ವಿಜ್ಞಾನ ಧಾರಾ’ ಯೋಜನೆಗೆ ವಿಲೀನಗೊಂಡಿರುವ ಮೂರು ಪ್ರಮುಖ ಯೋಜನೆಗಳ ಮುಂದುವರಿಕೆಗೆ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರಿ ನೌಕರರು ಯುಪಿಎಸ್ ಪಿಂಚಣಿ ಯೋಜನೆಯ ಲಾಭವನ್ನು ಪಡೆಯುತ್ತಾರೆ.

ಮೋದಿ ಸರ್ಕಾರ ನೌಕರರಿಗೆ ಹೊಸ ಪಿಂಚಣಿ ನೀತಿಯನ್ನು ಪ್ರಕಟಿಸಿದೆ. ಹೊಸ ಪಿಂಚಣಿ ನೀತಿಯ ಹೆಸರು ಏಕೀಕೃತ ಪಿಂಚಣಿ ಯೋಜನೆ ಅಥವಾ UPS. ಇದರ ಅಡಿಯಲ್ಲಿ, ಒಬ್ಬ ಉದ್ಯೋಗಿಯು ಕನಿಷ್ಠ 25 ವರ್ಷಗಳ ಕಾಲ ಕೆಲಸ ಮಾಡಿದ್ದರೆ, ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ವೇತನದ ಕನಿಷ್ಠ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾನೆ.

ಕೇಂದ್ರ ಸರ್ಕಾರದ ನೂತನ ಪಿಂಚಣಿ ನೀತಿ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಇಂದು ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆಗೆ (UPS) ಅನುಮೋದನೆ ನೀಡಿದೆ. ಶೇಕಡ 50ರಷ್ಟು ಖಚಿತವಾದ ಪಿಂಚಣಿ ಯೋಜನೆಯ ಮೊದಲ ಆಧಾರವಾಗಿದೆ. ಎರಡನೇ ಆಧಾರವು ಖಚಿತವಾದ ಕುಟುಂಬ ಪಿಂಚಣಿಯಾಗಿದೆ. ಸರಿಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಲಭ್ಯವಿರುತ್ತದೆ.

ಹೊಸ ಪಿಂಚಣಿ ನೀತಿಯಲ್ಲಿ ಏನಿದೆ?

* ಒಬ್ಬ ಪಿಂಚಣಿದಾರನು ಮರಣಹೊಂದಿದರೆ, ಅವನ ಕುಟುಂಬವು ಮರಣದ ಸಮಯದಲ್ಲಿ ಪಡೆದ ಪಿಂಚಣಿಯ ಶೇಕಡಾ 60ರಷ್ಟು ಪಡೆಯುತ್ತದೆ.

* 10 ವರ್ಷಗಳ ನಂತರ ಕೆಲಸ ಬಿಟ್ಟರೆ 10,000 ರೂಪಾಯಿ ಪಿಂಚಣಿ ಸಿಗುತ್ತದೆ.

* ಹಣದುಬ್ಬರ ಸೂಚ್ಯಂಕದ ಲಾಭವನ್ನು ನೀವು ಪಡೆಯುತ್ತೀರಿ.

* ಪ್ರತಿ ಆರು ತಿಂಗಳ ಸೇವೆಗೆ, ನಿವೃತ್ತಿಯ ನಂತರ ಮಾಸಿಕ ಸಂಬಳದ ಹತ್ತನೇ ಒಂದು ಭಾಗವನ್ನು (ಸಂಬಳ + ಡಿಎ) ಸೇರಿಸಲಾಗುತ್ತದೆ.

ನರೇಂದ್ರ ಮೋದಿ ಸಂಪುಟ
'ಲ್ಯಾಟರಲ್ ಎಂಟ್ರಿ' ನೇಮಕಾತಿಗೆ ಹೊಸ ಅಧಿಸೂಚನೆ: ಪ್ರಧಾನಿ ಮೋದಿ ಹುಟ್ಟುಹಬ್ಬ ದಿನ ಘೋಷಣೆ ಸಾಧ್ಯತೆ?

'ವಿಜ್ಞಾನ ಧಾರಾ' ಯೋಜನೆ

ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಸಂಬಂಧಿಸಿದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಮರ್ಥ್ಯ ವರ್ಧನೆಯೊಂದಿಗೆ ಸಂಶೋಧನೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವುದು ‘ವಿಜ್ಞಾನ ಧಾರಾ’ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನವು ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ಸುಸಜ್ಜಿತ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳನ್ನು ಉತ್ತೇಜಿಸುವ ಮೂಲಕ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯವನ್ನು ಬಲಪಡಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com