ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಬಂದಾಗ ನಾವೇನು ಲಾಲಿಪಾಪ್ ತಿನ್ತಿರ್ತೀವಾ?: ಬಾಂಗ್ಲಾಗೆ ಮಮತಾ ತಿರುಗೇಟು!

ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ, ಅದರ ಬಗ್ಗೆ ಯೋಚಿಸಬೇಡಿ ಎಂದು ಹೇಳುವ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಕೆಲ ನಾಯಕರನ್ನು ಗೇಲಿ ಮಾಡಿದರು.
Mamata Banerjee
ಮಮತಾ ಬ್ಯಾನರ್ಜಿPTI
Updated on

ಕೋಲ್ಕತ್ತಾ: ನಮ್ಮ ದೇಶದ ಭೂಮಿ ನೀವು ಆಕ್ರಮಿಸಿಕೊಳ್ಳಲು ಯತ್ನಿಸಿದರೆ ನಾವೇನು ಲಾಲಿಪಾಪ್ ತಿನ್ತಿರ್ತೀವಾ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ರಾಜಕಾರಣಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ಬಾಂಗ್ಲಾದೇಶ ಕಾನೂನುಬದ್ಧ ಅಧಿಕಾರ ಹಕ್ಕುಗಳಿವೆ ಎಂದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ನಾಯಕ ಸೇರಿದಂತೆ ಬಾಂಗ್ಲಾದೇಶದ ಕೆಲ ರಾಜಕಾರಣಿಗಳ ಹೇಳಿಕೆಗೆ ಮಮತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಯಾರನ್ನೂ ಹೆಸರಿಸದೆ, ಗಡಿಯ ಈ ಭಾಗದಲ್ಲಿ ಕೆಲವು ನಕಲಿ ವೀಡಿಯೊಗಳನ್ನು ಹರಡುವುದನ್ನು ಖಂಡಿಸಿದರು. ನಿರ್ದಿಷ್ಟ ರಾಜಕೀಯ ಪಕ್ಷವು ರಾಜ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಶೋಷಣೆ ಸ್ವೀಕಾರಾರ್ಹವಲ್ಲ. ಭಾರತದ ಧಾರ್ಮಿಕ ಸಮುದಾಯಗಳ ನಡುವೆ ಏಕತೆಯ ಅಗತ್ಯವನ್ನು ಒತ್ತಿ ಹೇಳಿದರು.

ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುವ ಧೈರ್ಯ ಯಾರಿಗೂ ಇಲ್ಲ, ಅದರ ಬಗ್ಗೆ ಯೋಚಿಸಬೇಡಿ ಎಂದು ಹೇಳುವ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಕೆಲ ನಾಯಕರನ್ನು ಗೇಲಿ ಮಾಡಿದರು. ಶಾಂತವಾಗಿ, ಆರೋಗ್ಯವಾಗಿರಿ ಮತ್ತು ಮನಃಶಾಂತಿಯಿಂದಿರಿ. ಭಾರತದ ಪರಿಸ್ಥಿತಿಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ ಅವರು, ಇಂತಹ ಕ್ರಮಗಳು ಪಶ್ಚಿಮ ಬಂಗಾಳ ಮತ್ತು ಅದರ ಜನರಿಗೆ ಹಾನಿ ಮಾಡುತ್ತದೆ ಎಂದು ಹೇಳಿದರು.

ಇದನ್ನು ರಾಜಕೀಯ ಮಾಡಲು ಯೋಚಿಸುತ್ತಿರುವವರು ನಮ್ಮ ರಾಜ್ಯಕ್ಕೆ ಮತ್ತು ಬಾಂಗ್ಲಾದೇಶದಲ್ಲಿರುವ ನಿಮ್ಮ ಸ್ನೇಹಿತರು, ಸಹೋದರಿಯರು ಮತ್ತು ಸಹೋದರರಿಗೆ ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. ಒಂದು ನಿರ್ದಿಷ್ಟ ರಾಜಕೀಯ ಪಕ್ಷವು ಪ್ರಚೋದಿಸಲು ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿವೆ. ಅಂತಹ ತಪ್ಪು ಮಾಹಿತಿಯಿಂದ ದೂರವಿರಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಾವು ಯಾವುದೇ ಒಂದು ಗುಂಪಿನ ಪರವಾಗಿಲ್ಲ, ನಾವು ಇಲ್ಲಿ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದರು.

Mamata Banerjee
ಮನ್ರೇಗಾ: ಲೋಕಸಭೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತೀವ್ರ ತರಾಟೆ | Watch

ಇಲ್ಲಿ ಪರಿಸ್ಥಿತಿಗೆ ಅಪಾಯ ತರುವಂತಹ ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಬ್ಯಾನರ್ಜಿ ಸಂಯಮದಿಂದ ಒತ್ತಾಯಿಸಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ಶೋಷಣೆ ಸ್ವೀಕಾರಾರ್ಹವಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ, ಕೋಮು ಹಿಂಸಾಚಾರವನ್ನು ಹಿಂದೂಗಳು, ಮುಸ್ಲಿಮರು, ಸಿಖ್ಖರು ಅಥವಾ ಕ್ರಿಶ್ಚಿಯನ್ನರು ನಡೆಸುತ್ತಿಲ್ಲ, ಸಮಾಜಕ್ಕೆ ಹೊರೆಯಾಗಿರುವ ಸಮಾಜವಿರೋಧಿಗಳು ಇದನ್ನು ನಡೆಸುತ್ತಿದ್ದಾರೆ. ಇದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಂತಿ ಕದಡುವಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು ಎಂದರು.

ಬಾಂಗ್ಲಾದೇಶದಲ್ಲಿನ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳು ಆಗಸ್ಟ್ 5ರಂದು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಯ ನಂತರ ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆ. ಇದು ವ್ಯಾಪಕ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಪ್ರಚೋದಿಸಲ್ಪಟ್ಟಿದೆ ಎಚ್ಚರ ವಹಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com