ಮಧ್ಯ ಪ್ರದೇಶ ನೇಮಕಾತಿ ಪರೀಕ್ಷೆ: 100 ಅಂಕಕ್ಕೆ 101.66 ಮಾರ್ಕ್ಸ್ ಪಡೆದ ಅಭ್ಯರ್ಥಿ!

ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Representational image
ಸಾಂದರ್ಭಿಕ ಚಿತ್ರ
Updated on

ಇಂದೋರ್: ಮಧ್ಯಪ್ರದೇಶ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ "ಸಾಮಾನ್ಯೀಕರಣ" ಪ್ರಕ್ರಿಯೆಯನ್ನು ಅಳವಡಿಸಿಕೊಂಡ ಕಾರಣ ಅಭ್ಯರ್ಥಿಯು ಒಟ್ಟು 100 ಮಾರ್ಕ್ಸ್ಗೆ 101.66 ಅಂಕಗಳನ್ನು ಪಡೆದಿರುವುದನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳು ಇಂದೋರ್‌ನಲ್ಲಿ ಪ್ರತಿಭಟನೆ ನಡೆಸಿದರು.

ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ವಿದ್ಯಾರ್ಥಿಗಳು ತಾವು ಬರೆಯುವ ಪರೀಕ್ಷೆಗಳಿಂದ ಪ್ರಯೋಜನವಾಗುವುದಿಲ್ಲ ಅಥವಾ ಅನನುಕೂಲವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದೇ ಸಾಮಾನ್ಯೀಕರಣ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ವಿದ್ಯಾರ್ಥಿಯ ಸ್ಕೋರ್ ಅನ್ನು ಇನ್ನೊಬ್ಬರ ಅಂಕಗಳೊಂದಿಗೆ ಹೋಲಿಸಬಹುದಾದ ರೀತಿಯಲ್ಲಿ ಪರಿಷ್ಕರಿಸುವುದನ್ನು ಒಳಗೊಂಡಿರುತ್ತದೆ. ಒಂದೇ ವಿಷಯದ ಪರೀಕ್ಷೆಯನ್ನು ಬಹು ಅವಧಿಗಳಲ್ಲಿ ನಡೆಸಿದಾಗ, ಪ್ರತಿಯೊಂದೂ ವಿದ್ಯಾರ್ಥಿಗೆ ಬೇರೆ ಬೇರೆ ಪೇಪರ್‌ ನೀಡಲಾಗಿರುತ್ತದೆ.

ಸೋಮವಾರ ಕೆಲ ನಿರುದ್ಯೋಗಿ ಯುವಕರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಬರೆದ ಮನವಿ ಪತ್ರವನ್ನು ಅಧಿಕಾರಿಗೆ ಹಸ್ತಾಂತರಿಸಿದರು. ಅರಣ್ಯ ಮತ್ತು ಕಾರಾಗೃಹ ಇಲಾಖೆಗಳ ಜಂಟಿ ನೇಮಕಾತಿ ಪರೀಕ್ಷೆ 2023ರಲ್ಲಿ ಅಭ್ಯರ್ಥಿಯೊಬ್ಬರು ಒಟ್ಟು 100ಕ್ಕೆ 101.66 ಅಂಕಗಳನ್ನು ಪಡೆದು ಆಯ್ಕೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಭೋಪಾಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಧ್ಯಪ್ರದೇಶ ಉದ್ಯೋಗಿಗಳ ಆಯ್ಕೆ ಮಂಡಳಿಯು ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 13 ರಂದು ಪ್ರಕಟಿಸಲಾಯಿತು.

Representational image
IDF ಜೊತೆಗಿನ ಯುದ್ಧದ ನಡುವೆ ಇರಾನ್ ಪರಮಾಣು ಪರೀಕ್ಷೆ?

ಫಲಿತಾಂಶದ ಪ್ರಕಟಣೆಯ ನಂತರ, ಮಂಡಳಿಯು ನಿಯಮಗಳ ಪ್ರಕಾರ ನೇಮಕಾತಿ ಪರೀಕ್ಷೆಯಲ್ಲಿ "ಸಾಮಾನ್ಯೀಕರಣದ ಪ್ರಕ್ರಿಯೆ" ಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿತು, ಇದರಿಂದಾಗಿ ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು (100) ಹೆಚ್ಚು ಮತ್ತು ಶೂನ್ಯಕ್ಕಿಂತ ಕಡಿಮೆ ಪಡೆಯಬಹುದಾಗಿದೆ. ಪ್ರತಿಭಟನಾಕಾರರ ಮುಖಂಡ ಗೋಪಾಲ್ ಪ್ರಜಾಪತ್ ಸುದ್ದಿಗಾರರೊಂದಿಗೆ ಮಾತನಾಡಿ, “ನೇಮಕಾತಿ ಪರೀಕ್ಷೆಯಲ್ಲಿ ಅಳವಡಿಸಿಕೊಂಡಿರುವ ಸಾಮಾನ್ಯೀಕರಣ ಪ್ರಕ್ರಿಯೆಯಿಂದ ಅಭ್ಯರ್ಥಿಯೊಬ್ಬರು ಒಟ್ಟು ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು, ನಾವು ಅನ್ಯಾಯದ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಫಾರೆಸ್ಟ್ ಗಾರ್ಡ್, ಫೀಲ್ಡ್ ಗಾರ್ಡ್ (ಕಾರ್ಯನಿರ್ವಾಹಕ) ಮತ್ತು ಜೈಲು ಗಾರ್ಡ್ (ಕಾರ್ಯನಿರ್ವಾಹಕ) ಹುದ್ದೆಗಳಿಗೆ ನಡೆದ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ನ್ಯಾಯಯುತ ತನಿಖೆ ನಡೆಸುವಂತೆ ಒತ್ತಾಯಿಸಿದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಪ್ರಜಾಪತ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com