ನವದೆಹಲಿ: ಈಗ ರದ್ದಾದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಐದು ಬಾರಿ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಶನಿವಾರ ಕೋರ್ಟ್ ಮೆಟ್ಟಿಲೇರಿದೆ.
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರ ಮುಂದೆ ಕೇಜ್ರಿವಾಲ್ ವಿರುದ್ಧ ಇಡಿ ದೂರು ಸಲ್ಲಿಸಿದ್ದು, ಫೆಬ್ರವರಿ 7 ರಂದು ಹೆಚ್ಚಿನ ವಿಚಾರಣೆ ನಡೆಯಲಿದೆ.
ಇಡಿ ದಾಖಲಿಸಿದ "ಸೆಕ್ಷನ್ 50, PMLA, 2002 ರಡಿ ವಿಚಾರಣೆಗೆ ಹಾಜರಾಗದಿರುವ ಹೊಸ ದೂರು" ಎಂಬುದನ್ನು ನ್ಯಾಯಾಧೀಶರು ಗಮನಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದರು.
"ಇದು ಹೊಸ ದೂರು ಪ್ರಕರಣವಾಗಿದೆ. ವಾದ-ಪ್ರತಿವಾದ ಆಲಿಸಲಾಗಿದೆ. ಉಳಿದ ಮನವಿ/ಪರಿಗಣನೆಯನ್ನು ಫೆಬ್ರವರಿ 7, 2024 ರಂದು ಇರಿಸಿ" ಎಂದು ನ್ಯಾಯಾಧೀಶರು ಹೇಳಿದರು.
Advertisement