ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವು

ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವನ್ನಪ್ಪಿದ್ದಾರೆ.
ಸಾವು (ಸಾಂಕೇತಿಕ ಚಿತ್ರ)
ಸಾವು (ಸಾಂಕೇತಿಕ ಚಿತ್ರ)
Updated on

ಅಂಡಮಾನ್&ನಿಕೋಬಾರ್: ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವನ್ನಪ್ಪಿದ್ದಾರೆ. ಬೇಟೆಗಾರರು ತಾವು ತಂದಿದ್ದ ಆಹಾರ ಪದಾರ್ಥಗಳು ಖಾಲಿಯಾದ ಪರಿಣಾಮ ಆಹಾರ ಸಿಗದೇ ಸಾವನ್ನಪ್ಪಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೇಟೆಗಾರರು ಸಣ್ಣ ಜ್ವಾಲಾಮುಖಿ ದ್ವೀಪದಲ್ಲಿ ಸಿಲುಕಿದ್ದರು ಅವರು ಕೊಂಡೊಯ್ದಿದ್ದ ಸಣ್ಣ ಬೋಟ್ ನಲ್ಲಿ ಸಹ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ವಾಪಸ್ ಆಗಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಸಾವು (ಸಾಂಕೇತಿಕ ಚಿತ್ರ)
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ

ಮೃತದೇಹಗಳು ಉತ್ತರ ನಾರ್ಕೊಡಾಮ್ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಈ ಪ್ರದೇಶ ಮ್ಯಾನ್ಮಾರ್ ನ ಕೊಕೊ ದ್ವೀಪಕ್ಕೆ 126 ಕಿಮೀ ದೂರದಲ್ಲಿದೆ. ಅಂದಾಜು 7.6 ಸ್ಕ್ವೇರ್ ಕಿ.ಮೀ ವ್ಯಾಪ್ತಿಯ ಪ್ರದೇಶ ಮ್ಯಾನ್ಮಾರ್ ನ ಬೇಟೆಗಾರರು ಬೇಟೆಯಾಡುವ ಪ್ರದೇಶವಾಗಿ ಮಾರ್ಪಾಡಾಗಿದೆ.

ಫೆ.14 ರಂದು ಅಂಡಮಾನ್ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ನಿಂದ ಇಬ್ಬರು ಬೇಟೆಗಾರರನ್ನು ಎದುರುಗೊಂಡಿದ್ದರು. ಅವರನ್ನು ಪ್ರಕ್ರಿಯೆಗಳ ಬಳಿಕ ಸಿಐಡಿ ವಶಕ್ಕೆ ಒಪ್ಪಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com