ಪಶ್ಚಿಮ ಬಂಗಾಳ: ಸಂದೇಶಖಾಲಿ ಗ್ರಾಮಸ್ಥರಿಂದ ಟಿಎಂಸಿ ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿ ಅವರ ಮೇಲೆ ಶುಕ್ರವಾರ ಪ್ರತಿಭಟನಾಕಾರರು ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲಿ ದೈಹಿಕ ಹಲ್ಲೆ.
ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ
ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ

ಕೋಲ್ಕತಾ: ಪಶ್ಚಿಮ ಬಂಗಾಳದ ಹಿಂಸಾಚಾರ ಪೀಡಿತ ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿ ಅವರ ಮೇಲೆ ಶುಕ್ರವಾರ ಪ್ರತಿಭಟನಾಕಾರರು ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲಿ ದೈಹಿಕ ಹಲ್ಲೆ ನಡೆಸಿದರು.

ಮೈತಿ ಅವರು ಪಶ್ಚಿಮ ಮೇದಿನಿಪುರದ ಪಿಂಗ್ಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ಸಂದೇಶಖಾಲಿಯ ಬೆರ್ಮಜೂರ್ ಪ್ರದೇಶದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಗ್ರಾಮಸ್ಥರು ಇಂದು ಬೇಲಿಯನ್ನು ಭೇದಿಸಿ ಮೈತಿ ಅವರ ಮನೆಗೆ ನುಗ್ಗಿ ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೋಪಗೊಂಡ ಗ್ರಾಮಸ್ಥರು ಶುಕ್ರವಾರ ಪೊಲೀಸರೊಂದಿಗೆ ಘರ್ಷಣೆ ಸಹ ನಡೆಸಿದರು.

ಬೆರ್ಮಜೂರಿನ ಗ್ರಾಮಸ್ಥರು ಪೊಲೀಸ್ ವಾಹನಗಳನ್ನು ಆ ಪ್ರದೇಶದಲ್ಲಿ ಹಾದು ಹೋಗದಂತೆ ತಡೆಯಲು ಪ್ರಯತ್ನಿಸಿದರು.

"ನಾವು ಅವರನ್ನು ಆರಂಭದಲ್ಲಿ ತಡೆಯಲಿಲ್ಲ. ಆದರೆ ಯಾವುದೇ ಆರೋಪವಿಲ್ಲದೆ ನಮ್ಮ ಹುಡುಗರನ್ನು ಏಕೆ ಬಂಧಿಸುತ್ತಿದ್ದಾರೆ ಎಂಬುದರ ಕುರಿತು ನಾವು ಅವರೊಂದಿಗೆ ಮಾತನಾಡಲು ಬಯಸಿದ್ದೆವು. ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಪೊಲೀಸ್ ವಾಹನವು ಮಹಿಳೆಯ ಕಾಲುಗಳ ಮೇಲೆ ಹಾದುಹೋಯಿತು. ನಾವು ಅವರೊಂದಿಗೆ ಮಾತನಾಡಲು ಬಯಸುತ್ತೇವೆ" ಎಂದು ಮಹಿಳೆಯೊಬ್ಬರು ಹೇಳಿದರು ಎಂದು ಪ್ರತಿಭಟನಾಕಾರರು ಎಎನ್‌ಐಗೆ ತಿಳಿಸಿದ್ದಾರೆ.

ಶಾಸಕ ಅಜಿತ್ ಮೈತಿ ಮೇಲೆ ಹಲ್ಲೆ
ಪಶ್ಚಿಮ ಬಂಗಾಳದಲ್ಲಿ ಆಧಾರ್ ಕಾರ್ಡು ನಿಷ್ಕ್ರಿಯ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಮಮತಾ ಬ್ಯಾನರ್ಜಿ

"ಈ ದೇಶದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ? ಪೊಲೀಸರು ಬಾಲಕಿಯ ಮೇಲೆ ವಾಹನ ಓಡಿಸಲು ಯತ್ನಿಸಿದರು" ಎಂದು ಮತ್ತೊಬ್ಬ ಪ್ರತಿಭಟನಾಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಶೇಖ್ ಷಹಜಹಾನ್, ಸಿರಾಜುದ್ದೀನ್ ಅವರು ನಮ್ಮ ಎಲ್ಲಾ ಜಮೀನುಗಳನ್ನು ವಶಪಡಿಸಿಕೊಂಡಿದ್ದಾರೆ. ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ಓಡಿಸಿದರು. ಈ ಪ್ರಕ್ರಿಯೆಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರು ಕಾಲು ಮುರಿದುಕೊಂಡರು" ಎಂದು ಇನ್ನೊಬ್ಬ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com