ಸುಪ್ರೀಂ ಕೋರ್ಟ್ ಗೆ ಜಮ್ಮು-ಕಾಶ್ಮೀರ, ಮಣಿಪುರ, ತಮಿಳುನಾಡು ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸು

"ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಅವರ (ನ್ಯಾಯಮೂರ್ತಿ ಸಿಂಗ್) ನೇಮಕವು ಈಶಾನ್ಯಕ್ಕೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ ಮತ್ತು ನಿರ್ದಿಷ್ಟವಾಗಿ ಮಣಿಪುರ ರಾಜ್ಯದಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ನ್ಯಾಯಾಧೀಶರಾಗಲಿದ್ದಾರೆ" ಎಂದು ಕೊಲಿಜಿಯಂನ ನಿರ್ಣಯ ಹೇಳಿದೆ.
Supreme Court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಜು.11 ರಂದು ಜಮ್ಮು-ಕಾಶ್ಮೀರ, ಲಡಾಖ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ನಾನ್ಜಿಮೈಕಾಪ್ ಕೋಟೀಶ್ವರ್ ಸಿಂಗ್, ಮದ್ರಾಸ್ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶ ಆರ್ ಮಹಾದೇವನ್ ಅವರುಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಲು ಶಿಫಾರಸು ಮಾಡಿದೆ.

ಇದೇ ವೇಳೆ ನಾನ್ಜಿಮೈಕಾಪ್ ಕೋಟೀಶ್ವರ್ ಸಿಂಗ್ ಮಣಿಪುರದಿಂದ ಸುಪ್ರೀಂ ಕೋರ್ಟ್ ಗೆ ಬಡ್ತಿ ಪಡೆಯುತ್ತಿರುವ ಮೊದಲ ನ್ಯಾಯಾಧೀಶರಾಗಿದ್ದಾರೆ.

"ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಅವರ (ನ್ಯಾಯಮೂರ್ತಿ ಸಿಂಗ್) ನೇಮಕವು ಈಶಾನ್ಯಕ್ಕೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ ಮತ್ತು ನಿರ್ದಿಷ್ಟವಾಗಿ ಮಣಿಪುರ ರಾಜ್ಯದಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ನ್ಯಾಯಾಧೀಶರಾಗಲಿದ್ದಾರೆ" ಎಂದು ಕೊಲಿಜಿಯಂನ ನಿರ್ಣಯ ಹೇಳಿದೆ.

ನ್ಯಾಯಮೂರ್ತಿ ಸಿಂಗ್ ಅವರು, ಜಮ್ಮು-ಕಾಶ್ಮೀರ, ಲಡಾಖ್ ನ ಹೈಕೋರ್ಟ್ ನ್ಯಾಯಾಧೀಶರಾಗಿ, ನ್ಯಾಯಾಂಗ ಸಾಮರ್ಥ್ಯದಲ್ಲಿ ಮತ್ತು ಆಡಳಿತಾತ್ಮಕ ಭಾಗದಲ್ಲಿ ಅವರು ಸಲ್ಲಿಸಿದ ಕೆಲಸದ ವಿಷಯದಲ್ಲಿ ದೋಷರಹಿತ ದಾಖಲೆಯನ್ನು ಹೊಂದಿದ್ದಾರೆ ಎಂದು ಹೇಳಿರುವ ಕೊಲಿಜಿಯಂ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಉಮೇದುವಾರಿಕೆಯನ್ನು ಅವರ ನ್ಯಾಯಾಂಗ ಕಾರ್ಯಕ್ಷಮತೆ, ಆಡಳಿತದ ಕುಶಾಗ್ರಮತಿ, ಸಮಗ್ರತೆ ಮತ್ತು ಅರ್ಹತೆಯ ದೃಷ್ಟಿಯಿಂದ ಪರಿಗಣಿಸಿ, ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅತ್ಯುನ್ನತವಾಗಿ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

1963 ರಲ್ಲಿ ಚೆನ್ನೈನಲ್ಲಿ ಜನಿಸಿದ ನ್ಯಾಯಮೂರ್ತಿ ಮಹದೇವನ್ ಅವರು 1989 ರಲ್ಲಿ ವಕೀಲರಾಗಿ ದಾಖಲಾಗುವ ಮೊದಲು ಮದ್ರಾಸ್ ಕಾನೂನು ಕಾಲೇಜಿನಿಂದ ಪದವಿ ಪಡೆದರು. ಅವರು ಮುಖ್ಯವಾಗಿ ಸಿವಿಲ್, ಕ್ರಿಮಿನಲ್ ಮತ್ತು ರಿಟ್ ವಿಭಾಗಗಳಲ್ಲಿ ಅಭ್ಯಾಸ ಮಾಡಿದರು. ಆದರೆ ಅವರ ವಿಶೇಷತೆಯ ಕ್ಷೇತ್ರವು ತೆರಿಗೆ ಕಾನೂನಿಗೆ ಸಂಬಂಧಿಸಿದ್ದಾಗಿತ್ತು.

Supreme Court
NEET-UG 2024 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಜುಲೈ18ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ

ಅವರು 2013 ರಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು ಪ್ರಾಚೀನ ಮತ್ತು ಆಧುನಿಕ ತಮಿಳು ಸಾಹಿತ್ಯದಲ್ಲಿ ತಮ್ಮ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ದಿವಂಗತ ತಂದೆ ಮಾ. ರಂಗನಾಥನ್ ಅವರು ತಮಿಳು ಬರಹಗಾರರು, ಅವರು ಮುಂಡ್ರಿಲ್ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸುತ್ತಿದ್ದರು. ನ್ಯಾಯಮೂರ್ತಿ ಮಹದೇವನ್ ಅವರು ಮುಂಡ್ರಿಲ್ ಲಿಟರರಿ ಸೊಸೈಟಿಯನ್ನು ನಡೆಸುತ್ತಿದ್ದಾರೆ ಮತ್ತು ತಮಿಳು ಬರಹಗಾರರಿಗೆ ವಾರ್ಷಿಕವಾಗಿ ನೀಡಲಾಗುವ ಮಾ. ರಂಗನಾಥನ್ ಸಾಹಿತ್ಯ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ.

Supreme Court
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ NV ಅಂಜಾರಿಯಾ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು

ಸುಪ್ರೀಂ ಕೋರ್ಟ್ ಕೊಲಿಜಿಯಂ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com