ಮದುರೈನಲ್ಲಿ 'ನಮ್ ತಮಿಳರ್ ಕಚ್ಚಿ' ನಾಯಕ, ಬಿಹಾರದಲ್ಲಿ 'VIP' ಮುಖ್ಯಸ್ಥನ ತಂದೆಯ ಬರ್ಬರ ಹತ್ಯೆ!

ಮನೆಯೊಳಗೆ ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಯನ್ನು ದರ್ಭಾಂಗ ಎಸ್‌ಎಸ್‌ಪಿ ಜಗುನಾಥ ರೆಡ್ಡಿ ಖಚಿತಪಡಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಬಿಹಾರದ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಬಾಲಸುಬ್ರಮಣ್ಯಂ-ಮುಕೇಶ್ ಸಾಹ್ನಿ
ಬಾಲಸುಬ್ರಮಣ್ಯಂ-ಮುಕೇಶ್ ಸಾಹ್ನಿTNIE
Updated on

ಮಧುರೈ/ಬಿಹಾರ: ಬಿಹಾರದ ದರ್ಭಾಂಗಾದಲ್ಲಿ ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮತ್ತು ಬಿಹಾರ ಸರ್ಕಾರದ ಮಾಜಿ ಸಚಿವ ಜಿತನ್ ಸಾಹ್ನಿ ಅವರ ತಂದೆ ಜೀತನ್ ಸಾಹ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದರ್ಬಂಗಾ ಜಿಲ್ಲೆಯ ಬಿರಾವುಲ್ ಉಪವಿಭಾಗದಲ್ಲಿರುವ ಅಫ್ಜಲ್ಲಾ ಪಂಚಾಯತ್‌ನ ಸುಪೌಲ್ ಬಜಾರ್‌ನಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ಹತ್ಯೆಯಾಗಿದ್ದಾರೆ. ಮನೆಯೊಳಗೆ ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆಯನ್ನು ದರ್ಭಾಂಗ ಎಸ್‌ಎಸ್‌ಪಿ ಜಗುನಾಥ ರೆಡ್ಡಿ ಖಚಿತಪಡಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರೊಂದಿಗೆ ಬಿಹಾರದ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಪೊಲೀಸರ ಪ್ರಕಾರ, ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೊಟ್ಟೆಯಿಂದ ಕರುಳುಗಳು ಮತ್ತು ಮುಖದಿಂದ ಕಣ್ಣುಗಳು ಹೊರಬರುವಷ್ಟು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಿತ್ರಗಳನ್ನು ನೋಡಿದರೆ ಹಲವು ಬಾರಿ ಚಾಕುವಿನಿಂದ ಹಲ್ಲೆ ನಡೆಸಿರುವಂತಿದೆ. ಆದರೆ, ಕೊಲೆ ನಡೆದಿದ್ದು ಹೇಗೆ ಮತ್ತು ಏಕೆ ನಡೆದಿದೆ? ಈ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಾಹಿತಿಯ ಪ್ರಕಾರ, ಜೀತನ್ ಸಾಹ್ನಿಯನ್ನು ಹೊರತುಪಡಿಸಿ, ಮನೆಯಲ್ಲಿ 2 ರಿಂದ 3 ಸೇವಕರು ಮತ್ತು ಚಾಲಕ ವಾಸಿಸುತ್ತಿದ್ದರು. ಕೊಲೆಗೆ ಹರಿತವಾದ ಆಯುಧ ಬಳಸಲಾಗಿದೆ.

ಬಾಲಸುಬ್ರಮಣ್ಯಂ-ಮುಕೇಶ್ ಸಾಹ್ನಿ
ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ರೋಗಿಗೆ ಗುಂಡಿಕ್ಕಿ ಹತ್ಯೆ

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸದ್ಯ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಪರಸ್ಪರ ವೈಷಮ್ಯದಿಂದ ಈ ಕೊಲೆ ನಡೆದಿದೆ. ಪ್ರಸ್ತುತ ಮುಖೇಶ್ ಸಾಹ್ನಿ ಹೈದರಾಬಾದ್‌ನಲ್ಲಿದ್ದಾರೆ ಮತ್ತು ರಾತ್ರಿ 9:00 ಗಂಟೆಗೆ ಮನೆಗೆ ತಲುಪುವ ನಿರೀಕ್ಷೆಯಿದೆ. ಸ್ಥಳದಲ್ಲಿ ಜನರ ಗುಂಪು ಜಮಾಯಿಸಿದ್ದಾರೆ. ಮುಂಜಾನೆಯೇ ಈ ಹತ್ಯೆಯ ಸುದ್ದಿಯಿಂದ ಜನ ಕಂಗಾಲಾಗಿದ್ದಾರೆ. ಮುಕೇಶ್ ಸಾಹ್ನಿ ಅವರ ತಂದೆ ಹತ್ಯೆ ಪ್ರಕರಣದಲ್ಲಿ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಕಾಮ್ಯ ಮಿಶ್ರಾ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಬಿರಾವುಲ್ ಉಪವಿಭಾಗದ ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಚೌಧರಿ ಮತ್ತು ಬಿರಾವುಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ದರ್ಭಾಂಗ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ಜಲ ರೆಡ್ಡಿ ತಿಳಿಸಿದ್ದಾರೆ.

ಮಧುರೈನಲ್ಲಿ 'ನಮ್ ತಮಿಳರ್ ಕಚ್ಚಿ' ನಾಯಕನ ಬರ್ಬರ ಹತ್ಯೆ

ಮಧುರೈನಲ್ಲಿರುವ ಐಟಿ ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರ ನಿವಾಸದ ಬಳಿ 48 ವರ್ಷದ ನಾಮ್ ತಮಿಳರ್ ಕಚ್ಚಿ ಪಕ್ಷದ ಕಾರ್ಯಕರ್ತನನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತರನ್ನು ಮಧುರೈನ ಸೆಲ್ಲೂರಿನ ಪಿಕೆಎಸ್ ಸ್ಟ್ರೀಟ್ ನಿವಾಸಿ ಸಿ.ಬಾಲಸುಬ್ರಮಣ್ಯಂ (48) ಎಂದು ಗುರುತಿಸಲಾಗಿದ್ದು, ಪಕ್ಷದ ಜಿಲ್ಲಾ ಉತ್ತರ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಲ್ಲಕುಲಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ. ಚೊಕ್ಕಿಕುಲಂನ ವಲ್ಲಭಭಾಯಿ ರಸ್ತೆಯಲ್ಲಿ ನಡೆದಿದೆ. ಬಾಲಸುಬ್ರಮಣ್ಯಂ ನಡೆದುಕೊಂಡು ಹೋಗುತ್ತಿದ್ದಾಗ ನಾಲ್ಕಕ್ಕೂ ಹೆಚ್ಚು ಮಂದಿಯ ತಂಡ ತಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜಾಜಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ಬೆಳಗಿನ ಜಾವ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com