ಮುಂಬೈನಲ್ಲಿ ಹಿಂದೂ ಯುವತಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ದಾವೂದ್ ಕಲಬುರಗಿಯಲ್ಲಿ ಬಂಧನ

20 ವರ್ಷದ ಬೇಲಾಪುರದ ಹಿಂದೂ ಯುವತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ದಾವೂದ್ ಎಂ ಶೇಖ್ ನ ಚಲನ ವಲನ ಪತ್ತೆ ಹಚ್ಚಿದ ಮುಂಬೈ ಪೊಲೀಸರು ಕರ್ನಾಟಕದ ಕಲಬುರಗಿಯಲ್ಲಿ ಬಂಧಿಸಿದ್ದಾರೆ.
ದಾವೂದ್ ಶೇಖ್-ಯಶಶ್ರೀ ಶಿಂಧೆ
ದಾವೂದ್ ಶೇಖ್-ಯಶಶ್ರೀ ಶಿಂಧೆIANS
Updated on

ನವಿ ಮುಂಬೈ: 20 ವರ್ಷದ ಬೇಲಾಪುರದ ಹಿಂದೂ ಯುವತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ದಾವೂದ್ ಎಂ ಶೇಖ್ ನ ಚಲನ ವಲನ ಪತ್ತೆ ಹಚ್ಚಿದ ಮುಂಬೈ ಪೊಲೀಸರು ಕರ್ನಾಟಕದ ಕಲಬುರಗಿಯಲ್ಲಿ ಬಂಧಿಸಿದ್ದಾರೆ.

ಉರಾನ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ದಾವೂದ್ ಶೇಖ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ನವಿ ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತ ದೀಪಕ್ ಸಾಕೋರೆ ತಿಳಿಸಿದ್ದಾರೆ. ಕಲಬುರಗಿಯ ಶಹಾಪುರ ಬೆಟ್ಟ ಪ್ರದೇಶದಿಂದ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ಮುಂಬೈಗೆ ಕರೆತರುತ್ತಿದ್ದಾರೆ ಎಂದು ಸಾಕೋರೆ ತಿಳಿಸಿದ್ದಾರೆ. ಜುಲೈ 27ರಂದು ನವಿ ಮುಂಬೈನ ಉರಾನ್ ರೈಲ್ವೆ ನಿಲ್ದಾಣದ ಬಳಿ ಪೊದೆಗಳಲ್ಲಿ 20 ವರ್ಷದ ಯುವತಿಯ ಶವ ಪತ್ತೆಯಾದ ಪ್ರಕರಣವನ್ನು ಭೇದಿಸಲು ಬಹು ತಂಡಗಳನ್ನು ರಚಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ದಾವೂದ್ ಶೇಖ್ ಜುಲೈ 22ಕ್ಕೆ ಉರಾನ್ ಗೆ ಬಂದಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದನು. ಸದ್ಯ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ನವಿ ಮುಂಬೈ ಅಪರಾಧ ವಿಭಾಗದ ಡಿಸಿಪಿ ಅಮಿತ್ ಕಾಳೆ ತಿಳಿಸಿದ್ದಾರೆ. ಸದ್ಯ ವಿಚಾರಣೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣದಲ್ಲಿ ದಾವೂದ್ ಒಬ್ಬನೇ ಆರೋಪಿ. ಯುವತಿ ಯಶಶ್ರೀ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ತಂಡವು ಆರೋಪಿಯನ್ನು ನವಿ ಮುಂಬೈಗೆ ಕರೆತಂದ ನಂತರ ನಾವು ಹೆಚ್ಚಿನ ತನಿಖೆ ನಡೆಸುತ್ತೇವೆ. ದಾವೂದ್ ಇಷ್ಟು ದಿನ ಕರ್ನಾಟಕದ ಕಲಬುರಗಿಯ ತನ್ನ ಸಂಬಂಧಿಕರೊಂದಿಗೆ ತಲೆಮರೆಸಿಕೊಂಡಿದ್ದನು. ದಾವೂದ್‌ನನ್ನು ಅಡಗಿಸಲು ಯಾರು ಸಹಾಯ ಮಾಡಿದ್ದಾರೆ ಎಂಬುದನ್ನೂ ನಾವು ಪತ್ತೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ದಾವೂದ್ ಶೇಖ್-ಯಶಶ್ರೀ ಶಿಂಧೆ
ಮಧ್ಯಪ್ರದೇಶ: ಹೋಟೆಲ್ ಕೊಠಡಿಯಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ, ಲವ್ ಜಿಹಾದ್ ಶಂಕೆ!

ಜುಲೈ 25ರಂದು ಯಶಶ್ರಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬೇಲಾಪುರದಿಂದ ಬಂದಿದ್ದಳು. ಆದರೆ ರಾತ್ರಿಯಾದರೂ ಮಗಳು ಮನೆಗೆ ಬಾರದಿದ್ದನ್ನು ಕಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. 2019ರಲ್ಲಿ ಯಶಶ್ರೀಯ ಬಗ್ಗೆ ತಿಳಿದಿದ್ದ ಶೇಖ್ ತನ್ನೊಂದಿಗೆ ಸ್ನೇಹ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಆತನ ವಿರುದ್ಧ ಸಂತ್ರಸ್ತೆಯ ತಂದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಅನಂತರ ಬಂಧಿಸಲಾಗಿತ್ತು. ಸುಮಾರು ಆರು ತಿಂಗಳು ಜೈಲಿನಲ್ಲಿದ್ದ ಶೇಖ್ ಬಿಡುಗಡೆಯಾದ ಬಳಿಕ ತನ್ನ ಕರ್ನಾಟಕಕ್ಕೆ ಬಂದು ಡ್ರೈವರ್ ಕೆಲಸ ಮಾಡಿಕೊಂಡಿದ್ದನು. ಈ ಮಧ್ಯೆ ಯಶಶ್ರೀ ಮತ್ತೊಬ್ಬ ಹುಡುಗನೊಂದಿಗೆ ಪ್ರೀತಿಸುತ್ತಿದ್ದ ವಿಚಾರ ತಿಳಿದ ದಾವೂದ್ ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಕಿರೀಟ್ ಸೋಮಯ್ಯ ಹತ್ಯೆಗೀಡಾದವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನನ್ನು ಒತ್ತಾಯಿಸಿದ್ದಾರೆ. ಎಕ್ಸ್ ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಟ್ಯಾಗ್ ಮಾಡಿದ ಸೋಮಯ್ಯ, ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಸೇರಿಸಬೇಕು ಎಂದು ಸೋಮಯ್ಯ ತಮ್ಮ ಮಾಜಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com