ಬಡವರಿಗೆ ಮನೆ ನಿರ್ಮಾಣಕ್ಕೆ ಉಚಿತ ಮರಳು ನೀಡುವುದಾಗಿ ಜಾರ್ಖಂಡ್ ಸಿಎಂ ಘೋಷಣೆ

ಮರಳಿನ ಕೊರತೆಯಿಂದಾಗಿ ಬೆಲೆ ಏರಿಕೆಯ ವಿಷಯವು ಸರ್ಕಾರದ ಗಮನಕ್ಕೆ ಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹೇಮಂತ್ ಸೊರೆನ್
ಹೇಮಂತ್ ಸೊರೆನ್
Updated on

ರಾಂಚಿ: ಜಾರ್ಖಂಡ್‌ನಲ್ಲಿ ಮರಳು ಬಿಕ್ಕಟ್ಟಿನ ಮಧ್ಯೆ, ಮಂಗಳವಾರ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮನೆ ನಿರ್ಮಾಣಕ್ಕಾಗಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವ ಬಡವರಿಗೆ ಉಚಿತವಾಗಿ ಮರಳು ನೀಡಲಾಗುವುದು ಎಂದು ಘೋಷಿಸಿದರು.

ಜಾರ್ಖಂಡ್ ಅಸೆಂಬ್ಲಿಯಲ್ಲಿ ಮಾತನಾಡಿದ ಸೊರೆನ್, ರಾಜ್ಯಾದ್ಯಂತ ಬಡವರಿಗೆ ಅಬುವಾ ಆವಾಸ್, ಪಿಎಂ ಆವಾಸ್ ಅಥವಾ ವೈಯಕ್ತಿಕ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಮರಳಿನ ಸಮಸ್ಯೆಯನ್ನು ಸದನದಲ್ಲಿ ಪದೇಪದೆ ಪ್ರಸ್ತಾಪಿಸಲಾಗುತ್ತಿದೆ ಮತ್ತು ಮರಳು ಬೆಲೆ ಏರಿಕೆಯ ಭಾರವನ್ನು ಅವರು ಹೊರಬೇಕಾಗಿದೆ ಎಂದರು.

ಮರಳಿನ ಕೊರತೆಯಿಂದಾಗಿ ಬೆಲೆ ಏರಿಕೆಯ ವಿಷಯವು ಸರ್ಕಾರದ ಗಮನಕ್ಕೆ ಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮರಳಿನ ಬೆಲೆಯನ್ನು ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಬಡವರಿಗೆ ಉಚಿತವಾಗಿ ಮರಳು ದೊರೆಯುವಂತೆ ಮಾಡಲಾಗುವುದು ಎಂದು ಸದನಕ್ಕೆ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಹೇಮಂತ್ ಸೊರೆನ್
ಜಾರ್ಖಂಡ್‌: ಬುಡಕಟ್ಟು ವಿದ್ಯಾರ್ಥಿಗಳೊಂದಿಗೆ ಘರ್ಷಣೆ, 6 ಪೊಲೀಸರು ಸೇರಿದಂತೆ 15 ಮಂದಿಗೆ ಗಾಯ

ಅಬುವಾ ಆವಾಸ್, ಪಿಎಂ ಆವಾಸ್ ಅಥವಾ ವೈಯಕ್ತಿಕವಾಗಿ ತಮ್ಮ ಮನೆಗಳನ್ನು ನಿರ್ಮಿಸುವ ಬಡವರಿಗೆ ಸುಲಭವಾಗಿ ಮರಳು ಸಿಗುತ್ತಿಲ್ಲ ಮತ್ತು ಕೆಲವರು ಹೆಚ್ಚಿನ ಬೆಲೆಗೆ ಮರಳು ಪಡೆಯುತ್ತಿದ್ದಾರೆ. ಇದನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೊರೆನ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com