'ಪರಿಸ್ಥಿತಿ ನಮ್ಮ ಪರವಾಗಿದೆ, ಹಾಗೆಂದು ಅತಿಯಾದ ಆತ್ಮವಿಶ್ವಾಸ ಬೇಡ': ಪಕ್ಷದ ಸಂಸದೀಯ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿಕೆ

ಚುನಾವಣೆಯಲ್ಲಿ ನಾವು ಕಂಡಿರುವ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ರಾಷ್ಟ್ರ ರಾಜಕೀಯವು ಪರಿವರ್ತನೆಯಾಗುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಅತ್ಯಂತ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದರು.
'ಪರಿಸ್ಥಿತಿ ನಮ್ಮ ಪರವಾಗಿದೆ, ಹಾಗೆಂದು ಅತಿಯಾದ ಆತ್ಮವಿಶ್ವಾಸ ಬೇಡ': ಪಕ್ಷದ ಸಂಸದೀಯ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿಕೆ
Updated on

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ಕಾಂಗ್ರೆಸ್ ಸಂಸದೀಯ ಪಕ್ಷ ಸಭೆ ನಡೆಯಿತು, ಅದರಲ್ಲಿ ಪಕ್ಷದ ಅಧಿನಾಯಕಿ ನಾಯಕರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ "ಮಹೌಲ್ (ಸಾರ್ವಜನಿಕ ಅಭಿಪ್ರಾಯ)" ಪಕ್ಷದ ಪರವಾಗಿದೆ. ಆದರೆ ಈ ಸಾರ್ವಜನಿಕರ ಅಭಿಪ್ರಾಯದ ವೇಗ ಮತ್ತು ಅಭಿಮಾನವನ್ನು ಚುನಾವಣೆಯಲ್ಲಿ ನಾವು ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಸಂಸದೀಯ ಪಕ್ಷ ಸಭೆಯಲ್ಲಿ ಹೇಳಿದ್ದೇನು?: ನಾವು ಸಂತೃಪ್ತರಾಗಬಾರದು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು. ಸಭೆ ಚುನಾವಣೆಯಲ್ಲಿ ನಾವು ಕಂಡಿರುವ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಮೂಲಕ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ರಾಷ್ಟ್ರ ರಾಜಕೀಯವು ಪರಿವರ್ತನೆಯಾಗುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಅತ್ಯಂತ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರದ ಪ್ರಾಬಲ್ಯ ಕಡಿಮೆಯಾದರೂ ಕೂಡ ಪಾಠ ಕಲಿತಿಲ್ಲ. ಸಮುದಾಯಗಳನ್ನು ವಿಭಜಿಸುವ, ಭಯ ಮತ್ತು ದ್ವೇಷದ ವಾತಾವರಣವನ್ನು ಹರಡುವ ಅವರ ನೀತಿಯನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಅದೃಷ್ಟವಶಾತ್, ಸುಪ್ರೀಂ ಕೋರ್ಟ್ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದೆ ಎಂದು ಅವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರವು ಕನ್ವರ್ ಯಾತ್ರಾ ಮಾರ್ಗದಲ್ಲಿರುವ ತಿನಿಸು ಕೇಂದ್ರಗಳಲ್ಲಿ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ಹೊರಡಿಸಿದ ಆದೇಶಗಳ ತಡೆಯನ್ನು ಉಲ್ಲೇಖಿಸಿದರು.

ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾದ ಆವೇಗ ಮತ್ತು ಅಭಿಮಾನವನ್ನು ಉಳಿಸಿಕೊಳ್ಳುವಂತೆ ಪಕ್ಷದ ನಾಯಕರನ್ನು ಒತ್ತಾಯಿಸಿದರು.

'ಪರಿಸ್ಥಿತಿ ನಮ್ಮ ಪರವಾಗಿದೆ, ಹಾಗೆಂದು ಅತಿಯಾದ ಆತ್ಮವಿಶ್ವಾಸ ಬೇಡ': ಪಕ್ಷದ ಸಂಸದೀಯ ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿಕೆ
ಬಜೆಟ್ ಬಗ್ಗೆ ರಾಹುಲ್ ಗಾಂಧಿ ಭಾಷಣ ಕೇಳಿ ತಲೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್!

ನಾವು ಇಲ್ಲಿಗೇ ತೃಪ್ತರಾಗಿರಬಾರದು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಬಾರದು. 'ಮಹೌಲ್' ನಮಗೆ ಅನುಕೂಲಕರವಾಗಿದೆ, ಆದರೆ ನಾವು ಉದ್ದೇಶದ ಪ್ರಜ್ಞೆಯೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಉತ್ತಮ ಪ್ರದರ್ಶನ ನೀಡಿದರೆ, ಲೋಕಸಭೆ ಚುನಾವಣೆಯಲ್ಲಿ ನಾವು ಕಂಡ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಧೈರ್ಯವನ್ನು ನಾನು ಹೇಳುತ್ತೇನೆ. ಯ ರಾಜಕೀಯ ಪರಿವರ್ತನೆಗೆ ಆಗ ಒಳಗಾಗುತ್ತದೆ ಎಂದರು.

ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳು ಮತ್ತು ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯ ಮುನ್ನ ಅವರ ಹೇಳಿಕೆಗಳು ಬಂದಿವೆ.

ವಿಶೇಷವಾಗಿ ರೈತರು ಮತ್ತು ಯುವಕರ ಒತ್ತಾಯದ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಕೇಂದ್ರ ಬಜೆಟ್ ನ್ನು ಟೀಕಿಸಿದರು. ಹಲವಾರು ಪ್ರಮುಖ ಕ್ಷೇತ್ರಗಳಲ್ಲಿನ ಹಂಚಿಕೆಗಳು ಪೂರೈಸಬೇಕಾದ ಕಾರ್ಯಗಳಿಗೆ ನ್ಯಾಯ ಒದಗಿಸಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com