ದೆಹಲಿಯಲ್ಲಿ ನೀರಿನ ಬಿಕ್ಕಟ್ಟು: ತಮ್ಮ ಬಳಿ ಹೆಚ್ಚಿನ ನೀರಿಲ್ಲ- ಕೋರ್ಟ್ ಗೆ ಹಿಮಾಚಲ ಪ್ರದೇಶ

ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದ್ದು, ನಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ನೀರಿಲ್ಲ ಎಂದು ಹಿಮಾಚಲ ಪ್ರದೇಶ ಸರ್ಕಾರ ಹೇಳಿದೆ.
File pic
ದೆಹಲಿ ನೀರಿನ ಬಿಕ್ಕಟ್ಟು- ಸುಪ್ರೀಂ ಕೋರ್ಟ್ online desk
Updated on

ದೆಹಲಿ: ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದ್ದು, ನಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ನೀರಿಲ್ಲ ಎಂದು ಹಿಮಾಚಲ ಪ್ರದೇಶ ಸರ್ಕಾರ ಹೇಳಿದೆ.

ಈ ಹಿಂದೆ ದೆಹಲಿ ಸರ್ಕಾರ ಹಿಮಾಚಲ ಪ್ರದೇಶದಿಂದ ಹರ್ಯಾಣಗೆ ಬಿಡುಗಡೆ ಮಾಡಿದ್ದ ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುವಂತೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಮೊರೆ ಹೋಗಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ತಮ್ಮ ಬಳಿ 136 ಕ್ಯುಸೆಕ್ಸ್ ಗಳಷ್ಟು ಹೆಚ್ಚುವರಿ ನೀರಿಲ್ಲ ಎಂದು ಕೋರ್ಟ್ ಗೆ ಹಿಮಾಚಲ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಕೋರ್ಟ್ ಈಗ ದೆಹಲಿ ಸರ್ಕಾರಕ್ಕೆ Upper Yamuna River Board (UYRB) ಗೆ ನೀರಿನ ಪೂರೈಕೆಗಾಗಿ ಕೇಳುವಂತೆ ಸೂಚಿಸಿದೆ.

File pic
ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯಂತೆ ನಟಿಸಿ 12.7 ಲಕ್ಷ ರೂ. ವಂಚನೆ, ವ್ಯಕ್ತಿಯ ಬಂಧನ

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ರಜಾಕಾಲದ ಪೀಠ ಮಾನವೀಯ ಆಧಾರದ ಮೇಲೆ ರಾಷ್ಟ್ರ ರಾಜಧಾನಿಗೆ ನೀರು ಸರಬರಾಜು ಮಾಡುವಂತೆ ಕೋರಿ ಯುವೈಆರ್‌ಬಿಗೆ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯಗಳ ನಡುವೆ ಯಮುನಾ ನದಿ ನೀರು ಹಂಚಿಕೆಯು ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ ಮತ್ತು ಮಧ್ಯಂತರ ಆಧಾರದ ಮೇಲೆ ಅದನ್ನು ನಿರ್ಧರಿಸುವ ತಾಂತ್ರಿಕ ಪರಿಣತಿಯನ್ನು ಈ ನ್ಯಾಯಾಲಯ ಹೊಂದಿಲ್ಲ ಎಂದು ಪೀಠ ಹೇಳಿದೆ.

1994ರ ತಿಳುವಳಿಕೆ ಪತ್ರದಲ್ಲಿ ಕಕ್ಷಿದಾರರ ಒಪ್ಪಂದದೊಂದಿಗೆ ರಚಿತವಾದ ಸಂಸ್ಥೆಗೆ ಈ ಸಮಸ್ಯೆಯನ್ನು ಪರಿಗಣಿಸಲು ಬಿಡಬೇಕು,’’ ಎಂದು ನ್ಯಾಯಪೀಠ ಹೇಳಿದೆ.

ಹಿಮಾಚಲದ ಹಿಂದಿನ ಹೇಳಿಕೆ

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, UYRB ಹಿಮಾಚಲ ಪ್ರದೇಶ ಹರಿಯಾಣಕ್ಕೆ ಕಳುಹಿಸಿರುವ ಪತ್ರವನ್ನು ಉಲ್ಲೇಖಿಸಿದೆ, ಇದರಲ್ಲಿ ಗುಡ್ಡಗಾಡು ರಾಜ್ಯವು ತನ್ನ ಪಾಲಿನ ಬಳಕೆಯಾಗದ ನೀರನ್ನು ಈಗಾಗಲೇ ಹತ್ನಿಕುಂಡ್ ಬ್ಯಾರೇಜ್‌ಗೆ ನಿರಂತರವಾಗಿ ಹರಿಯುತ್ತಿದೆ ಮತ್ತು ಹರಿಯಾಣ ದೆಹಲಿಗೆ ಬಿಡುಗಡೆ ಮಾಡಬೇಕು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com