
ನವದೆಹಲಿ: ಸೌಥ್ ಗ್ರೂಪ್ ನಿಂದ ಎಎಪಿ ಪಕ್ಷಕ್ಕಾಗಿ ರೂ.100 ಕೋಟಿ ಲಂಚಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಡಿಕೆ ಇಟ್ಟಿದ್ದರು ಎಂದು ಜಾರಿ ನಿರ್ದೇಶನಾಲಯ ಬುಧವಾರ ಹೇಳಿದ್ದು, ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಆರೋಪಿಯಾಗಿ ರೂಪುಗೊಂಡಿರುವ ಎಎಪಿ ಅಪರಾಧ ಎಸಗಿದರೆ ಆ ಪಕ್ಷದ ಉಸ್ತುವಾರಿಯನ್ನು ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಕೇಂದ್ರ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿದಾಗ ಎಎಪಿಯನ್ನು ಆರೋಪಿಯನ್ನಾಗಿ ಹೆಸರಿಸಿರಲಿಲ್ಲ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಕೇಜ್ರಿವಾಲ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರೂ. 100 ಕೋಟಿ ಲಂಚ ನೀಡುವಂತೆ ಕೇಳಿದ್ದರು. ಎಎಪಿ ಪಕ್ಷಕ್ಕಾಗಿ ಅವರು ಫಂಡ್ ಕೇಳಿದ್ದಾರೆ. ಸೌಥ್ ಗ್ರೂಪ್ ನಿಂದ ಕಿಕ್ ಬ್ಯಾಕ್ ಗೆ ಬೇಡಿಕೆ ಇಟ್ಟಿದ್ದಾರೆ. ಅಪರಾಧದಲ್ಲಿ ಅವರು ದೋಷಿ ಅಲ್ಲ ಎಂದು ನೀವು ಹೇಳಬಾರದು. ಎಎಪಿ ಅಪರಾಧದಲ್ಲಿ ಭಾಗಿಯಾದ್ದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಎಲ್ಲಾ ವ್ಯಕ್ತಿಗಳನ್ನು ತಪಿತಸ್ಥರೆಂದು ಪರಿಗಣಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶ ನಿಯಾನ್ ಬಿಂದು ಅವರಿಗೆ ಇಡಿ ಹೇಳಿತು.
ಎಎಪಿಯನ್ನು ಈಗ ಆರೋಪಿಯನ್ನಾಗಿ ಮಾಡಲಾಗಿದೆ. ಇದಕ್ಕೆ ಕೇಜ್ರಿವಾಲ್ ಹೊಣೆಗಾರರು, ಅವರು ಎಎಪಿಯ ರಾಷ್ಟ್ರೀಯ ವಕ್ತಾರರಾಗಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತು. ಈ ಮಧ್ಯೆ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಸ್ತರಿಸಿದರು.
Advertisement