ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯಾ ಅತ್ಯಾಪ್ತನಿಗೆ ಗುಂಡಿಕ್ಕಿ ಹತ್ಯೆ

ಎಂಜಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಮನ್‌ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಳೆ ವೈಷಮ್ಯದಿಂದ ಪಿಯೂಷ್ ಮತ್ತು ಅರ್ಜುನ್ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದ್ದು ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮೋನು-ಕೈಲಾಶ್ ವಿಜಯವರ್ಗಿಯಾ
ಮೋನು-ಕೈಲಾಶ್ ವಿಜಯವರ್ಗಿಯಾ
Updated on

ಭೋಪಾಲ್: ಸಚಿವ ಕೈಲಾಶ್ ವಿಜಯವರ್ಗಿಯ ಅತ್ಯಾಪ್ತನಿಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತನನ್ನು ಬಿಜೆಪಿ ಯುವ ಮೋರ್ಚಾದ ನಗರ ಉಪಾಧ್ಯಕ್ಷ ಮೋನು ಕಲ್ಯಾಣೆ ಮಧ್ಯಪ್ರದೇಶದ ರಾಜ್ಯ ಸಚಿವ ಕೈಲಾಶ್ ವಿಜಯವರ್ಗಿಯಾ ಮತ್ತು ಅವರ ಮಗ ಆಕಾಶ್ ವಿಜಯವರ್ಗಿಯಗೆ ನಿಕಟವಾಗಿದ್ದರು.

ಎಂಜಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಮನ್‌ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಳೆ ವೈಷಮ್ಯದಿಂದ ಪಿಯೂಷ್ ಮತ್ತು ಅರ್ಜುನ್ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದ್ದು ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಜೈಲು ರಸ್ತೆಯಲ್ಲಿರುವ ವಿಜಯ್ ಭಂಗ್ ಗೋಟಾ ಮುಂಭಾಗದಲ್ಲಿ ಕೊಲೆ ನಡೆದಿದೆ. ಮೋನುವನ್ನು ಹತ್ಯೆಗೈದ ಪಾತಕಿಗಳು ಆತನ ಮನೆಯ ಸಮೀಪವೇ ವಾಸವಿದ್ದರು. ಹತ್ಯೆಯ ನಂತರ, ಮೋನು ಮನೆಯ ಹೊರಗೆ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕೊಲೆಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ಜೈಲ್ ರಸ್ತೆಯ ಉಷಾ ಫಾಟಕ್ ನಿವಾಸಿ ಮೋನು ಕಲ್ಯಾಣೆ ಇಂದು ಬೆಳಗ್ಗೆ ಬಿಜೆಪಿ ರ್ಯಾಲಿ ನಡೆಸಿದರು. ಇದಕ್ಕಾಗಿ ಅವರು ತಡರಾತ್ರಿಯವರೆಗೂ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕುತ್ತಿದ್ದರು.

ಮೋನು-ಕೈಲಾಶ್ ವಿಜಯವರ್ಗಿಯಾ
ಮಹಿಳಾ ಪೇದೆ ಜೊತೆ ನಗ್ನ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅಧಿಕಾರಿಗೆ ಹಿಂಬಡ್ತಿ: ಉಪ ಅಧೀಕ್ಷಕ ಹುದ್ದೆಯಿಂದ ಕಾನ್‌ಸ್ಟೆಬಲ್‌!

ಈ ವೇಳೆ ಇಬ್ಬರು ಯುವಕರು ಬೈಕ್‌ನಲ್ಲಿ ಮೋನು ಬಳಿ ಬಂದು ನಂಬರ್ ಕೇಳಿದ್ದಾರೆ. ಮೋನು ಮೊಬೈಲ್ ತೆಗೆದ ಕೂಡಲೇ ದುಷ್ಕರ್ಮಿಗಳು ಪಿಸ್ತೂಲ್ ತೆಗೆದು ಮೋನು ಎದೆಗೆ ಗುಂಡು ಹಾರಿಸಿ ಓಡಿ ಹೋಗಿದ್ದಾರೆ. ಮೋನು ಗುಂಡು ಹಾರಿಸಿದ ನಂತರ, ಅವರ ಸ್ನೇಹಿತ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಕೆಲ ದಿನಗಳ ಹಿಂದೆ ಅರ್ಜುನ್ ಮತ್ತು ಮೋನು ನಡುವೆ ಜಗಳವಾಗಿತ್ತು. ಈ ಮಾಹಿತಿಯೂ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com