'ಲೋಕ' ಚುನಾವಣೆಗೂ ಮುನ್ನ ಸಿಎಂ ಪಟ್ನಾಯಕ್‌ಗೆ ಶಾಕ್: ಆರು ಬಾರಿ ಗೆಲುವು ಸಾಧಿಸಿದ್ದ BJD ಸಂಸದ ಬಿಜೆಪಿಗೆ ಸೇರ್ಪಡೆ

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (BJD) ದೊಡ್ಡ ಹಿನ್ನಡೆಯಾಗಿದ್ದು ಕಟಕ್ ಸಂಸದ ಮತ್ತು ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಭರ್ತ್ರಿಹರಿ ಮಹತಾಬ್ ಇಂದು ಬಿಜೆಪಿ ಸೇರಿದ್ದಾರೆ.
ಬಿಜೆಪಿ ಸೇರಿದ ಭರ್ತ್ರಿಹರಿ ಮಹತಾಬ್
ಬಿಜೆಪಿ ಸೇರಿದ ಭರ್ತ್ರಿಹರಿ ಮಹತಾಬ್

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮುನ್ನ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (BJD) ದೊಡ್ಡ ಹಿನ್ನಡೆಯಾಗಿದ್ದು ಕಟಕ್ ಸಂಸದ ಮತ್ತು ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಭರ್ತ್ರಿಹರಿ ಮಹತಾಬ್ ಇಂದು ಬಿಜೆಪಿ ಸೇರಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜೈ ಪಾಂಡಾ ಮತ್ತು ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರ ಸಮ್ಮುಖದಲ್ಲಿ ಮಹತಾಬ್ ಬಿಜೆಪಿ ಸದಸ್ಯತ್ವ ಪಡೆದರು.

ಕಟಕ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿದ್ದ ಮಹತಾಬ್ ಅವರು ಮಾರ್ಚ್ 22ರಂದು ಬಿಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಡಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸೂಕ್ತ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಅಂದಿನಿಂದ ಅವರು ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ, ಬಿಜೆಡಿ ಲೋಕಸಭೆ ಚುನಾವಣೆಗೆ ಮಹತಾಬ್ ಅವರ ಟಿಕೆಟ್ ಅನ್ನು ರದ್ದುಗೊಳಿಸಿತ್ತು. ಕಟಕ್‌ನಲ್ಲಿ, ಬಿಜೆಡಿ ಮಹತಾಬ್ ಬದಲಿಗೆ ಸಂರತ್ ಮಿಶ್ರಾ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಬಿಜೆಪಿ ಸೇರಿದ ಭರ್ತ್ರಿಹರಿ ಮಹತಾಬ್
ಲೋಕಸಭೆ, ವಿಧಾನಸಭೆ ಚುನಾವಣೆ: ಒಡಿಶಾದಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ, ಬಿಜೆಡಿ ಜೊತೆ ಮೈತ್ರಿ ಇಲ್ಲ

ಇದಕ್ಕೂ ಮುನ್ನ ಮಾರ್ಚ್ 2ರಂದು ಐದು ಬಾರಿ ಬಿಜು ಜನತಾ ದಳದ ಶಾಸಕ ಅರಬಿಂದ್ ಧಾಲಿ ಅವರು ಆಡಳಿತಾರೂಢ ಬಿಜು ಜನತಾ ದಳಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಬಿಜೆಪಿಗೆ ಸೇರುವುದಾಗಿ ಹೇಳಿದ್ದರು. ಧಾಲಿ ಒಡಿಶಾದ ಖೋರ್ಧಾ ಜಿಲ್ಲೆಯ ಜೈದೇವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಅವರು ತಮ್ಮ ರಾಜೀನಾಮೆಯನ್ನು ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಕಳುಹಿಸಿದ್ದರು. 1992ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದು ಮೊದಲ ಬಾರಿಗೆ ಧಾಳಿ ವಿಧಾನಸಭೆಗೆ ಬಂದಿದ್ದರು. ಇದಾದ ನಂತರ ಅವರು ಬಿಜು ಜನತಾ ದಳಕ್ಕೆ ಸೇರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com