ಭೂ ಕಬಳಿಕೆ ಪ್ರಕರಣ: ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಿಬಿಐ ಸಮನ್ಸ್ ಜಾರಿ!

ಕೇಂದ್ರೀಯ ತನಿಖಾ ದಳ (ಸಿಬಿಐ) ಸಂದೇಶ್ ಖಲಿಯಲ್ಲಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ.
CBI
ಸಿಬಿಐ online desk
Updated on

ಕೋಲ್ಕತ್ತ: ಕೇಂದ್ರೀಯ ತನಿಖಾ ದಳ (ಸಿಬಿಐ) ಸಂದೇಶ್ ಖಲಿಯಲ್ಲಿ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಹಜಹಾನ್ ನ ನಾಪತ್ತೆಯಾಗಿರುವ ಸಹೋದರನಿಗೆ ಸಮನ್ಸ್ ಜಾರಿ ಮಾಡಿದೆ.

ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧನಕ್ಕೊಳಗಾಗಿದ್ದು, ಪಕ್ಷದಿಂದ ಅಮಾನತುಗೊಂಡಿದ್ದಾರೆ. ಶಹಜಹಾನ್ ಸಹೋದರ ಶೇಖ್ ಸಿರಾಜುದ್ದೀನ್ ಈ ಭೂಕಬಳಿಕೆ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈಗ ನಾಪತ್ತೆಯಾಗಿದ್ದಾನೆ.

"ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 6 ರಂದು ಕೋಲ್ಕತ್ತಾ ಕಚೇರಿಯಲ್ಲಿ ನಮ್ಮ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಾವು ಶಾಜಹಾನ್ ಅವರ ಸಹೋದರನಿಗೆ ಸಮನ್ಸ್ ನೀಡಿದ್ದೇವೆ. ನಮ್ಮ ಅಧಿಕಾರಿಗಳು ಅವರನ್ನು ಹುಡುಕಲು ಅವರ ನಿವಾಸಕ್ಕೆ ಹೋದರು ಆದರೆ ಅವರು ಅಲ್ಲಿ ಇರಲಿಲ್ಲ" ಎಂದು ಅಧಿಕಾರಿ ಪಿಟಿಐಗೆ ತಿಳಿದ್ದಾರೆ.

CBI
ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ಸಿರಾಜುದ್ದೀನ್ ನಿವಾಸದಿಂದ ತೆರಳುವ ಮುನ್ನ ಸಿಬಿಐ ಅಧಿಕಾರಿಗಳು ಅವರ ನಿವಾಸದ ಮುಂಭಾಗ ‘ಸಮನ್ಸ್’ ನೋಟಿಸ್ ಅಂಟಿಸಿದ್ದರು.

ಸಿಬಿಐ ಅಧಿಕಾರಿಗಳ ಮತ್ತೊಂದು ತಂಡ ಬುಧವಾರ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ ಖಾಲಿಯಲ್ಲಿರುವ 'ಶಾಜಹಾನ್ ಮಾರುಕಟ್ಟೆ'ಗೆ ತೆರಳಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಂಗಡಿಯವರೊಂದಿಗೆ ಮಾತನಾಡಿರುವುದಾಗಿ ಹೇಳಿದೆ.

"ಈ ಉದ್ಯಮಿಗಳು ಶಾಜಹಾನ್‌ಗೆ ನಿಕಟರಾಗಿದ್ದರು ಮತ್ತು ಹಗರಣದಲ್ಲಿ ಪಾತ್ರ ವಹಿಸಿರಬಹುದು. ನಮ್ಮ ಅಧಿಕಾರಿಗಳು ಅವರೊಂದಿಗೆ ಮಾತನಾಡಿದ್ದಾರೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com