Lok Sabha Election 2024 Voting Live Updates: ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ; 2ನೇ ಹಂತದಲ್ಲಿ ಶೇ.66 ರಷ್ಟು ಮತದಾನ

2024ನೇ ಸಾಲಿನ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ಪ್ರಕ್ರಿಯೆ ಪ್ರಗತಿಯಲ್ಲಿ ಸಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಮಧ್ಯಾಹ್ನ 3 ಗಂಟೆ ವರೆಗೆ ದೇಶಾದ್ಯಂತ ಶೇ.51 ರಷ್ಟು ಮತದಾನ ನಡೆದಿದ್ದರೆ, ಕರ್ನಾಟಕದಲ್ಲಿ ಶೇ.54.20 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ 2ನೇ ಹಂತದ ಮತದಾನ
ರಾಜ್ಯದಲ್ಲಿ 2ನೇ ಹಂತದ ಮತದಾನ online desk

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ; 2ನೇ ಹಂತದಲ್ಲಿ ಶೇ.66 ರಷ್ಟು ಮತದಾನ; ಜೂನ್ 4ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು: ಲೋಕಸಭೆ ಚುನಾವಣೆ 2024ಕ್ಕೆ ದೇಶದಲ್ಲಿ ಇಂದು ಮಂಗಳವಾರ 3 ನೇ ಹಂತದ ಮತದಾನ ಸಾಗುತ್ತಿದ್ದು, ಕರ್ನಾಟಕದ 14 ಸಂಸತ್ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ಇಂದು ಕರ್ನಾಟಕದಲ್ಲಿ 227 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಒಟ್ಟು 2,59,52,958 ಮತದಾರರು 3ನೇ ಹಂತದ ಮತದಾನದಲ್ಲಿ ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.

11 ರಾಜ್ಯಗಳ 93 ಸ್ಥಾನಗಳಿಗೆ ಮತದಾನ ಆರಂಭವಾಗಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಲೋಕಸಭೆ ಚುನಾವಣೆ 2024ರ ಮೂರನೇ ಹಂತದ ಮತದಾನದಲ್ಲಿ ಮತ ಚಲಾಯಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮತಗಟ್ಟೆಯ ಹೊರಗೆ ನಿಂತಿದ್ದ ಮತದಾರರಿಗೆ ತಮ್ಮ ಆಟೋಗ್ರಾಫ್ ನೀಡಿದರು. 

ರಾಜ್ಯದ 14 ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

3ನೇ ಹಂತದ ಚುನಾವಣೆಗೆ ಮತದಾನ ನಡೆಯಲಿರುವ ಕ್ಷೇತ್ರಗಳೆಂದರೆ- ಬಿಜಾಪುರ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ.

ಹಂತ-3ರ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು- 20,98,202 ಮತ್ತು ಉತ್ತರ ಕನ್ನಡದಲ್ಲಿ ಕಡಿಮೆ- 16,41,156 ಮತದಾರರಿದ್ದಾರೆ. ಎರಡನೇ ಅತಿ ಹೆಚ್ಚು ಮತದಾರರು ರಾಯಚೂರು ಜಿಲ್ಲೆಯಲ್ಲಿದ್ದಾರೆ- 20,10,103.

6,90,929 ಯುವ ಮತದಾರರಿದ್ದು, 2,29,263 ಮತದಾರರು 85 ವರ್ಷ ಮೇಲ್ಪಟ್ಟವರು ಮತ್ತು 3,43,966 ಮತದಾರರು ಅಂಗವಿಕಲರು (PwD) ಎಂದು ಪಟ್ಟಿ ಮಾಡಲಾಗಿದೆ.

ಸ್ಪರ್ಧಿಸಿರುವ 227 ಅಭ್ಯರ್ಥಿಗಳಲ್ಲಿ- 206 ಪುರುಷರು ಮತ್ತು 21 ಮಹಿಳೆಯರು. ಬಹುಜನ ಸಮಾಜ ಪಕ್ಷದಿಂದ ಒಂಬತ್ತು ಅಭ್ಯರ್ಥಿಗಳು ಮತ್ತು ತಲಾ 14 ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು. 3ನೇ ಹಂತದ ಚುನಾವಣೆಯಲ್ಲಿ 117 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ದಾವಣಗೆರೆಯಲ್ಲಿ ಅತಿ ಹೆಚ್ಚು (30) ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶಿವಮೊಗ್ಗ (23) ಮತ್ತು ಬಾಗಲಕೋಟೆ (22) ನಂತರದ ಸ್ಥಾನದಲ್ಲಿದ್ದಾರೆ. ಬಿಜಾಪುರ ಮತ್ತು ರಾಯಚೂರಿನಿಂದ ತಲಾ ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಶಿವಮೊಗ್ಗದಲ್ಲಿ ಮತದಾನ ಮಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರರಾದ ಬಿ ವೈ ವಿಜಯೇಂದ್ರ ಮತ್ತು ಬಿ ವೈ ರಾಘವೇಂದ್ರ 

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರರು, ರಾಜ್ಯ ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ಮತ್ತು ಶಿವಮೊಗ್ಗದ ಹಾಲಿ ಸಂಸದ ಹಾಗೂ ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ಶಿವಮೊಗ್ಗದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಕಾಂಗ್ರೆಸ್ ನಿಂದ ಗೀತಾ ಶಿವರಾಜಕುಮಾರ್ ಅವರು ಕಣಕ್ಕಿಳಿದಿದ್ದು, ಬಿಜೆಪಿಯ ಕೆ.ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ ನೀಡಿ: ಮತದಾರರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ 

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನತೆ ಕೇವಲ ತಮ್ಮ ಹಕ್ಕು ಚಲಾಯಿಸುವುದು ಮಾತ್ರವಲ್ಲದೆ ಸೂಕ್ತ ಅಭ್ಯರ್ಥಿಯನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಆರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲು ನಾನು ನಿಮ್ಮನ್ನು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇನೆ, ಇದರಿಂದ ನಮ್ಮ ಸಂಸ್ಥೆಗಳು ತಮ್ಮ ಸ್ವತಂತ್ರ ಸ್ವರೂಪಕ್ಕೆ ಮರಳಬಹುದು ಮತ್ತು ವಿವೇಚನಾರಹಿತ ವ್ಯಕ್ತಿಗಳ ಕೈಕೆಳಗೆ ಅಧಿಕಾರ ಇರುವುದಿಲ್ಲ ಎಂದು ಹೇಳಿದ್ದಾರೆ.

ಕಿರೀಟ ತೊಟ್ಟು ಸಂಭ್ರಮಿಸಿದ ಮತದಾರರು 

ಶಿವಮೊಗ್ಗ ನಗರದ ಮತಗಟ್ಟೆ ಸಂಖ್ಯೆ 283ರಲ್ಲಿ ಮತದಾರರು ಮತ ಚಲಾಯಿಸಿದ ನಂತರ ಕಿರೀಟ ಧರಿಸಿ ಸಂಭ್ರಮಿಸಿದರು. ಮತಗಟ್ಟೆ ಸಿಬ್ಬಂದಿ ರಾಜ-ರಾಣಿಯರ ಉಡುಗೆ ತೊಟ್ಟಿದ್ದರು.

Karnataka Lok Sabha Election 2024 LIVE: ಮತಯಂತ್ರದಲ್ಲಿ ಸಮಸ್ಯೆ, 1 ಗಂಟೆ ತಡವಾಗಿ ಮತದಾನ ಆರಂಭ

ಶಿವಮೊಗ್ಗ: ಹೊಸನಗರ ತಾಲೂಕಿನ ಸುಳುಗೋಡು ಗ್ರಾಮ ಮತಗಟ್ಟೆ ಸಂಖ್ಯೆ 171 ರಲ್ಲಿ ತಾಂತ್ರಿಕ ಕಾರಣದಿಂದ ಮತಯಂತ್ರದಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದರಿಂದ ಒಂದು ಗಂಟೆ ತಡವಾಗಿ ಮತದಾನ ಆಂಭವಾಯಿತು.

ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ವಾರದ ಹಿಂದೆ ಇದೇ ಬಡಾವಣೆಯ ನಿವಾಸಿ ಲಕ್ಷ್ಮಿ ಎಂಬುವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ. ಮಗ ಕೂಡ ಮೃತಪಟ್ಟಿದೆ.  ವೈದ್ಯರ ನಿರ್ಲಕ್ಷ್ಯ ದಿಂದ ತಾಯಿ-ಮಗು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮತ್ತು ಬಡಾವಣೆಯ ಜನ ಆರೋಪಿಸಿದ್ದರು. ಈ ಹಿನ್ನೆಲಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ.

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿ: ಮೋದಿ

ದೇಶದಲ್ಲಿ 3ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಚುನಾವಣೆಯನ್ನು ಇನ್ನಷ್ಟು ರೋಮಾಂಚಕವಾಗಿಸುತ್ತದೆ ಎಂದು ಹೇಳಿದರು.

"ಇಂದು ಮೂರನೇ ಹಂತದಲ್ಲಿ ಮತ ಚಲಾಯಿಸುತ್ತಿರುವವರೆಲ್ಲರೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ. ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಖಂಡಿತವಾಗಿಯೂ ಚುನಾವಣೆಯನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ 25ರಿಂದ 26 ಸ್ಥಾನದಲ್ಲಿ ಗೆಲ್ಲುತ್ತೇವೆ-ಬಿಎಸ್​ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ,  ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತದಾನ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಬಿಎಸ್​ ಯಡಿಯೂರಪ್ಪ, ಕರ್ನಾಟಕದಲ್ಲಿ 25ರಿಂದ 26 ಸ್ಥಾನದಲ್ಲಿ ಗೆಲ್ಲುತ್ತೇವೆ. ದೇಶದ ಜನ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ. ದೇಶದಲ್ಲಿ ಈ ಬಾರಿ ನಾವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

ಉತ್ತರ ಪ್ರದೇಶದ 10 ಕ್ಷೇತ್ರಗಳಿಗೆ ಮತದಾನ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಇಂದು ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಹೈ-ಪ್ರೊಫೈಲ್ ಮೈನ್‌ಪುರಿ ಸೇರಿದಂತೆ 10 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಸಂಭಾಲ್, ಹತ್ರಾಸ್ (ಎಸ್‌ಸಿ), ಆಗ್ರಾ (ಎಸ್‌ಸಿ), ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬುಡೌನ್, ಅಯೋನ್ಲಾ ಮತ್ತು ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ 1.89 ಕೋಟಿಗೂ ಹೆಚ್ಚು ಮತದಾರರು 100 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಕುಟುಂಬಕ್ಕೆ ಇದು ಪ್ರಮುಖ ಹಂತವಾಗಿದೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಡಿಂಪಲ್ ಯಾದವ್ ಅವರು ತಮ್ಮ ಮಾವ ಮತ್ತು ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದಿರುವ ಮೈನ್‌ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ.

ಎಸ್‌ಪಿ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ ಯಾದವ್ ಅವರು ಫಿರೋಜಾಬಾದ್ ಕ್ಷೇತ್ರವನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ.

ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪಾಲ್ ಯಾದವ್ ಅವರ ಪುತ್ರ ಆದಿತ್ಯ ಯಾದವ್ ಅವರು 2014 ರಲ್ಲಿ ತಮ್ಮ ಸೋದರಸಂಬಂಧಿ ಧರ್ಮೇಂದ್ರ ಯಾದವ್ ಗೆದ್ದಿದ್ದ ಬುದೌನ್ ಕ್ಷೇತ್ರದಿಂದ ಚುನಾವಣಾ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು

ಬೆಳಗಾವಿಯ ಹಿಂಡಲಗಾದಲ್ಲಿ ಮತಗಟ್ಟೆಯೊಳಗೆ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕ್ರಮಸಂಖ್ಯೆಯನ್ನು ತೋರಿಸಿದ್ದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯರೊಬ್ಬರು ದೂರು ದಾಖಲಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ(MCC) ಉಲ್ಲಂಘನೆಯಾಗಿದೆ.

ಲೋಕಸಭೆ ಚುನಾವಣೆ 2024ರ ಕರ್ನಾಟಕದಲ್ಲಿ 14 ಕ್ಷೇತ್ರಗಳ ಎರಡನೇ ಹಂತದ ಮತದಾನದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 9.45ರಷ್ಟು ಮತ ಚಲಾವಣೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಗರಿಷ್ಠ 11.39ರಷ್ಟು, ರಾಯಚೂರಿನಲ್ಲಿ ಕನಿಷ್ಠ ಶೇಕಡಾ 8.27ರಷ್ಟು ಮತದಾನವಾಗಿದೆ.

3ನೇ ಹಂತದಲ್ಲಿ 1,531 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ದೇಶದಲ್ಲಿ 10 ರಾಜ್ಯ, 2 ಕೇಂದ್ರಾಡಳಿತ ಪ್ರದೇಶದ ಒಟ್ಟು 93 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 1,531 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕರ್ನಾಟಕದಲ್ಲಿ 9 ಗಂಟೆವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ 9 ಗಂಟೆವರೆಗೆ ಶೇ.10.79ರಷ್ಟು ಮತದಾನವಾಗಿದೆ. ಬೆಳಗಾವಿ ಕ್ಷೇತ್ರದಲ್ಲಿ ಶೇಕಡಾ 9.31ರಷ್ಟು, ಬಳ್ಳಾರಿ ಕ್ಷೇತ್ರದಲ್ಲಿ ಶೇಕಡಾ 10.36ರಷ್ಟು, ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 9.35ರಷ್ಟು, ಶಿವಮೊಗ್ಗ ಕ್ಷೇತ್ರದಲ್ಲಿ ಶೇಕಡಾ 10.5ರಷ್ಟು ಮತ್ತು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.8.27ರಷ್ಟು ಮತದಾನವಾಗಿದೆ.

ಶಿವಮೊಗ್ಗದಲ್ಲಿ ಶೇ. 11.39 ರಷ್ಟು, ಬಾಗಲಕೋಟೆಯಲ್ಲಿ ಶೇ 8.59ರಷ್ಟು,  ಬಳ್ಳಾರಿಯಲ್ಲಿ ಶೇ. 10.37ರಷ್ಟು, ವಿಜಯಪುರದಲ್ಲಿ ಶೇ. 9.26ರಷ್ಟು, ಚಿಕ್ಕೋಡಿಯಲ್ಲಿ ಶೇ. 10.81ರಷ್ಟು, ದಾವಣಗೆರೆಯಲ್ಲಿ ಶೇ. 9.11ರಷ್ಟು, ಧಾರವಾಡದಲ್ಲಿ ಶೇ. 9.38ರಷ್ಟು, ಕಲಬುರಗಿಯಲ್ಲಿ ಶೇ. 8.71ರಷ್ಟು, ಹಾವೇರಿ ಶೇ. 8.62ರಷ್ಟು, ಕೊಪ್ಪಳದಲ್ಲಿ ಶೇ. 8.79ರಷ್ಟು, ರಾಯಚೂರಿನಲ್ಲಿ ಶೇ. 8.27ರಷ್ಟು,  ಉತ್ತರ ಕನ್ನಡದಲ್ಲಿ ಶೇ. 11.07ರಷ್ಟು ಮತದಾನವಾಗಿದೆ.

ಬಳ್ಳಾರಿಯಲ್ಲಿ ಬಿರುಸಿನಿಂದ ಮತದಾನ ಆರಂಭ

ಬಳ್ಳಾರಿಯಲ್ಲಿ ಬಿರು ಬಿಸಿಲು ಹಿನ್ನೆಲೆ ಬೆಳಗ್ಗೆಯಿಂದಲೇ ಮತಗಟ್ಟೆ ಕೇಂದ್ರಗಳಿಗೆ ವೃದ್ಧರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತು ಮತದಾನ ಚಲಾಯಿಸಿದರು. ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ವಿಧಾನಸಭಾ ಕ್ಷೇತ್ರಗಳಲ್ಲಿಒಟ್ಟು 1972ಮತಗಟ್ಟೆಗಳಿದ್ದು, ಈ ಪೈಕಿ ಬಳ್ಳಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿಒಟ್ಟು 1219ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಶಿಗ್ಗಾವಿಯಲ್ಲಿ ಹಕ್ಕು ಚಲಾಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 

ಮತದಾನಕ್ಕೆ ಬರುವವರಿಗೆ ಪಾನೀಯ ವಿತರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಟ್ಟಿಯ ಸಖಿ ಮತಗಟ್ಟೆ 112 ರಲ್ಲಿ ಮತ ಚಲಾಯಿಸಲು ಬಂದವರಿಗೆ ವೆಲ್ ಕಮ್‌ ಡ್ರಿಂಕ್ಸ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಮುಂದೆ ತಂಪು ಪಾನೀಯ ವಿತರಣೆ ಮಾಡಲಾಗುತ್ತಿದೆ.

ದೇಶದಲ್ಲಿ 3 ನೇ ಹಂತದ ಮತದಾನದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 10.57ರಷ್ಟು ಮತದಾನ

ಮೊದಲ ಎರಡು ಗಂಟೆಗಳಲ್ಲಿ ಸರಾಸರಿ ಶೇಕಡಾ 10.81 ರಷ್ಟು ಮತದಾನ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಮಂಗಳವಾರ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 93 ಕ್ಷೇತ್ರಗಳಲ್ಲಿ ಮತದಾನದ ಮೊದಲ ಎರಡು ಗಂಟೆಗಳಲ್ಲಿ ಅಂದಾಜು ಶೇಕಡಾ 10.81 ಮತದಾನವಾಗಿದೆ.

ಚುನಾವಣಾ ಆಯೋಗದ ಪ್ರಕಾರ, ಮಹಾರಾಷ್ಟ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಕಡಿಮೆ ಮತದಾನದ ಶೇಕಡಾವಾರು ಪ್ರಮಾಣವನ್ನು ಕಂಡಿದೆ. 6. 64 ಶೇಕಡಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ, ಪಶ್ಚಿಮ ಬಂಗಾಳವು ಮೊದಲ ಎರಡು ಗಂಟೆಗಳಲ್ಲಿ 15. 85 ಶೇಕಡಾದೊಂದಿಗೆ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ.

ಇತರ ರಾಜ್ಯಗಳ ಪೈಕಿ ಅಸ್ಸಾಂ ಶೇ.10.12, ಬಿಹಾರ ಶೇ.10.41, ಛತ್ತೀಸ್‌ಗಢ ಶೇ.13.24, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಶೇ.10.13, ಗೋವಾ ಶೇ.13.02, ಗುಜರಾತ್ ಶೇ.9.87, ಕರ್ನಾಟಕ ಶೇ.9.45, ಮಧ್ಯಪ್ರದೇಶ ಶೇ.9.43, ಮಧ್ಯಪ್ರದೇಶ ಶೇ. ಶೇ. ಮತ್ತು ಉತ್ತರ ಪ್ರದೇಶ ಶೇ.12.94 ಎಂದು ಇಸಿ ಹೇಳಿದೆ.

ಭ್ರಷ್ಟಾಚಾರ ಮುಕ್ತ, ಜಾತಿ ಮುಕ್ತ, ರಾಜವಂಶ ಮುಕ್ತ ವ್ಯವಸ್ಥೆಗಾಗಿ ಮತ ನೀಡಿ ಎಂದು ಅಮಿತ್ ಶಾ ಮನವಿ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು. ಭಾರತದ ಅಭಿವೃದ್ಧಿಗೆ ಸ್ಪಷ್ಟವಾದ ನೀಲನಕ್ಷೆಯನ್ನು ಹೊಂದಿರುವ ಸರ್ಕಾರವನ್ನು ಆಯ್ಕೆ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಅವರು ಗಾಂಧಿನಗರ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಈ ಸ್ಥಾನವನ್ನು ಪಕ್ಷದ ಪ್ರತಿಷ್ಠಿತ ಭದ್ರಕೋಟೆ ಎಂದು ಪರಿಗಣಿಸಲಾಗಿದೆ, ಎಲ್‌ಕೆ ಅಡ್ವಾಣಿಯಂತಹ ಅನುಭವಿಗಳು ಪ್ರತಿನಿಧಿಸಿದ ಕ್ಷೇತ್ರ ಗಾಂಧಿನಗರ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅವರ ಕುಟುಂಬಸ್ಥರು ಹುಬ್ಬಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಹಲವಡೆ ಮತದಾನ ಬಹಿಷ್ಕಾರ

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್​ ಜನರು ಮತದಾನ ಬಹಿಷ್ಕರಿಸಿದ್ದಾರೆ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಿದ್ದಾರೆ. ಗುದ್ನೇಪ್ಪನಮಠದ ಬೂತ್​ನಲ್ಲಿ 1,040 ಮತಗಳಿವೆ

ಕರ್ನಾಟಕದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಹೃದಯಾಘಾತದಿಂದ ಮೃತಪಟ್ಟದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ಮಂಗಳವಾರ ತಿಳಿಸಿವೆ.

ನಿನ್ನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ (48ವ) ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯ ಕುಡುಂಬಳದಲ್ಲಿ ಸಹಾಯಕ ಕೃಷಿ ಅಧಿಕಾರಿ ಆನಂದ್ ತೆಲಂಗ್ ಎಂಬ ಯುವಕ (32ವ) ಮೃತಪಟ್ಟಿದ್ದಾರೆ.

ದೇಶದಲ್ಲಿ ಇಂದಿನ ಮತದಾನದಲ್ಲಿ ಹೈವೋಲ್ಟೇಜ್ ಕ್ಷೇತ್ರಗಳು 

ರಾಜ್‌ಕೋಟ್‌, ವಡೋದರಾ (ಗುಜರಾತ್‌), ಧಾರವಾಡ, ಬೆಳಗಾವಿ, ಶಿವಮೊಗ್ಗ(ಕರ್ನಾಟಕ) ಬಾರಾಮತಿ (ಮಹಾರಾಷ್ಟ್ರ), ಬರೇಲಿ, ಆಗ್ರಾ, ಬದೌನ್‌, (ಉತ್ತರ ಪ್ರದೇಶ), ಭೋಪಾಲ್‌, ಗ್ವಾಲಿಯರ್‌ (ಮಧ್ಯಪ್ರದೇಶ), ರಾಯಪುರ, ಬಿಲಾಸ್‌ಪುರ (ಛತ್ತೀಸ್‌ಗಢ), ಕೋಕ್ರಾಜಾರ್‌, ಗುವಾಹಟಿ (ಅಸ್ಸಾಂ), ಜಂಗೀಪುರ, ಮುರ್ಷಿದಾಬಾದ್‌ (ಪ.ಬಂಗಾಳ).

ಕಣದಲ್ಲಿರುವ ಪ್ರಮುಖರು

ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ), ಮಾಜಿ ಸಿಎಂ ಜಗದೀಶ್ ಶೆಟ್ಟರ್(ಬೆಳಗಾವಿ), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(ಹಾವೇರಿ), ಕೇಂದ್ರ ಸಚಿವ ಪ್ರಹ್ಲಾದ ಜೋಶಿ(ಧಾರವಾಢ), ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ (ಗುಣಾ) ಮನ್ಸುಖ್‌ ಮಂಡಾವೀಯ (ಪೋರ್‌ಬಂದರ್‌), ಸುಪ್ರಿಯಾ ಸುಳೆ (ಬಾರಾಮತಿ), ಡಿಂಪಲ್‌ ಯಾದವ್‌ (ಮೈನ್‌ಪುರಿ), ಶಿವರಾಜ್‌ ಸಿಂಗ್‌ ಚೌಹಾಣ್‌ (ವಿಧಿಶಾ), ದಿಗ್ವಿಜಯ್‌ ಸಿಂಗ್‌ (ರಾಜಗಢ), ಶ್ರೀಪಾದ್‌ ನಾಯಕ್‌ (ಗೋವಾ ಉತ್ತರ), ಬದ್ರುದ್ದೀನ್‌ ಅಜ್ಮಲ್‌ (ಧುಬ್ರಿ), ಪ್ರಣಿತಿ ಶಿಂಧೆ (ಸೊಲ್ಲಾಪುರ).

ಮುರ್ಷಿದಾಬಾದ್‌ನಲ್ಲಿ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಟಿಎಂಸಿ ಮತ್ತು ಬಿಜೆಪಿ ನಾಯಕರು ಮತಗಟ್ಟೆಯ ಹೊರಗೆ ಘರ್ಷಣೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಮತಗಟ್ಟೆಯ ಹೊರಗೆ ಬಿಜೆಪಿ ಮತ್ತು ಟಿಎಂಸಿ ನಾಯಕರ ನಡುವೆ ಘರ್ಷಣೆ

ಮುರ್ಷಿದಾಬಾದ್‌ನಲ್ಲಿ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಟಿಎಂಸಿ ಮತ್ತು ಬಿಜೆಪಿ ನಾಯಕರು ಮತಗಟ್ಟೆಯ ಹೊರಗೆ ಘರ್ಷಣೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುರ್ಷಿದಾಬಾದ್‌ನ ಮತಗಟ್ಟೆಯೊಂದರ ಹೊರಗೆ ಹಿಂಸಾಚಾರ ನಡೆದಿದೆ. ಇಬ್ಬರು ಬಿಜೆಪಿ ಮತ್ತು ಟಿಎಂಸಿ ನಾಯಕರು ಜಗಳ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.

ಪಿಟಿಐ ಹಂಚಿಕೊಂಡ ವೀಡಿಯೊದಲ್ಲಿ, ಟಿಎಂಸಿ ನಾಯಕ ಬಿಜೆಪಿ ನಾಯಕರನ್ನು ಕೂಗಲು ಪ್ರಾರಂಭಿಸಿದಾಗ ರೆಕಾರ್ಡ್ ಮಾಡುವುದನ್ನು ಕಾಣಬಹುದು. ಕೊನೆಗೆ ಅವರಿಬ್ಬರ ನಡುವೆ ಘರ್ಷಣೆ ನಡೆಯಿತು.

ಘರ್ಷಣೆ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಮತಗಟ್ಟೆಯ ಬಳಿ ಹಾಜರಿದ್ದ ಪೊಲೀಸರು ಇಬ್ಬರು ನಾಯಕರನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿತು.

ಬೆಳಗ್ಗೆ 11 ಗಂಟೆ ವೇಳೆಗೆ ದೇಶದಲ್ಲಿ ಶೇ. 25.41ರಷ್ಟು ಮತದಾನ

180 ಸದಸ್ಯರ ದೊಡ್ಡ ಕುಟುಂಬದಿಂದ ಮತದಾನ

ಧಾರವಾಡದಲ್ಲಿ ಕೊಪ್ಪದ ಎಂಬ 180 ಸದಸ್ಯರನ್ನು ಹೊಂದಿರುವ ಒಂದೇ ಕುಟುಂಬದ 96 ಮಂದಿ ಮತದಾರರು ಇಂದು ಮತದಾನ ಮಾಡಿ ಕ್ಯಾಮರಾಕ್ಕೆ ಫೋಸ್ ನೀಡಿದ್ದು ಹೀಗೆ.

ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನ

ಲೋಕಸಭೆ ಚುನಾವಣೆಗೆ ದೇಶದಲ್ಲಿ ಮೂರುನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆವರೆಗೆ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಇಲ್ಲಿವರೆಗೆ ಶೇ.18.18ರಷ್ಟು ಮಾತ್ರ ಮತದಾನ ನಡೆದಿದೆ. ಪ್ರಶ್ಚಿಮ ಬಂಗಾಳದಲ್ಲಿ ಶೇ.32.82ರಷ್ಟು ಮತದಾನವಾಗಿದೆ.

  • ಮಹಾರಾಷ್ಟ್ರದಲ್ಲಿ ಶೇ 18.18

  • ಗುಜರಾತ್​ನಲ್ಲಿ ಶೇ 24.35

  • ಉತ್ತರ ಪ್ರದೇಶದಲ್ಲಿ ಶೇ 26.12

  • ಅಸ್ಸಾಂನಲ್ಲಿ ಶೇ 27.34

  • ಬಿಹಾರದಲ್ಲಿ ಶೇ 24.41

  • ಛತ್ತೀಸ್‌ಗಢದಲ್ಲಿ ಶೇ 29.90

  • ಪಶ್ಚಿಮ ಬಂಗಾಳ ಶೇ 32.82

  • ಕರ್ನಾಟಕದಲ್ಲಿ ಶೇ 24.48%

  • ಮಧ್ಯಪ್ರದೇಶದಲ್ಲಿ ಶೇ 30.21 ರಷ್ಟು ಮತದಾನವಾಗಿದೆ.

ಕಲಬುರಗಿ: ಮೊದಲ ಬಾರಿಗೆ ಚುನಾವಣಾ ಸಿಬ್ಬಂದಿಗೆ ಫ್ರೆಶ್ ಉಪಹಾರ-ಊಟ!

Karnataka Lok Sabha Election 2024 LIVE: ಮಧ್ಯಾಹ್ನ 1ರವರೆಗೆ ವಿಜಯಪುರದಲ್ಲಿ ಶೇ40.18 ರಷ್ಟು ಮತದಾನವಾಗಿದೆ. 

ಬಳ್ಳಾರಿ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಅತಿಹೆಚ್ಚು ಶೇಕಡಾ 50.46ರಷ್ಟು ದಾಖಲಾಗಿದೆ. 

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1 ಗಂಟೆಯವರೆಗೆ ಶೇಕಡಾ 40, ಶಿವಮೊಗ್ಗದಲ್ಲಿ ಶೇಕಡಾ 40.09, ಕಲಬುರಗಿಯಲ್ಲಿ ಶೇಕಡಾ 37.47ರಷ್ಟು, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 40.18ರಷ್ಟು ಮತದಾನವಾಗಿದೆ. 

ಬೇಸಿಗೆ ಹೀಟ್ ವೇವ್ ಆರೋಗ್ಯ ಸಮಸ್ಯೆಯಿಂದಾಗಿ ಚುನಾವಣಾ ಮತಗಟ್ಟೆಯಲ್ಲಿ  ಕೆಲಸ ಮಾಡುತ್ತಿದ್ದ ಇಬ್ಬರು ನೌಕರರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಕಳೆದ ಬಾರಿ ಮಾಡಿದ ತಪ್ಪಿಗೆ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ: ಮತ ಚಲಾವಣೆ ಮಾಡಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತು

ಮಧ್ಯಾಹ್ನ 1 ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.41.59ರಷ್ಟು ಮತದಾನ

ವಿಕಲಚೇತನ ಮಹಿಳೆ ಮತ್ತು ವಿಜಯನಗರ ಜಿಲ್ಲೆಯ ಲೋಕಸಭಾ ಚುನಾವಣೆ 2024 ರಾಯಭಾರಿ ಲಕ್ಷ್ಮೀದೇವಿ ಕಾಲಿನಿಂದ ಮತ ಚಲಾಯಿಸಿದರು.

ಮಧ್ಯಾಹ್ನ 3 ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.54.20 ರಷ್ಟು ಮತದಾನ

14 ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಶೇ.59.65, ಹಾವೇರಿಯಲ್ಲಿ ಶೇ.58.45, ಗುಲ್ಬರ್ಗದಲ್ಲಿ ಅತಿ ಕಡಿಮೆ ಶೇ.47.67ರಷ್ಟು ಮತದಾನವಾಗಿದೆ.

ಕೆನರಾ ಲೋಕಸಭಾ ಕ್ಷೇತ್ರದ ಕಿತ್ತೂರು ತಾಲೂಕಿನ ನೇಸರಗಿ ಗ್ರಾಮದ ಮತಗಟ್ಟೆಗಳು ಮಧ್ಯಾಹ್ನ 3 ಗಂಟೆ ವೇಳೆಗೆ ಮತದಾರರಿಲ್ಲದೆ ಬಣಗುಡುತ್ತಿದ್ದವು. ತಾಪಮಾನ ಏರಿಕೆಯಿಂದಾಗಿ ಮತದಾರರು ಈ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿಲ್ಲ ಎನ್ನಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಗ್ರಾಮದ ಒಂಬತ್ತು ಮತಗಟ್ಟೆಗಳಲ್ಲಿ ಶೇ.50ರಷ್ಟು ಮತದಾನವಾಗಿದೆ.

ಕಲಬುರಗಿಯ ಸಂಗನೇಶ್ವರ ಕಾಲೋನಿಯಲ್ಲಿರುವ ಮತಗಟ್ಟೆ ಸಂಖ್ಯೆ 137ಕ್ಕೆ ಮೋಹನ ಸಿತನೂರು ಪರಿವಾರದ 30 ಸದಸ್ಯರು ಒಟ್ಟಾಗಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ವಿಜಯನಗರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ಕಲಾವಿದೆ ಮಂಜಮ್ಮ ಜೋಗತಿ ಮರಿಯಮ್ಮನಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು

ಸಂಜೆ 5 ರವರೆಗೆ ಕರ್ನಾಟಕದಲ್ಲಿ ಶೇ.60.05 ರಷ್ಟು ಮತದಾನ

ಸಂಜೆ 5 ಗಂಟೆವರೆಗೆ, ಒಟ್ಟಾರೆ ಮತದಾನದ ಪ್ರಮಾಣ 66.05% ರಷ್ಟಿದೆ. ಚಿಕ್ಕೋಡಿಯಲ್ಲಿ ಗರಿಷ್ಠ 72.75% ರಷ್ಟು ಮತದಾನವಾಗಿದೆ ಮತ್ತು ಗುಲ್ಬರ್ಗದಲ್ಲಿ 57.20% ರಷ್ಟು ಕಡಿಮೆ ಮತದಾನವಾಗಿದೆ.

Advertisement

X
Kannada Prabha
www.kannadaprabha.com