ಉತ್ತರ ಭಾರತದಲ್ಲಿ 'ನೌತಾಪ' ಪ್ರಖರಕ್ಕೆ ಜನ ತತ್ತರ: ಅತ್ಯಧಿಕ ಶಾಖಕ್ಕೆ ರಾಜಸ್ತಾನದಲ್ಲಿ 7 ಮಂದಿ ಸಾವು!

ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜೈಪುರ: ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಸ್ಥಾನದಲ್ಲಿ ನಿರಂತರ ಶಾಖದ ಅಲೆಯು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.

ಸಾಂಪ್ರದಾಯಿಕವಾಗಿ ವರ್ಷದ ಒಂಬತ್ತು ದಿನಗಳನ್ನು ಅತ್ಯಂತ ಶಾಖದ ದಿನಗಳು ಎಂದು ಪರಿಗಣಿಸಲ್ಪಟ್ಟಿರುವ ನೌತಾಪವು ಬೇಸಿಗೆಯ ಆರಂಭದೊಂದಿಗೆ ಜ್ಯೇಷ್ಠ ಮಾಸದಲ್ಲಿ ಪ್ರಾರಂಭವಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಸೂರ್ಯನು ಚಂದ್ರನ ನಕ್ಷತ್ರ ಅಂದರೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದಾಗ ನೌತಪ ಪ್ರಾರಂಭವಾಗುತ್ತದೆ. ನೌತಾಪ ಅಥವಾ ನವತಾಪದ ಐದನೇ ದಿನದಂದು, ರಾಜಸ್ತಾನದಲ್ಲಿ ಒಂದೂವರೆ ವರ್ಷದ ಬಾಲಕಿ ಮತ್ತು ಸರಪಂಚ ಸೇರಿದಂತೆ ಇನ್ನೂ ನಾಲ್ಕು ಜನರು ತೀವ್ರ ಶಾಖಕ್ಕೆ ಬಲಿಯಾಗಿದ್ದಾರೆ.

ಅಧಿಕ ತಾಪಮಾನ ಸಂಬಂಧಿತ ಘಟನೆಗಳಿಂದ ಸತ್ತವರ ಸಂಖ್ಯೆಯನ್ನು ಏಳು ದಿನಗಳಲ್ಲಿ 55 ಕ್ಕೆ ಏರಿದೆ. ಇಡೀ ಬೇಸಿಗೆ ಅವಧಿಯಲ್ಲಿ ಸುಮಾರು 122 ಮಂದಿ ಸಾವನ್ನಪ್ಪಿದ್ದಾರೆ. ಮೇ-ಜೂನ್‌ನಲ್ಲಿ ಸೂರ್ಯನು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುವ ಒಂಬತ್ತು ಬಿಸಿ ದಿನಗಳಾಗಿರುತ್ತವೆಎಂದು ಹೇಳಲಾಗುತ್ತದೆ.

ಸಾಂದರ್ಭಿಕ ಚಿತ್ರ
ರಾಜಸ್ಥಾನದ ಚುರುನಲ್ಲಿ ಬಿರು ಬಿಸಿಲು: 50.5 ಡಿಗ್ರಿ ತಲುಪಿದ ತಾಪಮಾನ!

ರಾಜ್ಯದ 20 ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರದಂದು ಶಾಖದ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಚುರುವಿನಲ್ಲಿ ಗರಿಷ್ಠ ತಾಪಮಾನ 50.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತರ ಪ್ರದೇಶಗಳು ಸಹ ವಿಪರೀತ ತಾಪಮಾನವನ್ನು ಅನುಭವಿಸುತ್ತಿವೆ, ಗಂಗಾನಗರ, ಫಲೋಡಿ ಮತ್ತು ಪಿಲಾನಿಯಲ್ಲಿ 49 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದೆ, ಇದು ಸಾಮಾನ್ಯಕ್ಕಿಂತ 7.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಜೈಪುರ ಹವಾಮಾನ ಕೇಂದ್ರದ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ಮಾತನಾಡಿ, ಪಂಜಾಬ್, ಹರಿಯಾಣ ಮತ್ತು ದೆಹಲಿಗೆ ಸಂಪರ್ಕವಿರುವ ಪ್ರದೇಶಗಳು ಶಾಖದ ಅಲೆಯ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ರಾಜಸ್ಥಾನದಲ್ಲಿ ಇಂದು ತಾಪಮಾನದಲ್ಲಿ ಕೊಂಚ ನಿರಾಳತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಕಡಿಮೆಯಾಗಲಿದೆ ಎಂದಿದ್ದಾರೆ.

ವಿಪರೀತ ಶಾಖವು ವಿದ್ಯುತ್ ಮತ್ತು ನೀರಿನ ಗಮನಾರ್ಹ ಕೊರತೆಗೆ ಕಾರಣವಾಗಿದೆ. ಸುಮಾರು 40 ಜಿಲ್ಲೆಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕೇಂದ್ರ ಅಂತರ್ಜಲ ಇಲಾಖೆಯ ವರದಿಯು ರಾಜಸ್ಥಾನದ ಮೂರನೇ ಎರಡರಷ್ಟು ಬ್ಲಾಕ್‌ಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ನೀರು ಸರಬರಾಜು ಇಲಾಖೆಯ ವರದಿಯು ಆತಂಕಕಾರಿ ಅಂಕಿಅಂಶಗಳನ್ನು ಎತ್ತಿ ತೋರಿಸುತ್ತದೆ, ಹೆಚ್ಚಿನ ನಗರಗಳು ಸಮರ್ಪಕ ಕುಡಿಯುವ ನೀರನ್ನು ಪಡೆಯುತ್ತಿಲ್ಲ ಎಂದು ತೋರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com