ಉತ್ತರಾಖಂಡ್: 24 ಹೋಮ್ ಗಾರ್ಡ್ ಹುದ್ದೆಗಳಿಗೆ 21,000 ಅಭ್ಯರ್ಥಿಗಳಿಂದ ಅರ್ಜಿ!

ಸುಮಾರು 70% ಈ ಅರ್ಜಿದಾರರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಎಂಬುದು ಆತಂಕಕಾರಿ ವಿಷಯವಾಗಿದೆ.
Jobs (file pic)
ಉದ್ಯೋಗ (ಸಾಂಕೇತಿಕ ಚಿತ್ರ)online desk
Updated on

ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಿರುದ್ಯೋಗ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಇದೆ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಕೇವಲ 24 ಹೋಮ್ ಗಾರ್ಡ್ ಹುದ್ದೆಗಳಿಗೆ 21,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಸುಮಾರು 70% ಈ ಅರ್ಜಿದಾರರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಎಂಬುದು ಆತಂಕಕಾರಿ ವಿಷಯವಾಗಿದೆ.

ಗೃಹರಕ್ಷಕ ಬೋಧಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿರುವ ಇತ್ತೀಚಿನ ನೇಮಕಾತಿ ಅಭಿಯಾನ, ಕೇವಲ 12 ನೇ ತರಗತಿ ತೇರ್ಗಡೆಯ ಮಾನದಂಡವನ್ನು ಹೊಂದಿದೆ. ಆದರೆ ಸ್ನಾತಕೋತ್ತರ ಪದವೀಧರರೂ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವುದು ಆಶ್ಚರ್ಯಕರ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಅರ್ಜಿದಾರರಲ್ಲಿ M.Tech, M.Sc., B.Sc., ಮತ್ತು ಇತರ ವಿವಿಧ ವಿಭಾಗಗಳ ಪದವೀಧರರು ಇದ್ದಾರೆ.

ತೀವ್ರಗೊಂಡ ಸ್ಪರ್ಧೆ

ಗರ್ಹ್ವಾಲ್ ಒಂದೇ ಪ್ರದೆಶದಿಂದ 12,000 ಅರ್ಜಿಗಳು ಬಂದಿದ್ದು, ಕುಮಾನ್ ನಿಂದ 8,500 ಕ್ಕಿಂತ ಹೆಚ್ಚು ಅರ್ಜಿಗಳು ಬಂದಿವೆ. ಇದು ವಿರಳ ಉದ್ಯೋಗಾವಕಾಶಗಳಿಗಾಗಿ ಬೆಳೆಯುತ್ತಿರುವ ಹೋರಾಟದ ಪರಿಸ್ಥಿತಿಯನ್ನು ತೋರಿಸುತ್ತದೆ. ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳು ಈ ಉದ್ಯೋಗಗಳನ್ನು ಪಡೆಯಲು ಶ್ರಮಿಸುತ್ತಿರುವುದು ಪ್ರದೇಶದ ಬೇರೆಡೆ ಸೀಮಿತ ಉದ್ಯೋಗಾವಕಾಶಗಳನ್ನು ಸೂಚಿಸುತ್ತದೆ.

ಉತ್ತರಕಾಶಿಯ ನಿವಾಸಿ ರಾಜೀವ್ ಸೆಮ್ವಾಲ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, “ನಾನು ಗಣಿತಶಾಸ್ತ್ರದಲ್ಲಿ ಮೊದಲ ವಿಭಾಗದೊಂದಿಗೆ ಎಂಎಸ್ಸಿ ಪಡೆದಿದ್ದೇನೆ. ಹಲವು ವರ್ಷಗಳ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೂ ಯಶಸ್ಸು ಕಾಣದೆ ನನ್ನ ವಯಸ್ಸಿನ ಮಿತಿ ಮುಕ್ತಾಯಗೊಳ್ಳುತ್ತಿರುವುದರಿಂದ, ನಾನು ಗೃಹರಕ್ಷಕ ದಳದ ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ನೇಮಕಾತಿಗಾಗಿ 18-35 ವರ್ಷಗಳ ವಯಸ್ಸಿನ ಮಿತಿಯೊಂದಿಗೆ, ಅನೇಕ ಯುವಕರು ಗೃಹ ರಕ್ಷಕ ಇಲಾಖೆಯಲ್ಲಿ ಸ್ಥಾನಗಳನ್ನು ಪಡೆದುಕೊಳ್ಳುವುದರ ಮೇಲೆ ತಮ್ಮ ಕೊನೆಯ ಭರವಸೆಯನ್ನು ಹೊಂದಿದ್ದಾರೆ. ಹೆಚ್ಚಿನ ವಿದ್ಯಾರ್ಹತೆಗಳನ್ನು ಹೊಂದಿದ್ದರೂ, ಸಾಂಪ್ರದಾಯಿಕವಾಗಿ ಉನ್ನತ ಪದವಿಗಳ ಅಗತ್ಯವಿಲ್ಲದ ಉದ್ಯೋಗಗಳನ್ನು ಹುಡುಕುವ ಒತ್ತಡಕ್ಕೆ ಸಿಲುಕಿದ್ದಾರೆ.

ಉತ್ತರಾಖಂಡ ಅಧೀನ ಸೇವಾ ಆಯ್ಕೆ ಆಯೋಗ (ಯುಕೆಎಸ್‌ಎಸ್‌ಎಸ್‌ಸಿ) ಶೀಘ್ರದಲ್ಲೇ ಹವಾಲ್ದಾರ್ ಬೋಧಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದೆ ಎಂದು ಇಲಾಖಾ ಮೂಲಗಳು ಖಚಿತಪಡಿಸಿವೆ. ಪ್ರದೇಶದ ಭೀಕರ ಉದ್ಯೋಗದ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದ್ದು ನಿರುದ್ಯೋಗ ದರ ಪಟ್ಟಿಯಲ್ಲಿ ಉತ್ತರಾಖಂಡ ರಾಷ್ಟ್ರೀಯವಾಗಿ 15 ನೇ ಸ್ಥಾನದಲ್ಲಿದೆ.

Jobs (file pic)
ಡೆಹ್ರಾಡೂನ್: ಹಾರಾಟ ಮಧ್ಯೆ ದುರಸ್ತಿ ಹೆಲಿಕಾಪ್ಟರ್ ಕೆಳಗೆ ಬೀಳಿಸಿ ಅನಾಹುತ ತಪ್ಪಿಸಿದ ಪೈಲಟ್, ದೃಶ್ಯ ಸೆರೆ

25 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ರೂಪಿಸಿದ ರಾಜ್ಯಗಳ ಪೈಕಿ ಉತ್ತರಾಖಂಡ್ ಸಹ ಒಂದಾಗಿದ್ದು, ಅದರ ಸಮಕಾಲೀನ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಠೋರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಾರ್ಖಂಡ್ ನಲ್ಲಿ 1.4% ರಷ್ಟು ನಿರುದ್ಯೋಗ ದರ ಇದ್ದರೆ, ಛತ್ತೀಸ್‌ಗಢದಲ್ಲಿ ನಿರುದ್ಯೋಗ ದರ 2.7% ರಷ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರಾಖಂಡದಲ್ಲಿ ನಿರುದ್ಯೋಗ ದರ 4.9% ರಷ್ಟಿದೆ. ಇದು ಸುಸ್ಥಿರ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com