ಜಾರ್ಖಂಡ್ ಚುನಾವಣೆ: 'ನಾವು ಒಗ್ಗಟ್ಟಾದರೆ, ಸುರಕ್ಷಿತವಾಗಿ ಇರಬಹುದು'- OBC ಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ

ಬೊಕಾರೊದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಬಿಸಿಗಳು, ಬುಡಕಟ್ಟು ಜನಾಂಗದವರು ಮತ್ತು ದಲಿತರ ನಡುವೆ ಒಗ್ಗಟ್ಟು ಇಲ್ಲದಿರುವವರೆಗೆ, ಕೇಂದ್ರದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಲೇ ಇತ್ತು.
Prime Minister Narendra Modi during a public meeting ahead of Jharkhand Assembly elections, in Bokaro district, Jharkhand, Sunday, Nov. 10, 2024.
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಮುನ್ನಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
Updated on

ಬೊಕಾರೊ(ಜಾರ್ಖಂಡ್): ಕಾಂಗ್ರೆಸ್-ಜೆಎಂಎಂ ಸಮ್ಮಿಶ್ರ ಸರ್ಕಾರವು ಉಪಜಾತಿಗಳನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಇತರ ಹಿಂದುಳಿದ ವರ್ಗಗಳ(OBCs)ನ್ನು ವಿಭಜಿಸಲು ಬಯಸಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾರ್ಖಂಡ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ 'ಏಕ್ ರಹೋಗೆ ತೋ ಸೇಫ್ ರಹೋಗೆ' (ಸುರಕ್ಷಿತವಾಗಿರಲು ಒಗ್ಗೂಡಿ) ಎಂದು ಕರೆ ನೀಡಿದರು.

ಬೊಕಾರೊದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಬಿಸಿಗಳು, ಬುಡಕಟ್ಟು ಜನಾಂಗದವರು ಮತ್ತು ದಲಿತರ ನಡುವೆ ಒಗ್ಗಟ್ಟು ಇಲ್ಲದಿರುವವರೆಗೆ, ಕೇಂದ್ರದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಲೇ ಇತ್ತು.

ಕಾಂಗ್ರೆಸ್-ಜೆಎಂಎಂನ ದುಷ್ಟ ತಂತ್ರಗಳು ಮತ್ತು ಷಡ್ಯಂತ್ರಗಳ ಬಗ್ಗೆ ಎಚ್ಚರದಿಂದಿರಿ. ಅವರು ಅಧಿಕಾರವನ್ನು ಕಿತ್ತುಕೊಳ್ಳಲು ಯಾವುದೇ ಹಂತಕ್ಕೆ ಹೋಗಬಹುದು. ಕಾಂಗ್ರೆಸ್ ಸ್ವಾತಂತ್ರ್ಯದ ನಂತರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಐಕ್ಯತೆಗೆ ವಿರೋಧಿಯಾಗಿದೆ. ಒಗ್ಗಟ್ಟು ಇಲ್ಲದ ತನಕ ಕಾಂಗ್ರೆಸ್ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಲೇ ಇತ್ತು. ರಾಷ್ಟ್ರವನ್ನು ಲೂಟಿ ಮಾಡುತ್ತಿದ್ದರು ಎಂದು ಟೀಕಿಸಿದರು.

ಚೋಟಾನಾಗ್‌ಪುರ ಪ್ರದೇಶದಲ್ಲಿ 125 ಕ್ಕೂ ಹೆಚ್ಚು ಉಪ-ಜಾತಿಗಳನ್ನು ಒಬಿಸಿ ಎಂದು ಪರಿಗಣಿಸಲಾಗುತ್ತದೆ. ಕಾಂಗ್ರೆಸ್-ಜೆಎಂಎಂ ಪರಸ್ಪರ ವಿರುದ್ಧ ಉಪಜಾತಿಗಳನ್ನು ಎತ್ತಿಕಟ್ಟುವ ಮೂಲಕ ಒಬಿಸಿ ಏಕತೆಯನ್ನು ಮುರಿಯಲು ಬಯಸಿದೆ. ನಾನು ನಿಮಗೆ 'ಏಕ್ ರಹೋಗೆ ತೋ ಸೇಫ್ ರಹೋಗೆ' ಎಂದು ಎಚ್ಚರಿಸುತ್ತೇನೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧವೂ ಪ್ರಧಾನಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರಳಿ ತರಲು ಬಯಸುತ್ತವೆ, ಇದರಿಂದಾಗಿ ನಮ್ಮ ಸೈನಿಕರು ಮತ್ತೆ ಭಯೋತ್ಪಾದನೆಯ ಬೆಂಕಿಯನ್ನು ಎದುರಿಸುತ್ತಾರೆ ಎಂದು ಹೇಳಿದರು.

Prime Minister Narendra Modi during a public meeting ahead of Jharkhand Assembly elections, in Bokaro district, Jharkhand, Sunday, Nov. 10, 2024.
ಜಾರ್ಖಂಡ್ ಆದಿವಾಸಿಗಳಿಗೆ ಸೇರಿದ್ದು, ಈ ರಾಜ್ಯವನ್ನು ಅವರೇ ಆಳುತ್ತಾರೆ: ಸಿಎಂ ಸೊರೆನ್

ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಗೌರವ ಎಂದು ಮೋದಿ ಹೇಳಿದರು.

ಜಾರ್ಖಂಡ್‌ನಲ್ಲಿ ನುಸುಳುಕೋರರನ್ನು ಓಡಿಸಲು ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬಿಜೆಪಿ ನೇತೃತ್ವದ ಸರ್ಕಾರ ಅಗತ್ಯವಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com