ದೆಹಲಿ ಮಾಲಿನ್ಯ: ವರ್ಚುವಲ್ ವಿಚಾರಣೆಗೆ ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಸಿಜೆಐ ಸೂಚನೆ

"ಸಾಧ್ಯವಾದಲ್ಲೆಲ್ಲಾ ವರ್ಚುವಲ್ ವಿಚಾರಣೆಗೆ ಅವಕಾಶ ನೀಡುವಂತೆ ನಾವು ಎಲ್ಲಾ ನ್ಯಾಯಾಧೀಶರಿಗೆ ಹೇಳಿದ್ದೇವೆ" ಎಂದು ಸಿಜೆಐ ತಿಳಿಸಿದರು.
Supreme Court
ಸುಪ್ರೀಂ ಕೋರ್ಟ್
Updated on

ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯು ಮಾಲಿನ್ಯ ತೀವ್ರ ಅಪಾಯದ ಮಟ್ಟ ತಲುಪಿರುವುದನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಿರುವಲ್ಲೆಲ್ಲಾ ವರ್ಚುವಲ್ ವಿಚಾರಣೆಗೆ ಅವಕಾಶ ನೀಡುವಂತೆ ಎಲ್ಲಾ ನ್ಯಾಯಾಧೀಶರನ್ನು ಸೂಚಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಂಗಳವಾರ ಹೇಳಿದ್ದಾರೆ.

ಸಿಜೆಐ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಇಂದು ಸಭೆ ಸೇರಿದ ತಕ್ಷಣ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್​(ಎಸ್‌ಸಿಬಿಎ) ಅಧ್ಯಕ್ಷ ಕಪಿಲ್ ಸಿಬಲ್ ಸೇರಿದಂತೆ ವಕೀಲರು, ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಹದಗೆಡುತ್ತಿರುವ ಮಾಲಿನ್ಯವನ್ನು ಉಲ್ಲೇಖಿಸಿದರು ಮತ್ತು ಅದನ್ನು ಎದುರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.

"ಸಾಧ್ಯವಾದಲ್ಲೆಲ್ಲಾ ವರ್ಚುವಲ್ ವಿಚಾರಣೆಗೆ ಅವಕಾಶ ನೀಡುವಂತೆ ನಾವು ಎಲ್ಲಾ ನ್ಯಾಯಾಧೀಶರಿಗೆ ಹೇಳಿದ್ದೇವೆ" ಎಂದು ಸಿಜೆಐ ತಿಳಿಸಿದರು.

Supreme Court
ಕೃತಕ ಮಳೆ ಮ್ಯಾಜಿಕ್ ಅಲ್ಲ, ಇನ್ನೂ 45 ದಿನಗಳು ದೆಹಲಿಯಲ್ಲಿ ಸೂರ್ಯನ ಪ್ರಖರ ಬೆಳಕು ನೋಡಲು ಸಾಧ್ಯವಿಲ್ಲ!

ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿದೆ. ಇನ್ನೂ ಕಡಿಮೆಯಾಗಬೇಕಾಗಿದೆ. ಈ ಸಂದೇಶವು ಇತರ ನ್ಯಾಯಾಲಯಗಳಿಗೆ ಹೋಗಬೇಕು" ಎಂದು ಕಪಿಲ್ ಸಿಬಲ್ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಗೋಪಾಲ್ ಶಂಕರನಾರಾಯಣನ್ ಸೇರಿದಂತೆ ವಿವಿಧ ವಕೀಲರು ವರ್ಚುವಲ್ ವಿಚಾರಣೆಯನ್ನು ಬೆಂಬಲಿಸಿದರು. ಉನ್ನತ ನ್ಯಾಯಾಲಯವು ತಾತ್ವಿಕವಾಗಿ ವರ್ಚುವಲ್ ವಿಚಾರಣೆ ಹೋಗಬೇಕು ಎಂದು ಸಾಲಿಸಿಟರ್ ಜನರಲ್ ಹೇಳಿದರು.

ಆತಂಕಕಾರಿ ಮಟ್ಟದಲ್ಲಿ ವಾಯು ಮಾಲಿನ್ಯ ಏರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವನ್ನು ಗಮನಿಸಿದ ಸುಪ್ರೀಂ ಕೋರ್ಟ್, GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ರಚಿಸುವಂತೆ ದೆಹಲಿ-ಎನ್‌ಸಿಆರ್ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com