A woman crosses the Kartavya Path amid low visibility due to smog as air quality remains in 'severe' category,
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕುಸಿತ

ಕೃತಕ ಮಳೆ ಮ್ಯಾಜಿಕ್ ಅಲ್ಲ, ಇನ್ನೂ 45 ದಿನಗಳು ದೆಹಲಿಯಲ್ಲಿ ಸೂರ್ಯನ ಪ್ರಖರ ಬೆಳಕು ನೋಡಲು ಸಾಧ್ಯವಿಲ್ಲ!

ವಾಯು ಮಾಲಿನ್ಯಕ್ಕೆ ರಾಷ್ಟ್ರ ರಾಜಧಾನಿ ಹೆಸರುವಾಸಿಯಾಗಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದ್ದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎನ್ನುವ ವರದಿಗಳು ಕೇಳಿ ಬಂದಿವೆ.
Published on

ದೆಹಲಿ: ವಾಯು ಮಾಲಿನ್ಯಕ್ಕೆ ರಾಷ್ಟ್ರ ರಾಜಧಾನಿ ಹೆಸರುವಾಸಿಯಾಗಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದ್ದು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎನ್ನುವ ವರದಿಗಳು ಕೇಳಿ ಬಂದಿವೆ. ಸಫರ್ (SAFAR ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್) ಸ್ಥಾಪಕ ಮತ್ತು ಯೋಜನಾ ನಿರ್ದೇಶಕರಾದ ಗುಫ್ರಾನ್ ಬೇಗ್ ಅವರು ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಚೇರ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುತ್ತುವರೆದಿರುವ ಅಪಾಯಕಾರಿ ಪ್ರಮಾಣದ ವಿಷಕಾರಿ ಗಾಳಿ ಮತ್ತು ಅದನ್ನು ನಿಭಾಯಿಸುವ ಕ್ರಮಗಳ ಬಗ್ಗೆ ಇಫ್ರಾ ಮುಫ್ತಿ ಅವರೊಂದಿಗೆ ಮಾತನಾಡಿದ್ದಾರೆ, ಅದರ ಆಯ್ದ ಭಾಗಗಳು ಇಲ್ಲಿದೆ.

Q

ತೀವ್ರ ಮಾಲಿನ್ಯಕ್ಕೆ ಕಾರಣಗಳೇನು?

A

ವಾಯು ಮಾಲಿನ್ಯಕ್ಕೆ ಪ್ರಮುಖವಾದ ಕಾರಣವೆಂದರೆ ಕಸ ಸುಡುವಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಕಿಯ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ ಅಂದರೆ ಕಳೆದ ವರ್ಷ 4,000-5,000 ದಷ್ಟಿತ್ತು. ಆದಾಗ್ಯೂ, ಮಂಗಳವಾರ ಸಂಜೆಯ ವೇಳೆಗೆ ಪರಿಸ್ಥಿತಿ ಸುಧಾರಿಸಿದೆ. ಗಾಳಿಯ ಗುಣಮಟ್ಟದ ಸೂಚ್ಯಂಕದ ಪ್ರಕಾರ ಬೆಳಿಗ್ಗೆ 9ಗಂಟೆಗೆ ಗಾಳಿ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಸಂಜೆ ಗಾಳಿ ಗುಣಮಟ್ಟ ಸುಧಾರಿಸುವ ಮೊದಲು 1 ಗಂಟೆಯವರೆಗೆ ಪರಿಸ್ಥಿತಿ ಹದಗೆಡುತ್ತಲೇ ಇತ್ತು.

Q

ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಯೇ?

A

ಪ್ರಸ್ತುತ ಪರಿಸ್ಥಿತಿಯಲ್ಲಿ, ಶೇ.50 ಮಾಲಿನ್ಯವು ಹೊಗೆಯಿಂದ ಉಂಟಾಗುತ್ತದೆ. ಎಲ್ಲಾ ಹೊರಸೂಸುವಿಕೆಯನ್ನು ನಿಲ್ಲಿಸಿದರೂ, ಇನ್ನೂ ಶೇ. 50ರಷ್ಟು ಉಳಿಯುತ್ತದೆ. ಪ್ರಸ್ತುತ, ಹೊಗೆಯ ಮಟ್ಟವು ಪ್ರತಿ ಘನ ಮೀಟರ್‌ಗೆ 600 ರಷ್ಟಿದೆ. ಹೊರಸೂಸುವಿಕೆಯನ್ನು ನಿಲ್ಲಿಸುವುದರಿಂದ ಅದು ಕೇವಲ 300ಕ್ಕೆ ಇಳಿಕೆಯಾಗುತ್ತದೆ.

Q

ಸರ್ಕಾರವು ಗ್ರೇಡೆಡ್‌ ರೆಸ್ಪಾನ್ಸ್‌ ಆ್ಯಕ್ಷನ್‌ ಪ್ಲ್ಯಾನ್‌ (GRAP)IV ಜಾರಿಗೊಳಿಸಿದೆ. ಇದರಿಂದ ಯಾವುದೇ ಬದಲಾವಣೆ ಉಂಟಾಗಿದೆಯೇ?

A

ಸರ್ಕಾರ ಜಾರಿಗೊಳಿಸಿರುವ ಕ್ರಮದಿಂದ ದೊಡ್ಡ ರೀತಿಯಲ್ಲಿ ಸಹಾಯ ಮಾಡಬೇಕು ಆದರೆ ಪ್ರಸ್ತುತ ಅನುಷ್ಠಾನ ಸ್ಥಿತಿಯ ಬಗ್ಗೆ ನನಗೆ ತಿಳಿದಿಲ್ಲ. GRAP-IV ನ ಮಾನದಂಡಗಳಿಗೆ ಒಂದು ನಿರ್ದಿಷ್ಟ ವಿಧಾನದ ಅಗತ್ಯವಿರುವುದರಿಂದ ಇದು ವೈಫಲ್ಯದ ಅಪಾಯವನ್ನು ಸಹ ಒಳಗೊಂಡಿರುತ್ತದೆ.

Q

ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸಹಾಯ ಮಾಡಬಹುದೇ?

A

ಕೃತಕ ಮಳೆ ಮ್ಯಾಜಿಕ್ ಅಲ್ಲ. ನೀರಿನ ಅಣುಗಳು ರೂಪುಗೊಳ್ಳಲು ನಾವು ಬೀಜದ ಮೋಡಗಳನ್ನು ಹೊಂದಿರಬೇಕು, ಇಲ್ಲದಿದ್ದರೆ ಇಂಜೆಕ್ಟ್ ಮಾಡಲು ಏನೂ ಇರುವುದಿಲ್ಲ. ಎಲ್ಲಾ ನೀರಿನ ಹನಿಗಳು ಮಳೆಗೆ ಕಾರಣವಾಗುವುದಿಲ್ಲ. ಮೋಡಗಳಿಲ್ಲದಿದ್ದರೆ, ನಾವು ಏನು ಬಿತ್ತನೆ ಮಾಡಬಹುದು?ಎಂದು ಪ್ರಶ್ನಿಸಿದ್ದಾರೆ.

Q

ದೆಹಲಿಯಲ್ಲಿ ಶೀಘ್ರದಲ್ಲೇ ಚಳಿಗಾಲದ ಸೂರ್ಯನನ್ನು ನೋಡಬಹುದೇ?

A

ಪ್ರತಿಯೊಂದು ವಿದ್ಯಮಾನವೂ ಬದಲಾಗಿದೆ. ಈ ಹಿಂದೆ, ನವೆಂಬರ್ ಮೊದಲ ವಾರದಲ್ಲಿ ನೀವು ಅನುಭವಿಸಿದ್ದನ್ನು ಈಗ ಮೂರನೇ ವಾರದಲ್ಲಿ ನೋಡಲಾಗುತ್ತಿದೆ. ನವೆಂಬರ್ 18-20 ರ ಸುಮಾರಿಗೆ ಗಾಳಿಯ ಗುಣಮಟ್ಟ ಕೆಟ್ಟದಾಗಿತ್ತು. ದುರದೃಷ್ಟವಶಾತ್, ಮುಂದಿನ ಒಂದೂವರೆ ತಿಂಗಳವರೆಗೆ ನಾವು ಪ್ರಕಾಶಮಾನವಾದ ಸೂರ್ಯನನ್ನು ಮರೆಯಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com