ಕಾಶಿಯ 'ದಾದಾ' ಇನ್ನಿಲ್ಲ... 7 ಬಾರಿ ಶಾಸಕ ಶ್ಯಾಮದೇವ್ ರೈ ಚೌಧರಿ ನಿಧನ: ಪ್ರಧಾನಿ ಮೋದಿ, ಸಿಎಂ ಯೋಗಿ ಸಂತಾಪ

ಸಿಎಂ ಯೋಗಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. 'ದಾದಾ' ಸಾವಿನ ಸುದ್ದಿ ಕೇಳಿ ಕಾಶಿಯಲ್ಲಿ ಅವರ ಬೆಂಬಲಿಗರಲ್ಲಿ ಶೋಕದ ಅಲೆ ಎಬ್ಬಿಸಿದೆ.
Shyamdev Roy Chaudhari-Narendra Modi
ಶ್ಯಾಮದೇವ್ ರೈ ಚೌಧರಿ-ನರೇಂದ್ರ ಮೋದಿTNIE
Updated on

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ರಾಜಕೀಯದ ದಾದಾ ಎಂದೇ ಖ್ಯಾತರಾಗಿದ್ದ 7 ಬಾರಿ ಶಾಸಕರಾಗಿದ್ದ ಶ್ಯಾಮದೇವ್ ರೈ ಚೌಧರಿ ನಿಧನರಾಗಿದ್ದಾರೆ. ದಕ್ಷಿಣ ಕ್ಷೇತ್ರದಿಂದ 7 ಬಾರಿ ಶಾಸಕರಾಗಿದ್ದ ಬಿಜೆಪಿಯ ಹಿರಿಯ ನಾಯಕ ಶ್ಯಾಮದೇವ್ ಇಂಜು ನಿಧನರಾದರು.

ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಸಿಎಂ ಯೋಗಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. 'ದಾದಾ' ಸಾವಿನ ಸುದ್ದಿ ಕೇಳಿ ಕಾಶಿಯಲ್ಲಿ ಅವರ ಬೆಂಬಲಿಗರಲ್ಲಿ ಶೋಕದ ಅಲೆ ಎಬ್ಬಿಸಿದೆ.

ವಾರಣಾಸಿಯಲ್ಲಿ ಶ್ಯಾಮದೇವ್ ರಾಯ್ ಚೌಧರಿ ದಾದಾ ಎಂದೇ ಪ್ರಸಿದ್ಧರಾಗಿದ್ದರು. 85 ವರ್ಷದ ನಾಯಕ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಾಹಿತಿ ಪ್ರಕಾರ ಅವರ ಅಂತಿಮ ಸಂಸ್ಕಾರ ವಾರಣಾಸಿಯಲ್ಲಿ ನಡೆಯಲಿದೆ. ಬಿಜೆಪಿಯ ಸ್ಥಾಪಕ ನಾಯಕರಲ್ಲಿ ಒಬ್ಬರಾದ ಶ್ಯಾದೇವ್ ರೈ ಚೌಧರಿ ಅವರು ಪ್ರಾಮಾಣಿಕ ನಾಯಕನ ಇಮೇಜ್ ಹೊಂದಿದ್ದರು. 2017ರಲ್ಲಿ ಟಿಕೆಟ್ ನಿರಾಕರಿಸಿದ ನಂತರ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.

Shyamdev Roy Chaudhari-Narendra Modi
ಇಂದು ಸಂವಿಧಾನ ದಿನ: ಜನತೆಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಶುಭಾಶಯ

ಜೀವನದುದ್ದಕ್ಕೂ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದ ಬಿಜೆಪಿಯ ಹಿರಿಯ ನಾಯಕ ಶ್ಯಾಮದೇವ್ ರಾಯ್ ಚೌಧರಿ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ನಾವೆಲ್ಲರೂ ಅವರನ್ನು ಪ್ರೀತಿಯಿಂದ ‘ದಾದಾ’ ಎಂದು ಕರೆಯುತ್ತಿದ್ದೆವು. ಅವರು ಪಕ್ಷದ ಪೋಷಣೆ ಮತ್ತು ವರ್ಧನೆಯಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದು ಮಾತ್ರವಲ್ಲದೆ ಕಾಶಿಯ ಅಭಿವೃದ್ಧಿಗೆ ಪೂರ್ಣ ಹೃದಯದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಅಗಲಿಕೆ ಕಾಶಿಗೆ ಹಾಗೂ ಇಡೀ ರಾಜಕೀಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದುಃಖದ ಈ ಕ್ಷಣದಲ್ಲಿ ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ದೇವರು ಶಕ್ತಿ ನೀಡಲಿ. ಓಂ ಶಾಂತಿ! ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com