ಮಹಾರಾಷ್ಟ್ರ ಚುನಾವಣೆ: ನವೆಂಬರ್ 6 ರಂದು MVA ಪ್ರಚಾರಕ್ಕೆ ಚಾಲನೆ- ಶರದ್ ಪವಾರ್

ನವೆಂಬರ್ 6 ರಂದು ಎಂವಿಎ ಚುನಾವಣಾ ಪ್ರಚಾರಕ್ಕೆ ನಾನು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಚಾಲನೆ ನೀಡಲಿದ್ದೇವೆ ಎಂದು ಪವಾರ್ ತಿಳಿಸಿದರು.
ಶರದ್ ಪವಾರ್-ಉದ್ದವ್ ಠಾಕ್ರೆ
ಶರದ್ ಪವಾರ್-ಉದ್ದವ್ ಠಾಕ್ರೆTNIE
Updated on

ಪುಣೆ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ ತನ್ನ ಪ್ರಚಾರವನ್ನು ನವೆಂಬರ್ 6 ರಂದು ಪ್ರಾರಂಭಿಸಲಿದೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಗುರುವಾರ ಹೇಳಿದ್ದಾರೆ.

ನವೆಂಬರ್ 6 ರಂದು ಎಂವಿಎ ಚುನಾವಣಾ ಪ್ರಚಾರಕ್ಕೆ ನಾನು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಚಾಲನೆ ನೀಡಲಿದ್ದೇವೆ ಎಂದು ಪವಾರ್ ತಿಳಿಸಿದರು.

ಇಂದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ಜನತೆಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದರು ಮತ್ತು ರಾಜ್ಯದ ಜನರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿದರು.

ಶರದ್ ಪವಾರ್-ಉದ್ದವ್ ಠಾಕ್ರೆ
ಭಾವೋದ್ವೇಗಕ್ಕೆ ಒಳಗಾಗಬೇಡಿ: ಆರು ತಿಂಗಳ ಹಿಂದೆ ಅಜಿತ್ ಪವಾರ್ ಮಾಡಿದ್ದ ಭಾಷಣಕ್ಕೆ ಶರದ್ ಪವಾರ್ ಲೇವಡಿ

ಕೆಲವು ಕ್ಷೇತ್ರಗಳಲ್ಲಿ ಎಂವಿಎ ಪಾಲುದಾರರಾದ ಎನ್‌ಸಿಪಿ(ಎಸ್‌ಪಿ), ಕಾಂಗ್ರೆಸ್ ಮತ್ತು ಸೇನಾ(ಯುಬಿಟಿ) ನಡುವಿನ ಸೌಹಾರ್ದ ಸ್ಪರ್ಧೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಕೇಂದ್ರ ಸಚಿವರು, ಎಂವಿಎಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಕೇವಲ 10-12 ಕ್ಷೇತ್ರಗಳಿಗೆ. ಇನ್ನೆರಡು ದಿನಗಳಲ್ಲಿ ಇದಕ್ಕೂ ಪರಿಹಾರ ಕಂಡುಕೊಂಡು ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು.

ನವೆಂಬರ್ 6 ರಂದು ಮುಂಬೈನಲ್ಲಿ ಎಂವಿಎ ಜಂಟಿ ಚುನಾವಣಾ ರ್ಯಾಲಿಯನ್ನು ನಡೆಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಬುಧವಾರ ಹೇಳಿದ್ದಾರೆ. ಅಂದು ವಿಧಾನಸಭೆ ಚುನಾವಣೆಗೆ ಪ್ರತಿಪಕ್ಷಗಳ ಮೈತ್ರಿಕೂಟದ ಚುನಾವಣಾ ಪ್ರಣಾಳಿಕೆ ಸಹ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com