![ರಾಹುಲ್ ಗಾಂಧಿ, ಕೇಶವನ್](http://media.assettype.com/kannadaprabha%2F2024-09-27%2Fzlc2pupt%2FRahul-GandhiKeshavan.jpg?w=480&auto=format%2Ccompress&fit=max)
ನವದೆಹಲಿ: ಲೋಕಸಭೆ ವಿಪಕ್ಷ ನಾಯಕನ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಬಿಜೆಪಿ ವಕ್ತಾರ ಸಿ ಆರ್ ಕೇಶವನ್, ರಾಹುಲ್ ಗಾಂಧಿಯನ್ನು ಹಿಟ್ಲರ್ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ಗೆ ಹೋಲಿಸಿದ್ದಾರೆ. ರಾಹುಲ್ ಭಾರತ ರಾಜಕೀಯದ ಅಪ್ರಾಮಾಣಿಕ ಮತ್ತು ಭ್ರಮೆಯ ಗೋಬೆಲ್ಸ್, ಅವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಕೇಶವನ್ ಆರೋಪಿಸಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ತಮ್ಮ ಸುಳ್ಳಿನ ಕಾರ್ಖಾನೆಯಿಂದ ಹೇಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದರು ಎಂಬುದನ್ನು ನೋಡಿದ್ದಿರಿ. ಅವರು ಗೋಬೆಲ್ಸ್ ತರಹದ ನಕಲಿ ಪ್ರಚಾರಕ ಎಂದು ಕರೆದರು.
ಹರಿಯಾಣದ ಎರಡು ಕೋಟಿ ಮತದಾರರು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂಬುದು ರಾಹುಲ್ ಗಾಂಧಿಗೆ ಗೊತ್ತಾಗಿದ್ದು, ಅವರ ಭಯಭೀತ, ಆತಂಕಗೊಂಡಿದ್ದಾರೆ. ಅಲ್ಲದೇ, ಎಂದಿಗೂ ಹರಿಯಾಣ ಜನರು 'ರೈತ ವಿರೋಧಿ, ಮೀಸಲಾತಿ ವಿರೋಧಿ' ಮತ್ತು 'ಭ್ರಷ್ಟಾಚಾರದ ಪರ' ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಬಿಜೆಪಿ ವಕ್ತಾರರು ಹೇಳಿದರು.
ಒಬಿಸಿಗಳು, ದಲಿತರು ಮತ್ತು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಪ್ರಾತಿನಿಧ್ಯದ ಕುರಿತು ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಮಾತನಾಡಿದ ಸಿ.ಆರ್. ಕೇಶವನ್, ಹರಿಯಾಣದ ಪ್ರಸ್ತುತ ಮುಖ್ಯಮಂತ್ರಿ ಒಬಿಸಿ ಸಮುದಾಯದವರಾಗಿದ್ದಾರೆ.
ನಮ್ಮ ರಾಷ್ಟ್ರಪತಿ ಬುಡಕಟ್ಟು ಸಮುದಾಯದಿಂದ ಬಂದವರಾಗಿದ್ದು, ಅವರನ್ನು ಕಾಂಗ್ರೆಸ್ ವಿರೋಧಿಸಿತು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯ ಮಾಹಿತಿ ಆಯುಕ್ತರು ದಲಿತ ಸಮುದಾಯದಿಂದ ಬಂದವರಾಗಿದ್ದಾರೆ. ಕಾಂಗ್ರೆಸ್ ಮೀಸಲಾತಿ ವಿರೋಧಿ ಪಕ್ಷವಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ಮೀಸಲಾತಿ ರದ್ದುಪಡಿಸಲು ಅವರು ಬಯಸುತ್ತಿದ್ದಾರೆ ಎಂದು ಅವರು ಟೀಕಿಸಿದರು
Advertisement