ಈಶಾನ್ಯ ರಾಜ್ಯಗಳಿಗೆ ಸಮುದ್ರಕ್ಕೆ ದಾರಿ ಇಲ್ಲ, ನಮ್ಮ ಬಳಿಯೇ ಬರಬೇಕು- ಯೂನಸ್; ಬಾಂಗ್ಲಾವನ್ನೇ ಒಡೆದು ದಾರಿ ಮಾಡ್ಕೊತೀವಿ- ಭಾರತ!

ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, ಭಾರತದ 7 ಈಶಾನ್ಯ ರಾಜ್ಯಗಳಲ್ ಬಗ್ಗೆ ಅನಗತ್ಯವಾಗಿ ಉಲ್ಲೇಖಿಸಿ ವಿವಾದ ಸೃಷ್ಟಿಸಿದ್ದರು.
Assam CM Himanta Biswa Sharma, Muhammad Yunus
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ- ಬಾಂಗ್ಲಾ ಸರ್ಕಾರದ ಸಲಹೆಗಾರ ಯೂನಸ್ online desk
Updated on

ಅಸ್ಸಾಂ: ಬಾಂಗ್ಲಾದೇಶ ಇಬ್ಭಾಗವಾಗಲಿದೆ ಜೋಕೆ ಎಂದು ಅಲ್ಲಿನ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, ಭಾರತದ 7 ಈಶಾನ್ಯ ರಾಜ್ಯಗಳಲ್ ಬಗ್ಗೆ ಅನಗತ್ಯವಾಗಿ ಉಲ್ಲೇಖಿಸಿ ವಿವಾದ ಸೃಷ್ಟಿಸಿದ್ದರು.

"ಈಶಾನ್ಯ ಭಾಗದಲ್ಲಿರುವ ಭಾರತದ 7 ರಾಜ್ಯಗಳನ್ನು ಸಪ್ತ ಸಹೋದರಿಯರು ಎಂದು ಹೇಳಲಾಗುತ್ತದೆ. ಆ ರಾಜ್ಯಗಳು ಭೂ ಪ್ರದೇಶದಿಂದ ಸುತ್ತುವರೆಯಲ್ಪಟ್ಟಿವೆ. ಸಮುದ್ರ ಪ್ರವೇಶಿಸುವುದಕ್ಕೆ ಆ ರಾಜ್ಯಗಳಿಗೆ ನೇರವಾದ ಮಾರ್ಗವಿಲ್ಲ. ಅವುಗಳಿಗೆ ಸಮುದ್ರ ಪ್ರವೇಶ ಸಿಗಬೇಕೇಂದರೆ ಆ ಸಮುದ್ರ ಪ್ರದೇಶದಲ್ಲಿ ಕಣ್ಗಾವಲು, ಉಸ್ತುವಾರಿ ಹೊಂದಿರುವ ಬಾಂಗ್ಲಾದ ಬಳಿಯೇ ಬರಬೇಕು, ಭಾರತದ 7 ಈಶಾನ್ಯ ರಾಜ್ಯಗಳ ಸಮುದ್ರ ಪ್ರವೇಶದ ಕೀಲಿ ಬಾಂಗ್ಲಾ ಬಳಿಯೇ ಇದೆ, "ಇದು ಒಂದು ದೊಡ್ಡ ಸಾಧ್ಯತೆಯನ್ನು ತೆರೆಯುತ್ತದೆ. ಇದು ಚೀನಾದ ಆರ್ಥಿಕತೆಗೆ ವಿಸ್ತರಣೆಯಾಗಿರಬಹುದು" ಎಂದು ಹೇಳಿದ್ದರು.

ಬಾಂಗ್ಲಾದೇಶ ನಾಯಕನ ಹೇಳಿಕೆಗಳು ಈಗ ಮತ್ತೆ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಯೂನಸ್ ಅವರ ಹೇಳಿಕೆಗಳನ್ನು ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಟೀಕಿಸಿದ್ದಾರೆ ಮತ್ತು ಈಶಾನ್ಯವನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ ಹೆಚ್ಚು ಬಲವಾದ ರೈಲು ಮತ್ತು ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

"ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಹಮ್ಮದ್ ಯೂನಿಸ್ ಈಶಾನ್ಯ ಭಾರತದ ಏಳು ಸಹೋದರಿ ರಾಜ್ಯಗಳನ್ನು ಭೂಪ್ರದೇಶದಿಂದ ಆವೃತವಾಗಿವೆ ಎಂದು ಉಲ್ಲೇಖಿಸಿ ಮತ್ತು ಬಾಂಗ್ಲಾದೇಶವನ್ನು ಸಾಗರ ಪ್ರವೇಶದ ರಕ್ಷಕ ಎಂದು ಹೇಳಿರುವುದು ಆಕ್ರಮಣಕಾರಿ ಮತ್ತು ಬಲವಾಗಿ ಖಂಡನೀಯವಾಗಿದೆ. ಈ ಹೇಳಿಕೆಯು ಭಾರತದ ಕಾರ್ಯತಂತ್ರದ 'ಚಿಕನ್ ನೆಕ್' ಕಾರಿಡಾರ್‌ಗೆ ಸಂಬಂಧಿಸಿದ ನಿರಂತರ ದುರ್ಬಲತೆಯ ನಿರೂಪಣೆಯನ್ನು ಒತ್ತಿಹೇಳುತ್ತದೆ." ಚಿಕನ್ ನೆಕ್ ಕಾರಿಡಾರ್ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಒಂದು ಪ್ರದೇಶವಾಗಿದ್ದು, ಇದು ಈ ಪ್ರದೇಶವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುತ್ತದೆ. ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನ್ ಈ ಪ್ರದೇಶವನ್ನು ಸುತ್ತುವರೆದಿವೆ.

"ಐತಿಹಾಸಿಕವಾಗಿ, ಭಾರತದೊಳಗಿನ ಆಂತರಿಕ ಅಂಶಗಳು ಸಹ ಈಶಾನ್ಯವನ್ನು ಮುಖ್ಯ ಭೂಭಾಗದಿಂದ ಭೌತಿಕವಾಗಿ ಪ್ರತ್ಯೇಕಿಸುವ ಅಂಶಗಳನ್ನು ಹೊಂದಿವೆ ಆದ್ದರಿಂದ. ಚಿಕನ್ಸ್ ನೆಕ್ ಕಾರಿಡಾರ್‌ನ ಕೆಳಗೆ ಮತ್ತು ಸುತ್ತಲೂ ಹೆಚ್ಚು ಬಲವಾದ ರೈಲ್ವೆ ಮತ್ತು ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ. ಹೆಚ್ಚುವರಿಯಾಗಿ, ಚಿಕನ್ಸ್ ನೆಕ್ ಅನ್ನು ಪರಿಣಾಮಕಾರಿಯಾಗಿ ಬೈಪಾಸ್ ಮಾಡುವ ಮೂಲಕ ಈಶಾನ್ಯವನ್ನು ಭಾರತದ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆ ಮಾರ್ಗಗಳನ್ನು ಅನ್ವೇಷಿಸಲು ಆದ್ಯತೆ ನೀಡಬೇಕು, "ಇದು ಗಮನಾರ್ಹ ಎಂಜಿನಿಯರಿಂಗ್ ಸವಾಲುಗಳನ್ನು ಒಡ್ಡಬಹುದಾದರೂ, ದೃಢನಿಶ್ಚಯ ಮತ್ತು ನಾವೀನ್ಯತೆಯಿಂದ ಇದನ್ನು ಸಾಧಿಸಬಹುದು. ಎಂಡಿ ಯೂನಿಸ್ ಅವರ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ಹಗುರವಾಗಿ ಪರಿಗಣಿಸಬಾರದು, ಏಕೆಂದರೆ ಅವು ಆಳವಾದ ಕಾರ್ಯತಂತ್ರದ ಪರಿಗಣನೆಗಳು ಮತ್ತು ದೀರ್ಘಕಾಲದ ಕಾರ್ಯಸೂಚಿಗಳನ್ನು ಪ್ರತಿಬಿಂಬಿಸುತ್ತವೆ" ಎಂದು ಶರ್ಮಾ ಹೇಳಿದ್ದಾರೆ.

Assam CM Himanta Biswa Sharma, Muhammad Yunus
ಯೂನಸ್ ಗೆ ಪತ್ರ ಬರೆದು ಬಾಂಗ್ಲಾ ವಿಮೋಚನಾ ದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ತಿಪ್ರಾ ಮೋತಾ ಪಕ್ಷದ ಪ್ರದ್ಯೋತ ಮಾಣಿಕ್ಯ, ಅತ್ಯಂತ ಕ್ರೂರ ಮತ್ತು ಆಳವಾದ ಪರಿಹಾರವನ್ನು ಸಲಹೆಯಾಗಿ ನೀಡಿದ್ದಾರೆ. ಅದೇನೆಂದರೆ ಈಶಾನ್ಯ ಭಾಗದಲ್ಲಿ ಸಾಗರ ಪ್ರದೇಶದ ರಕ್ಷಕ ತಾನೇ, ಭಾರತದ ಈಶಾನ್ಯ ರಾಜ್ಯಗಳಿಗೆ ಸಮುದ್ರ ಪ್ರವೇಶ ಸಿಗಬೇಕೆಂದರೆ ತನ್ನ ಬಳಿಯೇ ಬರಬೇಕು ಎಂದು ಹೇಳಿಕೊಳ್ಳುತ್ತಿರುವ ಬಾಂಗ್ಲಾದೇಶವನ್ನೇ ಇಬ್ಭಾಗ ಮಾಡಿದರೆ, ಈ ರೀತಿಯ ಸಮಸ್ಯೆಗಳೇ ಇರುವುದಿಲ್ಲ. ನೇರವಾಗಿ ಸಮುದ್ರ ಮಾರ್ಗ ಸಿಗಲಿದೆ. ಸಮುದ್ರ ಪ್ರವೇಶಕ್ಕಾಗಿ ಹೆಚ್ಚಿನ ದುಬಾರಿ ಇಂಜಿನಿಯರಿಂಗ್ ಐಡಿಯಾಗಳೂ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com