Tahawwur Rana extradition: Gulfstream G550 ವಿಮಾನ; ಮಿಯಾಮಿಯಿಂದ ಪಾಲಂವರೆಗೆ ಪ್ರಯಾಣ, ಬುಕಾರೆಸ್ಟ್ ನಲ್ಲಿ ನಿಲುಗಡೆ!

ಭಾರತೀಯ ಮತ್ತು ಅಮೆರಿಕನ್ ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ, ರಾಣಾನನ್ನು ಅಲ್ಟ್ರಾ-ಲಾಂಗ್-ರೇಂಜ್ ಬ್ಯುಸಿನೆಸ್ ಜೆಟ್‌ನಲ್ಲಿ ಬಿಗಿಯಾದ ಕಣ್ಗಾವಲಿನಲ್ಲಿ ತರಲಾಯಿತು, ಇದು ವರ್ಷಗಳ ಕಾಲ ನಡೆದ ಸಂಘಟಿತ ಹಸ್ತಾಂತರ ಪ್ರಯತ್ನದ ಭಾಗವಾಗಿದೆ.
Security personnel guard outside the National Investigation Agency headquarters, in New Delhi, Thursday, April 10, 2025.
ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಭದ್ರತಾ ಸಿಬ್ಬಂದಿ ಕಾವಲು
Updated on

ನವದೆಹಲಿ: ನಿನ್ನೆ ಗುರುವಾರ ಸಾಯಂಕಾಲ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಕರೆತರುವ ಮೂಲಕ ಒಂದು ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕಾರ್ಯಾಚರಣೆ ಮುಕ್ತಾಯವಾಗಿದೆ, 26/11ರ ಮುಂಬೈ ಭಯೋತ್ಪಾದಕ ಆರೋಪಿಯನ್ನು ಹೊತ್ತ ಗಲ್ಫ್‌ಸ್ಟ್ರೀಮ್ ಜಿ550 ವಿಮಾನವು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಪರಿಸ್ಥಿತಿ ಸೂಕ್ಷ್ಮವಾಗಿತ್ತು.

ಮೂಲಗಳ ಪ್ರಕಾರ, ಭಾರತೀಯ ಮತ್ತು ಅಮೆರಿಕನ್ ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ, ರಾಣಾನನ್ನು ಅಲ್ಟ್ರಾ-ಲಾಂಗ್-ರೇಂಜ್ ಬ್ಯುಸಿನೆಸ್ ಜೆಟ್‌ನಲ್ಲಿ ಬಿಗಿಯಾದ ಕಣ್ಗಾವಲಿನಲ್ಲಿ ತರಲಾಯಿತು, ಇದು ವರ್ಷಗಳ ಕಾಲ ನಡೆದ ಸಂಘಟಿತ ಹಸ್ತಾಂತರ ಪ್ರಯತ್ನದ ಭಾಗವಾಗಿದೆ.

ವಿಯೆನ್ನಾ ಮೂಲದ ಸೇವೆಯಿಂದ ಚಾರ್ಟರ್ಡ್ ಮಾಡಿದ ವಿಶೇಷ ವಿಮಾನವು ಮೊನ್ನೆ ಬುಧವಾರ ಸ್ಥಳೀಯ ಸಮಯ ಬೆಳಗ್ಗೆ 2:15 ಕ್ಕೆ (ಭಾರತೀಯ ಕಾಲಮಾನ ಬೆಳಗ್ಗೆ 11:45) ಫ್ಲೋರಿಡಾದ ಮಿಯಾಮಿಯಿಂದ ಹೊರಟು ಅದೇ ದಿನ ಸಂಜೆ 7:00 ಗಂಟೆಗೆ ರೊಮೇನಿಯಾದ ಬುಕಾರೆಸ್ಟ್‌ನಲ್ಲಿ ಇಳಿಯಿತು. ರೊಮೇನಿಯನ್ ರಾಜಧಾನಿಯಲ್ಲಿ 11 ಗಂಟೆಗಳ ಕಾಲ ನಿಲುಗಡೆ ಮಾಡಿದ ನಂತರ, ವಿಮಾನವು ತನ್ನ ಅಂತಿಮ ಹಂತವನ್ನು ಪುನರಾರಂಭವಾಗಿ ಭಾರತಕ್ಕೆ ತಲುಪಿತು.

Security personnel guard outside the National Investigation Agency headquarters, in New Delhi, Thursday, April 10, 2025.
26/11ರ ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ವಿಚಾರಣೆ: 18 ದಿನ NIA ಕಸ್ಟಡಿಗೆ

ಜೆಟ್ ಒಳಗೆ, 64 ವರ್ಷದ ರಾಣಾ, ಎನ್ ಎಸ್ ಜಿ ಕಮಾಂಡೋಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಹಿರಿಯ ಅಧಿಕಾರಿಗಳು ಮತ್ತು ಅಮರಿಕ ಸ್ಕೈ ಮಾರ್ಷಲ್ ಅವರ ನಿರಂತರ ಕಣ್ಗಾವಲಿನಲ್ಲಿದ್ದನು. ಹಸ್ತಾಂತರವು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳಲು ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯವು ಅಮೆರಿಕದ ಸಹವರ್ತಿಗಳೊಂದಿಗೆ ಸೂಕ್ಷ್ಮವಾಗಿ ಸಮನ್ವಯ ಸಾಧಿಸಿತ್ತು.

ಗಲ್ಫ್‌ಸ್ಟ್ರೀಮ್ ಜಿ550 - ಸಾಮಾನ್ಯವಾಗಿ ಉನ್ನತ ಮಟ್ಟದ ರಾಜತಾಂತ್ರಿಕ ಅಥವಾ ಕಾರ್ಯನಿರ್ವಾಹಕ ಕಾರ್ಯಾಚರಣೆಗಳೊಂದಿಗೆ ಸಂಬಂಧ ಹೊಂದಿರುವ ಜೆಟ್ ಆಗಿದೆ. ಅದರ ಭದ್ರತಾ ವೈಶಿಷ್ಟ್ಯಗಳು, ವೇಗ ಮತ್ತು ಕನಿಷ್ಠ ನಿಲುಗಡೆಯೊಂದಿಗೆ ಖಂಡಾಂತರ ಪ್ರಯಾಣವನ್ನು ಕೈಗೊಳ್ಳುವ ಸಾಮರ್ಥ್ಯಕ್ಕಾಗಿ ನಿರ್ದಿಷ್ಟವಾಗಿ ಆಯ್ಕೆ ಮಾಡಲ್ಪಟ್ಟಿತು. ಅಂತಹ ವಿಮಾನದ ಬಳಕೆಯು ಈ ಕಾರ್ಯಾಚರಣೆಯ ಸೂಕ್ಷ್ಮತೆಯನ್ನು ಒತ್ತಿಹೇಳುತ್ತದೆ.

ಮುಂಬೈನಲ್ಲಿ 160 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 26/11ರ ದಾಳಿಯ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾದ ಹೆಡ್ಲಿಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಭಾರತದಲ್ಲಿ ರಾಣಾ ಬಹಳ ಹಿಂದಿನಿಂದಲೂ ಬೇಕಾಗಿದ್ದಾನೆ. ನಿನ್ನೆ ಸಾಯಂಕಾಲ ಪಾಲಂ ವಿಮಾನ ನಿಲ್ದಾಣದಲ್ಲಿ, ರಾಣಾ ವಿಮಾನದಿಂದ ಇಳಿದ ಕ್ಷಣ, ಆತನನ್ನು ಎನ್ ಐಎ ಅಧಿಕಾರಿಗಳು ಸುತ್ತುವರೆದರು. ಗುರುತಿನ ಪರಿಶೀಲನೆ ಮತ್ತು ರಾಜತಾಂತ್ರಿಕ ದಾಖಲೆಗಳ ಪರಿಶೀಲನೆ ಸೇರಿದಂತೆ ಎಲ್ಲಾ ಕಾನೂನು ಔಪಚಾರಿಕತೆಗಳ ನಂತರ, ಔಪಚಾರಿಕವಾಗಿ ಬಂಧಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com