ಬಂಗಾಳದಲ್ಲಿ ವಕ್ಫ್ ಹೆಸರಲ್ಲಿ ಹಿಂಸಾಚಾರ; ಹಿಂದೂಗಳನ್ನು ಮನೆಗಳಿಂದ ಹೊರಗೆಳೆದು ಹತ್ಯೆ: ಸಿಎಂ ಯೋಗಿ ಆಕ್ರೋಶ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮೂವರು ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಅವರನ್ನು ಅವರ ಮನೆಗಳಿಂದ ಹೊರಗೆಳೆದು ಕೊಲೆ ಮಾಡಲಾಗಿದೆ. ಇವರೆಲ್ಲಾ ಯಾರು?
Yogi Adityanath
ಯೋಗಿ ಆದಿತ್ಯನಾಥTNIE
Updated on

ಲಖನೌ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ವಕ್ಫ್ ವಿಷಯದಲ್ಲಿ ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂದು ಸಿಎಂ ಯೋಗಿ ಆರೋಪಿಸಿದರು. ವಕ್ಫ್ ಕಾನೂನಿನ ಹೆಸರಿನಲ್ಲಿ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದ್ದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಹಿಂಸಾಚಾರದ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

ಲಖನೌದಲ್ಲಿ ನಡೆದ ಡಾ. ಭೀಮರಾವ್ ಅಂಬೇಡ್ಕರ್ ಸಮ್ಮಾನ್ ಸಮರೋಹ್ ಅನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ದಲಿತರ ಗುಡಿಸಲುಗಳು ಮತ್ತು ಭೂಮಿಯನ್ನು ಆಕ್ರಮಿಸಿಕೊಂಡಿರುವ ಕೆಲವು ಜನರು ಈ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ನೀವು ನೋಡಿರಬೇಕು. ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿರುವ ಅದೇ ರಾಜ್ಯ ಇದು (ಪಶ್ಚಿಮ ಬಂಗಾಳ) ಎಂದು ತಿಳಿದು ನಮಗೆ ಆಶ್ಚರ್ಯವಾಗಿದೆ. ಅವರ ಬಳಿ ಯಾವುದೇ ದಾಖಲೆಗಳು ಅಥವಾ ಕಂದಾಯ ದಾಖಲೆಗಳಿಲ್ಲ. ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ಅದರ ಮೇಲೆ ಕ್ರಮ ಕೈಗೊಳ್ಳುತ್ತಿರುವಾಗ, ಅದರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮೂವರು ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಅವರನ್ನು ಅವರ ಮನೆಗಳಿಂದ ಹೊರಗೆಳೆದು ಕೊಲೆ ಮಾಡಲಾಗಿದೆ. ಇವರೆಲ್ಲಾ ಯಾರು? ಈ ಭೂಮಿಯಿಂದ ಹೆಚ್ಚಿನ ಲಾಭ ಪಡೆಯಲಿರುವವರು ಇದೇ ದಲಿತರು, ವಂಚಿತರು ಮತ್ತು ಬಡ ಹಿಂದೂಗಳು. ದಲಿತರು, ವಂಚಿತರು ಮತ್ತು ಬಡವರು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಾರೆ ಎಂಬ ಭಯ ಅವರಲ್ಲಿದೆ. ಆಗಾದರೆ ಮತಬ್ಯಾಂಕ್ ಕೊನೆಗೊಳ್ಳುತ್ತದೆ. ದಾರಿತಪ್ಪಿಸುವ ರಾಜಕೀಯಕ್ಕೆ ಕೊನೆ ಇಲ್ಲ. ಅದಕ್ಕಾಗಿಯೇ ಅವರು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.

Yogi Adityanath
ಪಶ್ಚಿಮ ಬಂಗಾಳ: ವಕ್ಫ್‌ ಪ್ರತಿಭಟನೆ ವೇಳೆ ಹಿಂಸಾಚಾರ; ಮೂವರು ಸಾವು, 118 ಮಂದಿ ಬಂಧನ; Video

ಮೂರು ವರ್ಷಗಳ ಹಿಂದೆ, ರಾಜ್ಯಸಭಾ ಸಂಸದ ಮತ್ತು ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್‌ಲಾಲ್ ಒಂದು ಪುಸ್ತಕ ಬರೆದಿದ್ದರು. ಆ ಪುಸ್ತಕವು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮತ್ತು ಸ್ವಾತಂತ್ರ್ಯದ ಕಾಲದ ಇಬ್ಬರು ಮಹಾನ್ ದಲಿತ ಯೋಧರ ತುಲನಾತ್ಮಕ ಅಧ್ಯಯನವನ್ನು ಆಧರಿಸಿದೆ. ಒಂದು ಕಡೆ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಇದ್ದರು. ಅವರು ತಮ್ಮ ಆರಂಭ ಮತ್ತು ಅಂತ್ಯವು ಭಾರತೀಯರಾಗಿರುವುದಾಗಿ ಹೇಳಿದ್ದರು. ಇನ್ನೊಂದು ಕಡೆ ಪಾಕಿಸ್ತಾನವನ್ನು ಬೆಂಬಲಿಸಿದ್ದ ಯೋಗೇಂದ್ರ ನಾಥ್ ಮಂಡಲ್ ಇದ್ದರು. ಆದರೆ ಅವರು ಅಲ್ಲಿ ಒಂದು ವರ್ಷವೂ ವಾಸಿಸಲು ಸಾಧ್ಯವಾಗಲಿಲ್ಲ. ಯೋಗೇಂದ್ರ ನಾಥ್ ಮಂಡಲ್ ಅವರ ಕೃತ್ಯಗಳಿಗೆ ಬಾಂಗ್ಲಾದೇಶಿ ಹಿಂದೂಗಳು ಇನ್ನೂ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ವಾಸಿಸುವ ಎಲ್ಲಾ ಚಿತ್ರಹಿಂಸೆಗೊಳಗಾದ ಮತ್ತು ತುಳಿತಕ್ಕೊಳಗಾದ ಹಿಂದೂಗಳು ದಲಿತರು. ಕಾಂಗ್ರೆಸ್, ಎಸ್‌ಪಿ ಮತ್ತು ಮಮತಾ ಬ್ಯಾನರ್ಜಿ ಅವರ ಪಕ್ಷದಿಂದ ಯಾವುದೇ ರಾಜಕೀಯ ಪಕ್ಷವು ತಮ್ಮ (ಬಾಂಗ್ಲಾದೇಶಿ ಹಿಂದೂಗಳು) ಪರವಾಗಿ ಧ್ವನಿ ಎತ್ತಲಿಲ್ಲ. ಬಿಜೆಪಿ ಮಾತ್ರ ಅವರ ಪರವಾಗಿ ಧ್ವನಿ ಎತ್ತಿತು. ನಾವು ಪ್ರತಿಯೊಬ್ಬ ಹಿಂದೂವನ್ನು ರಕ್ಷಿಸಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com