ಪಹಲ್ಗಾಮ್ ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಏಕೆ ಇರಲಿಲ್ಲ?: ಪ್ರತಿಪಕ್ಷಗಳ ಪ್ರಶ್ನೆಗೆ ಕೇಂದ್ರದ ಉತ್ತರ ಇದು....

ದಾಳಿಯ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ಏಕೆ ನಿಯೋಜಿಸಲಾಗಿಲ್ಲ ಎಂದು ಪ್ರತಿಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಜೂನ್‌ನಲ್ಲಿ ಪ್ರಾರಂಭವಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ಮುಂಚಿತವಾಗಿ ಬೈಸರನ್ ಪ್ರದೇಶವನ್ನು ವಾಡಿಕೆಯಂತೆ ಭದ್ರತೆಗೆ ಒಳಪಡಿಸಲಾಗುತ್ತದೆ
Parliament building
ಸಂಸತ್ ಭವನPTI
Updated on

ನವದೆಹಲಿ: ಗುರುವಾರ ಸಂಜೆ ನಡೆದ ಸರ್ವಪಕ್ಷ ಸಭೆಯ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ತೀಕ್ಷ್ಣವಾದ ಪ್ರಶ್ನೆಗಳನ್ನು ಎತ್ತಿರುವ ಅಂಶ ಈಗ ಬಹಿರಂಗವಾಗಿದೆ.

ಸಭೆಯಲ್ಲಿ ವಿರೋಧ ಪಕ್ಷದ ಪರಿಶೀಲನೆಯು ಪ್ರಾಥಮಿಕವಾಗಿ ದಾಳಿ ನಡೆದ ಪಹಲ್ಗಾಮ್ ಬಳಿಯ ಪ್ರವಾಸಿ ಹುಲ್ಲುಗಾವಲು ಬೈಸರನ್‌ನಲ್ಲಿ ಭದ್ರತಾ ಪಡೆಗಳು ಅನುಪಸ್ಥಿತಿಯ ಮೇಲೆ ಕೇಂದ್ರೀಕೃತವಾಗಿತ್ತು. ಈ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಧಿಕೃತವಾಗಿ ಎತ್ತಿದರು ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಸೇರಿದಂತೆ ಪ್ರಶ್ನೆಗೆ ಬೆಂಬಲ ಸೂಚಿಸಿದರು.

ದಾಳಿಯ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ಏಕೆ ನಿಯೋಜಿಸಲಾಗಿಲ್ಲ ಎಂದು ಪ್ರತಿಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಜೂನ್‌ನಲ್ಲಿ ಪ್ರಾರಂಭವಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ಮುಂಚಿತವಾಗಿ ಬೈಸರನ್ ಪ್ರದೇಶವನ್ನು ವಾಡಿಕೆಯಂತೆ ಭದ್ರತೆಗೆ ಒಳಪಡಿಸಲಾಗುತ್ತದೆ ಎಂದು ಸರ್ಕಾರ ವಿವರಿಸಿದೆ. ನಂತರ ಮಾರ್ಗವನ್ನು ಅಧಿಕೃತವಾಗಿ ತೆರೆಯಲಾಗುತ್ತದೆ ಮತ್ತು ಅಮರನಾಥ ಗುಹೆ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಬೈಸರನ್‌ನಲ್ಲಿ ವಿಶ್ರಾಂತಿ ಪಡೆಯುವ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತದೆ. ಆದರೆ ಇದಕ್ಕೂ ಮೊದಲೇ ಅಂದರೆ

ಏಪ್ರಿಲ್ 20 ರಿಂದಲೇ ಸ್ಥಳೀಯ ಪ್ರವಾಸ ನಿರ್ವಾಹಕರು ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಪ್ರಾರಂಭಿಸಿದರು. ಯಾತ್ರಾ ಋತುವಿಗೆ ಭದ್ರತಾ ಉಪಕರಣಗಳನ್ನು ಸಜ್ಜುಗೊಳಿಸುವ ಮೊದಲೇ ಅಲ್ಲಿಗೆ ಪ್ರವಾಸಿಗರನ್ನು ಸ್ಥಳೀಯರು ಕರೆದೊಯ್ದರು ಸರ್ಕಾರಿ ಪ್ರತಿನಿಧಿಗಳು, ಪ್ರವಾಸಿ ಭೇಟಿಗಳನ್ನು ಮೊದಲೇ ಪ್ರಾರಂಭಿಸುವ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿಲ್ಲ ಆದ್ದರಿಂದ ಯಾವುದೇ ಪಡೆಗಳ ನಿಯೋಜನೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Parliament building
ಪಾಕಿಸ್ತಾನಕ್ಕೆ ಸ್ಥಗಿತಗೊಳಿಸಿದ್ದರಿಂದ ಬರುವ ಹೆಚ್ಚುವರಿ ನೀರನ್ನು ನಾವೆಲ್ಲಿ ಹಿಡಿದಿಟ್ಟುಕೊಳ್ಳೋದು?: ಓವೈಸಿ ಪ್ರಶ್ನೆ

ಭಾರತದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯದ ಕೊರತೆಯಿದ್ದರೆ, ಕೇಂದ್ರವು ಸಿಂಧೂ ಜಲ ಒಪ್ಪಂದವನ್ನು ಏಕೆ ಸ್ಥಗಿತಗೊಳಿಸಿತು ಎಂಬುದು ಪ್ರತಿಪಕ್ಷಗಳು ಎತ್ತಿದ ಮತ್ತೊಂದು ಪ್ರಶ್ನೆಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಧಿಕಾರಿಗಳು, ಈ ಕ್ರಮವು ತಕ್ಷಣದ ಫಲಿತಾಂಶಗಳ ಬಗ್ಗೆ ಅಲ್ಲ, ಬದಲಾಗಿ ಕಾರ್ಯತಂತ್ರದ ಸೂಚನೆಯಾಗಿದೆ ಎಂದು ಹೇಳಿದರು.

"ಕಠಿಣ ಕ್ರಮ ತೆಗೆದುಕೊಳ್ಳುವ ಸರ್ಕಾರದ ಉದ್ದೇಶವನ್ನು ತೋರಿಸಲು ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ. ಬಲವಾದ ಸಂದೇಶವನ್ನು ನೀಡಲು ಇದನ್ನು ಮಾಡಲಾಗಿದೆ. ಈ ನಿರ್ಧಾರವು ಭವಿಷ್ಯದಲ್ಲಿ ಸರ್ಕಾರದ ನಿಲುವು ಏನೆಂದು ಹೇಳುತ್ತದೆ" ಎಂದು ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com