Pahalgam terror attack: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮತ್ತೆ CCS ಸಭೆ

ಭದ್ರತಾ ಕುರಿತ ಸಂಪುಟ ಸಮಿತಿ (CCS) ಕೊನೆಯದಾಗಿ ಏಪ್ರಿಲ್ 23 ರಂದು ಸಭೆ ಸೇರಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕರು ಮೃತಪಟ್ಟ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿವರವಾಗಿ ವಿವರಿಸಲಾಯಿತು.
PM Modi meeting
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಭದ್ರತೆ ಕುರಿತ ಸಂಪುಟ ಸಮಿತಿ (CCS) ಸಭೆ ಕರೆದಿದ್ದಾರೆ. ಇಂದು ಬುಧವಾರ ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ (CCPA), ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ (CCEA) ಮತ್ತು ಪೂರ್ಣ ಸಂಪುಟ ಸಭೆ ನಡೆಯಲಿದೆ.

ಪಹಲ್ಗಾಮ್ ದಾಳಿಯ ನಂತರ ಎರಡನೇ ಬಾರಿಗೆ ಸಭೆ ಸೇರಿದ ಸಿಸಿಎಸ್, ಪಹಲ್ಗಾಮ್ ಘಟನೆಯ ನಂತರ ಭದ್ರತಾ ಸಿದ್ಧತೆಯ ಬಗ್ಗೆ ಚರ್ಚಿಸಲಿದೆ.

ಭದ್ರತಾ ಕುರಿತ ಸಂಪುಟ ಸಮಿತಿ (CCS) ಕೊನೆಯದಾಗಿ ಏಪ್ರಿಲ್ 23 ರಂದು ಸಭೆ ಸೇರಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕರು ಮೃತಪಟ್ಟ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿವರವಾಗಿ ವಿವರಿಸಲಾಯಿತು.

PM Modi meeting
Pahalgam Terror Attack: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ CCPA ಸಭೆ, ಏನಿದರ ಮಹತ್ವ?

ಸಿಸಿಎಸ್‌ಗೆ ನೀಡಿದ ವಿವರಣೆಯಲ್ಲಿ, ಗಡಿಯಾಚೆಗಿನ ಸಂಪರ್ಕದಿಂದ, ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ಯಶಸ್ವಿಯಾಗಿ ನಡೆದ ನಂತರ ಮತ್ತು ಕಾಶ್ಮೀರದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಅದರ ಸ್ಥಿರ ಪ್ರಗತಿಯ ಹಿನ್ನೆಲೆಯಲ್ಲಿ ಭಯೋತ್ಪಾದಕರು ಕುಕೃತ್ಯ ನಡೆಸಿದ್ದಾರೆ ಎನ್ನಲಾಯಿತು.

ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ಬಲವಾದ ಸಂದೇಶವಾಗಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಸರ್ಕಾರ ಘೋಷಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com