ಚುನಾವಣಾ ಅಧಿಕಾರಿಗಳು ತಮ್ಮ ತಪ್ಪಿಗೆ ನನ್ನನ್ನು ದೂಷಿಸುತ್ತಿದ್ದಾರೆ: ತೇಜಸ್ವಿ ಯಾದವ್

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಳೆದ ವಾರ ತಮಗೆ ಕಳುಹಿಸಲಾದ ನೋಟಿಸ್‌ಗೆ "ತಕ್ಕ ಉತ್ತರ" ನೀಡುತ್ತೇನೆ ಎಂದು ಹೇಳಿದ್ದಾರೆ.
Tejashwi yadav
ತೇಜಸ್ವಿ ಯಾದವ್
Updated on

ಪಾಟ್ನಾ: ಚುನಾವಣಾ ಅಧಿಕಾರಿಗಳು ಎರಡು ಎಪಿಕ್ ಸಂಖ್ಯೆಗಳನ್ನು ಹೊಂದಿರುವ ಬಗ್ಗೆ ನೋಟಿಸ್ ನೀಡುವ ಮೂಲಕ ತಮ್ಮ "ಸ್ವತಃ ತಪ್ಪಿಗೆ" ನನ್ನನ್ನು ದೂಷಿಸುತ್ತಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಹೇಳಿದ್ದಾರೆ.

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಳೆದ ವಾರ ತಮಗೆ ಕಳುಹಿಸಲಾದ ನೋಟಿಸ್‌ಗೆ "ತಕ್ಕ ಉತ್ತರ" ನೀಡುತ್ತೇನೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ನೋಟಿಸ್ ನೀಡರುವ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್ ಅವರು, "ನನಗೆ ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್ ಬಂದಿಲ್ಲ. ಪಾಟ್ನಾ ಜಿಲ್ಲಾಡಳಿತದಿಂದ ನೋಟಿಸ್ ಬಂದಿದೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ನನ್ನ ಉತ್ತರ ಸ್ವೀಕರಿಸಿದ ನಂತರ, ಅವರಿಗೆ ಹೇಳಲು ಏನೂ ಇರುವುದಿಲ್ಲ ಎಂದಿದ್ದಾರೆ.

Tejashwi yadav
ಬಿಹಾರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ: ತೇಜಸ್ವಿ ಯಾದವ್

ಚುನಾವಣಾ ಅಧಿಕಾರಿಗಳು ತಮ್ಮ ಸ್ವಂತ ತಪ್ಪಿಗೆ ನನ್ನನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಹೆಸರಿನಲ್ಲಿ ಎರಡು ಎಪಿಕ್ ಸಂಖ್ಯೆಗಳನ್ನು ನೀಡಿದ್ದರೆ ಅದು ಯಾರ ತಪ್ಪು? ಅದು ಅವರ ತಪ್ಪು. ನಾನು ಒಂದೇ ಸ್ಥಳದಲ್ಲಿ ನನ್ನ ಮತವನ್ನು ಚಲಾಯಿಸುತ್ತಿದ್ದೇನೆ" ಎಂದು ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಭಾಗವಾಗಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಇತರ ಅನೇಕ ಶ್ರೀಮಂತ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಯಾದವ್ ಆರೋಪಿಸಿದ್ದರು. ಅಲ್ಲದೆ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com