IAS ಅಧಿಕಾರಿಯಿಂದ ಕಿರುಕುಳ, ಅನುಚಿತ ವರ್ತನೆ: ಸ್ವತಂತ್ರ ತನಿಖೆಗೆ UP ಮಹಿಳಾ ಅಧಿಕಾರಿಗಳ ಆಗ್ರಹ

ಮಹಿಳಾ ಅಧಿಕಾರಿಗಳ ಗುಂಪೊಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದೆ.
Yogi Adityanath
ಯೋಗಿ ಆದಿತ್ಯನಾಥ್
Updated on

ಲಖನೌ: 2018 ರ ಬ್ಯಾಚ್‌ನ ಐಎಎಸ್ ಅಧಿಕಾರಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಅವರ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗಳ ಗುಂಪೊಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದೆ.

ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಪ್ರಸ್ತುತ ಉತ್ತರ ಪ್ರದೇಶ ರಾಜ್ಯ ತೆರಿಗೆ ಇಲಾಖೆ(ಜಿಎಸ್‌ಟಿ)ಯ ನೋಯ್ಡಾ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ಮಹಿಳಾ ಸಿಬ್ಬಂದಿಯೊಂದಿಗೆ ನಿರಂತರ ಅನುಚಿತ ವರ್ತನೆ ಮತ್ತು ಅಧಿಕಾರ ದುರುಪಯೋಗದ ಆರೋಪ ಕೇಳಿ ಬಂದಿದೆ.

ಆಗಸ್ಟ್ 5, 2025 ರಂದು ಬರೆದ ಲಿಖಿತ ದೂರು, ಐಎಎಸ್ ಅಧಿಕಾರಿ ನೋಯ್ಡಾ ವಲಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಕಿರುಕುಳದ ಘಟನೆಗಳ ಸರಣಿಯನ್ನು ವಿವರಿಸುತ್ತದೆ.

ದೂರಿನ ಪ್ರಕಾರ, ಐಎಎಸ್ ಅಧಿಕಾರಿ ಮಹಿಳಾ ಅಧಿಕಾರಿಗಳನ್ನು ಗಂಟೆಗಟ್ಟಲೆ ದಿಟ್ಟಿಸಿ ನೋಡುತ್ತಲೇ ಇರುತ್ತಾರೆ. ಆಗಾಗ್ಗೆ ಅವರನ್ನು ಅನಗತ್ಯವಾಗಿ ತಮ್ಮ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಅಥವಾ ನಿಲ್ಲುವಂತೆ ಮಾಡುತ್ತಾರೆ. ಅವರು ಮಹಿಳಾ ಸಿಬ್ಬಂದಿಗೆ ತಡರಾತ್ರಿಯವರೆಗೆ ಪದೇ ಪದೇ ವಿಡಿಯೋ ಕರೆಗಳನ್ನು ಮಾಡುತ್ತಾರೆ ಮತ್ತು ನಿಂದನೀಯ ಹಾಗೂ ಬೆದರಿಕೆ ಭಾಷೆಯನ್ನು ಬಳಸುತ್ತಾರೆ ಎಂಬ ಆರೋಪವೂ ಇದೆ. ಇದರಲ್ಲಿ "ನೀವು ಆದೇಶಗಳನ್ನು ಪಾಲಿಸದಿದ್ದರೆ, ನಾನು ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತೇನೆ. ನಂತರ ನೀವು ಭಿಕ್ಷಾ ಪಾತ್ರೆಯೊಂದಿಗೆ ತಿರುಗಾಡುವಂತೆ ಮಾಡುತ್ತೇನೆ" ಎಂಬಂತಹ ಹೇಳಿಕೆಗಳು ಸೇರಿವೆ.

Yogi Adityanath
ಉತ್ತರ ಪ್ರದೇಶ: ಪತ್ರಕರ್ತನ ಹತ್ಯೆ; ಎನ್ ಕೌಂಟರ್ ನಲ್ಲಿ ಇಬ್ಬರು ವಾಟೆಂಡ್ ಕ್ರಿಮಿನಲ್ ಗಳ ಫಿನಿಶ್!

ಮಹಿಳಾ ಅಧಿಕಾರಿಗಳು ಕಚೇರಿಯಲ್ಲಿ ತಮ್ಮ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾರೆ ಎಂದು ಸಹ ಆರೋಪಿಸಿದ್ದಾರೆ. ದೂರಿನಲ್ಲಿ, ಆ ಅಧಿಕಾರಿ ಭಿನ್ನಾಭಿಪ್ರಾಯ ಹೊಂದಿರುವ ಅಧಿಕಾರಿಗಳನ್ನು ನಿರ್ಲಕ್ಷ್ಯ ಅಥವಾ ಮಾಹಿತಿ ಸೋರಿಕೆಯಂತಹ ಸುಳ್ಳು ಆರೋಪಗಳಲ್ಲಿ ಸಿಲುಕಿಸುವ ಮೂಲಕ ಶಿಕ್ಷಿಸುತ್ತಿದ್ದಾರೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಐಎಎಸ್ ಅಧಿಕಾರಿ ಕಚೇರಿಯಲ್ಲಿ ಭಯ ಮತ್ತು ಅಧೀನತೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಆಕ್ಷೇಪಿಸಿದ ಯಾವುದೇ ಮಹಿಳಾ ಅಧಿಕಾರಿಯನ್ನು ಅಮಾನತು ಅಥವಾ ಶಿಸ್ತು ಕ್ರಮದ ಬೆದರಿಕೆ ಹಾಕುತ್ತಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರತಿಯನ್ನು ಮುಖ್ಯಮಂತ್ರಿಗೆ ಮಾತ್ರವಲ್ಲದೆ ರಾಜ್ಯಪಾಲ ಆನಂದಿಬೆನ್ ಪಟೇಲ್, ಯುಪಿ ರಾಜ್ಯ ಮಹಿಳಾ ಆಯೋಗ, ಯುಪಿ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಸಿಎಂ ಕಚೇರಿ), ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ರಾಜ್ಯ ತೆರಿಗೆ ಇಲಾಖೆ) ಮತ್ತು ಲಖನೌ ರಾಜ್ಯ ತೆರಿಗೆ ಆಯುಕ್ತರಿಗೂ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com