ಸಂಚಾರ್ ಸಾಥಿಯಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಆದೇಶ ವಾಪಸ್: ಸಚಿವ ಸಿಂಧಿಯಾ

ಸಾಧನಗಳಲ್ಲಿ ಅಪ್ಲಿಕೇಶನ್ ಸ್ಥಾಪನೆಗೆ ಸಂಬಂಧಿಸಿದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಾಗಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು.
Union Minister Jyotiraditya Scindia speaks during the Winter Session of Parliament
ಜ್ಯೋತಿರಾದಿತ್ಯ ಸಿಂಧಿಯಾ online desk
Updated on

ನವದೆಹಲಿ: ಸಂಚಾರ್ ಸಾಥಿ ಅಪ್ಲಿಕೇಶನ್ ಕುರಿತು ಗೌಪ್ಯತೆ ಕಳವಳಗಳ ನಡುವೆ, ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ, ಸ್ನೂಪಿಂಗ್ (ಗೂಢಚಾರಿಕೆ) ಸಾಧ್ಯವಿಲ್ಲ ಅಥವಾ ಅಪ್ಲಿಕೇಶನ್‌ನಿಂದಲೂ ಅದು ಸಂಭವಿಸುವುದಿಲ್ಲ ಎಂದು ಪ್ರತಿಪಾದಿಸಿದರು.

ಸಂಚಾರ್ ಸಾಥಿ ಅಪ್ಲಿಕೇಶನ್ ಬಗ್ಗೆ ವ್ಯಾಪಕ ವಿರೋಧ ಮತ್ತು ಗೌಪ್ಯತೆ ಕಾಳಜಿಯ ನಡುವೆ, ಕೇಂದ್ರ ಬುಧವಾರ ದೇಶದ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ನ್ನು ಪ್ರೀ ಇನ್ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸುವ ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ.

ಸಾಧನಗಳಲ್ಲಿ ಅಪ್ಲಿಕೇಶನ್ ಸ್ಥಾಪನೆಗೆ ಸಂಬಂಧಿಸಿದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸಿದ್ಧವಾಗಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು.

ಸಂಚಾರ್ ಸಾಥಿ ಅಪ್ಲಿಕೇಶನ್ ನಲ್ಲಿ ಸ್ನೂಪಿಂಗ್ ಸಂಭವವೂ ಇಲ್ಲ ಸ್ನೂಪಿಂಗ್ ನಡೆಯುವುದೂ ಇಲ್ಲ" ಎಂದು ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರ ಅಪ್ಲಿಕೇಶನ್‌ಗೆ ಸಂಬಂಧಿಸಿದ ಸ್ನೂಪಿಂಗ್ ಕಳವಳಗಳ ಕುರಿತು ಪೂರಕ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಅವರು ಹೇಳಿದರು.

Union Minister Jyotiraditya Scindia speaks during the Winter Session of Parliament
Watch | Sanchar Saathi ಆ್ಯಪ್ ಕಡ್ಡಾಯವೇ? ಸಚಿವ ಸಿಂಧಿಯಾ ಹೇಳಿದ್ದಿಷ್ಟು...

ನವೆಂಬರ್ 28 ರಂದು ಸಚಿವಾಲಯದ ಆದೇಶ, ಎಲ್ಲಾ ಮೊಬೈಲ್ ಫೋನ್ ತಯಾರಕರು ಸಾಫ್ಟ್‌ವೇರ್ ನವೀಕರಣದ ಮೂಲಕ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹ್ಯಾಂಡ್‌ಸೆಟ್‌ಗಳಲ್ಲಿ ಮತ್ತು ಅಸ್ತಿತ್ವದಲ್ಲಿರುವ ಸಾಧನಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರೀ ಇನ್ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಬಳಕೆದಾರರು ಅಪ್ಲಿಕೇಶನ್ ನ್ನು ಬಳಸಲು ಬಯಸದಿದ್ದರೆ ಅದನ್ನು ಅಳಿಸಲು ಮುಕ್ತರಾಗಿದ್ದಾರೆ ಎಂದು ಸಿಂಧಿಯಾ ಹೇಳಿದರು.

ಸಂಭಾವ್ಯ ಸ್ನೂಪಿಂಗ್ ಬಗ್ಗೆ ಮತ್ತು ಬಳಕೆದಾರರು ವಿನಿಮಯ ಮಾಡಿಕೊಳ್ಳುವ ಸಂದೇಶಗಳನ್ನು ಓದಲು ಈ ಅಪ್ಲಿಕೇಶನ್ ನ್ನು ಬಳಸಬಹುದು ಎಂಬ ಕಳವಳ ವ್ಯಕ್ತವಾಗಿದೆ.

ಈ ಅಪ್ಲಿಕೇಶನ್ ಜನರ ರಕ್ಷಣೆಗಾಗಿ ಎಂದು ಪ್ರತಿಪಾದಿಸಿದ ಸಿಂಧಿಯಾ, ಸರ್ಕಾರ ಗ್ರಾಹಕರಿಗೆ ಆಯ್ಕೆಗಳನ್ನು ನೀಡಲು ಬಯಸುತ್ತದೆ ಎಂದು ಲೋಕಸಭೆಗೆ ತಿಳಿಸಿದರು.

ಗ್ರಾಹಕರು ಅಪ್ಲಿಕೇಶನ್‌ನಲ್ಲಿ ನೋಂದಾಯಿಸದಿದ್ದರೆ, ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ ಮತ್ತು ಗ್ರಾಹಕರು ಅಪ್ಲಿಕೇಶನ್ ನ್ನು ಅಳಿಸಬಹುದು ಎಂದು ಅವರು ಹೇಳಿದ್ದಾರೆ. ಈ ವರೆಗೂ ಸುಮಾರು 1.5 ಕೋಟಿ ಸಂಚಾರ್ ಸಾಥಿ ಅಪ್ಲಿಕೇಶನ್ ಡೌನ್‌ಲೋಡ್‌ಗಳಾಗಿವೆ.

‌‌ಸಂಚಾರ್ ಸಾಥಿ ಪೋರ್ಟಲ್ ಮತ್ತು ಅಪ್ಲಿಕೇಶನ್‌ನೊಂದಿಗೆ, 26 ಲಕ್ಷ ಕದ್ದ ಹ್ಯಾಂಡ್‌ಸೆಟ್‌ಗಳನ್ನು ಪತ್ತೆಹಚ್ಚಲಾಗಿದೆ, 7 ಲಕ್ಷ ಕದ್ದ ಹ್ಯಾಂಡ್‌ಸೆಟ್‌ಗಳನ್ನು ಗ್ರಾಹಕರಿಗೆ ಹಿಂತಿರುಗಿಸಲಾಗಿದೆ, 41 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು 6 ಲಕ್ಷ ವಂಚನೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವರು ಹೇಳಿದರು.

Union Minister Jyotiraditya Scindia speaks during the Winter Session of Parliament
ಮೊಬೈಲ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್‌ ಅಳವಡಿಕೆ ಕಡ್ಡಾಯ: ಸರ್ವಾಧಿಕಾರ ರಾಷ್ಟ್ರವನ್ನಾಗಿಸುವ ಹುನ್ನಾರ; ಪ್ರಿಯಾಂಕಾ ಆಕ್ರೋಶ

ಸಚಿವಾಲಯದ ಆದೇಶ ಮೊಬೈಲ್ ಫೋನ್ ಕಂಪನಿಗಳು ಮೊದಲೇ ಸ್ಥಾಪಿಸಲಾದ ಸಂಚಾರ್ ಸಾಥಿ ಅಪ್ಲಿಕೇಶನ್ ಮೊದಲ ಬಳಕೆ ಅಥವಾ ಸಾಧನ ಸೆಟಪ್ ಸಮಯದಲ್ಲಿ ಅಂತಿಮ ಬಳಕೆದಾರರಿಗೆ ಸುಲಭವಾಗಿ ಗೋಚರಿಸುತ್ತದೆ ಮತ್ತು ಪ್ರವೇಶಿಸಬಹುದಾಗಿದೆ ಮತ್ತು ಅದರ ಕಾರ್ಯಗಳನ್ನು ನಿಷ್ಕ್ರಿಯಗೊಳಿಸಲಾಗಿಲ್ಲ ಅಥವಾ ನಿರ್ಬಂಧಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com